ಲೇಟಾದರೂ, ನೀಟಾಗಿ ಲ್ಯಾಂಡ್‌ ಆಗ್ತೀನಿ …

ಅಜೇಯ್‌ ವಿಜಯದ ಕನಸು

Team Udayavani, Jul 26, 2019, 5:00 AM IST

m-21

“ಕೆಲವೊಂದು ಸಲ ಬ್ಯಾಟ್ಸ್‌ಮನ್‌ ಔಟ್‌ ಆಗಲ್ಲ. ಆದರೆ, ಆ ಮ್ಯಾಚ್‌ ಕಂಪ್ಲೀಟ್‌ ಆಗಿರುತ್ತೆ…’
– ಅಜೇಯ್‌ರಾವ್‌ ಹೀಗೆ ಹೇಳಿ ಹಾಗೊಂದು ಸ್ಮೈಲ್‌ ಕೊಟ್ಟರು. ಅವರು ಹೇಳಿಕೊಂಡಿದ್ದು ತಮ್ಮ ಸಿನಿ ಮ್ಯಾಚ್‌ ಫ‌ಲಿತಾಂಶದ ಬಗ್ಗೆ. ಸಿನಿಮಾ ಎಂಬ ಮ್ಯಾಚ್‌ನಲ್ಲಿ ಅವರೊಬ್ಬ ಬ್ಯಾಟ್ಸ್‌ಮನ್‌ ಅಂದುಕೊಂಡರೆ ತಪ್ಪಿಲ್ಲ. ಹೌದು, ಅಜೇಯ್‌ರಾವ್‌ ಅವರ ಬಹುತೇಕ ಗೆಳೆಯರು, “ಅಜೇಯ್‌ ಸಿನಿಮಾ ಫೇಲ್‌ ಆದರೂ, ಅಜೇಯ್‌ ಫೇಲ್‌ ಆಗಲ್ಲ. ಅವರೊಂಥರಾ ಕ್ರಿಕೆಟ್‌ ರಂಗದ ವಾಲ್‌ ಇದ್ದಂಗೆ. ಆ ಕಡೆ ಸಿಕ್ಸರ್‌ ಬಾರಿಸಲ್ಲ. ಈ ಕಡೆ ಬೌಂಡರಿಯೂ ಬಾರಿಸದೆ ಔಟ್‌ ಆಗದ ಬ್ಯಾಟ್ಸ್‌ಮನ್‌’ ಅಂತ ಆಗಾಗ ಹೇಳುತ್ತಿರುತ್ತಾರಂತೆ. ಗೆಳೆಯರ ಮಾತಿಗೆ ಧ್ವನಿಯಾಗುವ ಅಜೇಯ್‌, “ಸ್ಕೋರ್‌ ಮಾಡುವ ಆಸೆಯಂತೂ ಇದೆ. ಒಂದಲ್ಲ ಒಂದು ದಿನ ಮತ್ತೆ ಸೆಂಚುರಿ ಬಾರಿಸುವ ಆಶಾಭಾವನೆಯಲ್ಲೇ ಬ್ಯಾಟ್‌ ಹಿಡಿದು ನಿಂತಿದ್ದೇನೆ. ಒಮ್ಮೊಮ್ಮೆ ಸೋಲು ಸಾಮಾನ್ಯ. ಆದರೆ ಗೆಲುವಿಗೆ ನಿರಂತರ ಪ್ರಯತ್ನ ಇದ್ದೇ ಇರುತ್ತೆ’ ಎಂದು ತಮ್ಮ ವೃತ್ತಿಬದುಕಿನ ಸೋಲು-ಗೆಲುವಿನ ಕುರಿತು ಹೇಳುತ್ತಾರೆ.

ಸಿನಿಮಾರಂಗ ಮಾತ್ರವಲ್ಲ, ಇತರೆ ಕ್ಷೇತ್ರಗಳಲ್ಲಿ ಯಾರು ಸೋತಿಲ್ಲ ಹೇಳಿ? ಅಜೇಯ್‌ ಕೂಡ ಗೆದ್ದು ಸೋತಿದ್ದಾರೆ. ಪ್ರತಿ ಚಿತ್ರದಲ್ಲೂ ಗೆಲ್ಲಬೇಕೆಂಬ ನಂಬಿಕೆಯಲ್ಲೇ ಕೆಲಸ ಮಾಡುತ್ತಾರೆ. ಆದರೆ, ನಸೀಬು ಅನ್ನೋದು ಅಷ್ಟೇ ಮುಖ್ಯ. ಈಗ ಅಂಥದ್ದೊಂದು ಬಲವಾದ ಅದೃಷ್ಟ ನಂಬಿ ಹೊರಟಿರುವ ಅಜೇಯ್‌ ಮೊಗದಲ್ಲಿ ಮಂದಹಾಸವಿದೆ. ಕಾರಣ, ಕೈಯಲ್ಲಿ ಎರಡು ಚಿತ್ರಗಳಿವೆ. ಆ ಎರಡೂ ಸಿನಿಮಾಗಳು ಅಜೇಯ್‌ ಸಿನಿಕೆರಿಯರ್‌ನಲ್ಲಿ ಹೊಸಬಗೆಯ ಚಿತ್ರಗಳು ಎಂಬುದು ವಿಶೇಷ. ಆ ಕುರಿತು ಅಜೇಯ್‌ ಹೇಳುವುದಿಷ್ಟು. “ಪ್ರತಿ ಸ್ಕ್ರಿಪ್ಟ್ ಮೇಲೂ ನಂಬಿಕೆ ಸಹಜ. ಎಲ್ಲದರಲ್ಲೂ ಪ್ರಾಮಾಣಿಕ ಪ್ರಯತ್ನ ಇದ್ದೇ ಇರುತ್ತೆ. ಈಗ ಇದೇ ಮೊದಲ ಬಾರಿಗೆ ನಾನು ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಕೃಷ್ಣ ಟಾಕೀಸ್‌’ ಚಿತ್ರ ಮಾಡುತ್ತಿದ್ದೇನೆ. ಶೇ.80 ರಷ್ಟು ಮುಗಿದಿದೆ. ಇದಾದ ಬಳಿಕ, ಕಿಸ್ಟಲ್‌ ಪಾರ್ಕ್‌ ಬ್ಯಾನರ್‌ನಲ್ಲಿ ಚಂದ್ರಶೇಖರ್‌ ನಿರ್ಮಾಣದ ಪಕ್ಕಾ ಕಾಮಿಡಿ ಸಿನಿಮಾದಲ್ಲಿ ಮಾಡುತ್ತಿದ್ದೇನೆ. ಅದರಲ್ಲೂ ಹಳ್ಳಿ ಸೊಗಡಿನ, ಮಂಡ್ಯ ಭಾಷೆಯೇ ತುಂಬಿರುವ ಚಿತ್ರವದು. ಈ ಎರಡು ಚಿತ್ರಗಳು ನನಗೆ ಹೊಸ ಜಾನರ್‌’ ಎಂದು ವಿವರ ಕೊಡುತ್ತಾರೆ.

ಟಾಕೀಸ್‌ ಜೊತೆಗಿನ ಸಂಬಂಧ…
ಎಲ್ಲಾ ಸರಿ, ಅಜೇಯ್‌ರಾವ್‌ ಅವರ ಇತ್ತೀಚಿನ ಕೆಲ ಚಿತ್ರಗಳನ್ನು ಗಮನಿಸಿದರೆ, ಎಲ್ಲವೂ “ಕೃಷ್ಣ’ ಸೀಕ್ವಲ್‌ ಶೀರ್ಷಿಕೆಯನ್ನೇ ಹೊತ್ತು ಬಂದಿವೆ. “ಕಷ್ಟನ್‌ ಲವ್‌ಸ್ಟೋರಿ’, “ಕೃಷ್ಣನ್‌ ಮ್ಯಾರಜೇಜ್‌ ಸ್ಟೋರಿ’, “ಕೃಷ್ಣ ಲೀಲ’, “ಕೃಷ್ಣ ಸನ್‌ ಆಫ್ ಸಿಎಂ’ ಈಗ “ಕೃಷ್ಣ ಟಾಕೀಸ್‌’. ಈ ಬಗ್ಗೆ ಅಜೇಯ್‌ ಹೇಳಿದ್ದಿಷ್ಟು. “ನನ್ನ ಹಿಂದಿನ ಎಲ್ಲಾ ಚಿತ್ರ ನೋಡಿದರೆ, ಆನ್‌ಸ್ಕ್ರೀನ್‌ ನಲ್ಲಿ ಕೃಷ್ಣ ಎಂಬ ಹೆಸರಿರುತ್ತೆ ಅಥವಾ ಅಜೇಯ್‌ ಅಂತ ಹೆಸರಿರುತ್ತೆ. ಆದರೆ, “ಕೃಷ್ಣ ಟಾಕೀಸ್‌’ ಚಿತ್ರದಲ್ಲಿ ನನ್ನ ಹೆಸರು ಕೃಷ್ಣ ಅಲ್ಲ. ಅಲ್ಲಿ ಅಜೇಯ್‌ ಹೆಸರಿನ ಪಾತ್ರ ಮಾಡಿದ್ದೇನೆ. ಔಟ್‌ ಅಂಡ್‌ ಔಟ್‌ ಥ್ರಿಲ್ಲರ್‌ ಚಿತ್ರ ಆಗಿರುವುದರಿಂದ, ಅಲ್ಲಿ ನಾನು ಪತ್ರಕರ್ತನ ಪಾತ್ರ ಮಾಡುತ್ತಿದ್ದೇನೆ. ಆ ಹೀರೋಗೂ, ಒಂದು ಟಾಕೀಸ್‌ ನಡುವೆ ಇರುವ ಸಂಬಂಧದ ಕಥೆಯೇ ಇದು. ಇದೇ ಮೊದಲ ಸಲ ನಾನು ಜರ್ನಲಿಸ್ಟ್‌ ಪಾತ್ರ ಮಾಡುತ್ತಿದ್ದೇನೆ ಎಂದು ವಿವರಿಸುತ್ತಾರೆ ಅಜೇಯ್‌.

ಬೇಸರ ಮತ್ತು ಖುಷಿ
ಅಜೇಯ್‌ ಅವರಿಗೊಂದು ಬೇಸರವಿದೆ. ಅದಕ್ಕೆ ಕಾರಣ, “ತಾಯಿಗೆ ತಕ್ಕ ಮಗ’ ಚಿತ್ರ ನಿರೀಕ್ಷೆ ಮಟ್ಟ ತಲುಪಲಿಲ್ಲ ಅನ್ನೋದು. ಮೊದಲ ಬೇಸರ, ತಾಯಿ ಸೆಂಟಿಮೆಂಟ್‌, ಬಾಂಧವ್ಯ ಕುರಿತಾದ ಚಿತ್ರಕ್ಕೆ ಸೆನ್ಸಾರ್‌ “ಎ’ ಸರ್ಟಿಫಿಕೆಟ್‌ ಕೊಟ್ಟಿದ್ದು. ಎರಡನೆಯದು ಆ ಸರ್ಟಿಫಿಕೆಟ್‌ನಿಂದಾಗಿ ಮಲ್ಟಿಪ್ಲೆಕ್ಸ್‌ಗೆ ಹಾಗೂ ನನ್ನ ಆಡಿಯನ್ಸ್‌ ಥಿಯೇಟರ್‌ಗೆ ಬರಲು ಸ್ಪೀಡ್‌ ಬ್ರೇಕರ್‌ ಆಗಿದ್ದು. ಮೂರನೆಯದು, ಹಲವರು ಕಾಲ್‌ ಮಾಡಿ,ಯಾಕೆ ಚಿತ್ರಮಂದಿರದಲ್ಲಿ ಸಿನಿಮಾ ಓಡಲಿಲ್ಲ ಅಂದಿದ್ದು. ನಿರ್ಮಾಪಕರಿಗೆ ಲಾಸ್‌ ಆಯ್ತು. ಅದು ಬೇಸರದ ವಿಷಯ. ಆದರೆ, ಕಳಪೆ ಸಿನಿಮಾ ಮಾಡಿಲ್ಲ ಎಂಬ ಸಂತಸವಿದೆ. ಒಮ್ಮೊಮ್ಮೆ ಹೀಗೆಲ್ಲಾ ಆಗುತ್ತಿರುತ್ತೆ. ಅದನ್ನೆಲ್ಲಾ ಯೋಚಿಸಿಕೊಂಡು ಕೂತರೆ, ಮುಂದೆ ಹೋಗೋಕ್ಕಾಗಲ್ಲ. ಅವಕಾಶ ಬರುತ್ತಿರುತ್ತವೆ. ಫೀಲ್ಡ್‌ನಲ್ಲಿ ಗಟ್ಟಿಯಾಗಿ ನಿಂತು, ಬ್ಯಾಟಿಂಗ್‌ ಮಾಡಬೇಕು. ಆ ಪ್ರಯತ್ನ ಆಗುತ್ತಿದೆ’ ಎಂಬುದು ಅಜೇಯ್‌ ಮಾತು.

ಲ್ಯಾಂಡ್‌ ಆಗುವ ಭರವಸೆ
ಅಜೇಯ್‌ರಾವ್‌ ಈಗ ಬದಲಾಗಿದ್ದಾರಾ? ಈ ಪ್ರಶ್ನೆಗೆ ಉತ್ತರಿಸುವ ಅವರು, “ಅಜೇಯ್‌ ಯಾವತ್ತೂ ಬದಲಾಗಲ್ಲ. ಆದರೆ, ಸಿನಿಮಾ ಆಯ್ಕೆಯಲ್ಲಿ ಬದಲಾಗಿದ್ದಾರೆ. ಈ ಬಾರಿ ಒಪ್ಪಿಕೊಂಡಿರುವ ಎರಡು ಸಿನಿಮಾಗಳು ಹೊಸ ಮಾದರಿಯಲ್ಲಿರಲಿವೆ. ಲವ್ವರ್‌ ಬಾಯ್‌ ಆಗಿ ಸಕ್ಸಸ್‌ ಕಂಡಿದ್ದೇನೆ. ಆ್ಯಕ್ಷನ್‌ ಹೀರೋ ಆಗಿಯೂ ಸೈ ಎನಿಸಿಕೊಂಡಿದ್ದೇನೆ. ಈಗ ಸಂಪೂರ್ಣ ಕಾಮಿಡಿ ಚಿತ್ರ ಒಪ್ಪಿದ್ದೇನೆ. ಚಂದ್ರಶೇಖರ್‌ ಬ್ಯಾನರ್‌ನ ಚಿತ್ರ ನನಗೆ ಹೊಸ ರೂಪ ಕೊಡುತ್ತೆ ಎಂಬ ಭರವಸೆ ಇದೆ. ಹಾಗಾಗಿ ನನ್ನ ಆಯ್ಕೆಯ ವರಸೆ ಬದಲಿಸಿಕೊಂಡಿದ್ದೇನೆ. “ತಾಯಿಗೆ ತಕ್ಕ ಮಗ’ ಸಕ್ಸಸ್‌ ಆಗಿದ್ದರೆ, ಕಮರ್ಷಿಯಲ್‌ ಹಿಟ್‌ ಎನಿಸಿದ್ದರೆ ಅದೇ ರೀತಿಯ ಸ್ಕ್ರಿಪ್ಟ್ ಬರುತ್ತಿದ್ದವು. ಕೆಲ ಕಥೆ ಬಂದರೂ, ರೆಗ್ಯುಲರ್‌ ಫಾರ್ಮೆಟ್‌ನಿಂದ ಹೊರತಾಗಿರಲಿಲ್ಲ. ನನಗೇನೂ ಅವಸರವಿಲ್ಲ. “ಚಂದ್ರಯಾನ- 2′ ಲಾಂಚ್‌ ಆದ ರೀತಿ ನಾನೂ ಸಹ ಲೇಟ್‌ ಆದರೂ ಸರಿ, ನೀಟಾಗಿ ತನ್ನ ಗುರಿ ತಲುಪಿ ಲ್ಯಾಂಡ್‌ ಆಗ್ತಿàನಿ ಎಂಬ ಭರವಸೆ ಇದೆ. ಎಷ್ಟೋ ಜನರು ಅಜೇಯ್‌ಗೆ ಕಥೆ ಒಪ್ಪಿಸೋದು ಕಷ್ಟ ಅಂತಾರೆ. ಯಾಕೆ ಹಾಗೆ ಹೇಳ್ತಾರೋ ಗೊತ್ತಿಲ್ಲ. ಕಳೆದ ಕೆಲ ವರ್ಷಗಳ ಹಿಂದೆ ನನಗೆ ಅಂತಹ ಯೋಚನೆ ಇರಲಿಲ್ಲ. ಮೆಚ್ಯುರಿಟಿ ಕಮ್ಮಿ ಇತ್ತು ಅಂದುಕೊಳ್ಳಿ. ಈಗ ಆ ಬಗ್ಗೆ ಆಳವಾಗಿ ಯೋಚಿಸುತ್ತೇನೆ. ಕಥೆ ಹೇಳುವ ನಿರ್ದೇಶಕ ಎಲ್ಲವನ್ನೂ ತಿಳಿದುಕೊಂಡಿದ್ದಾನಾ, ನಿರ್ಮಾಪಕ ಅದಕ್ಕೆ ಬೇಕಾದೆಲ್ಲವನ್ನೂ ಒದಗಿಸುತ್ತಾನಾ ಎಂಬುದನ್ನು ತಿಳಿಯುತ್ತೇನೆ. ಆಮೇಲೆ ಚಿತ್ರ ಮಾಡಬೇಕಾ, ಬೇಡವಾ ಅನ್ನೋದು ನಿರ್ಧಾರವಾಗುತ್ತೆ. ಕೆಲವೊಮ್ಮೆ ಕಮರ್ಷಿಯಲ್‌ ಮೂಲಕವೇ ಪ್ರತಿಭೆಯನ್ನು ನಿರ್ಧರಿಸಬೇಕಾಗುತ್ತೆ. ತುಂಬಾ ಪ್ಯಾಶನ್‌ ಇರುವ ನಿರ್ದೇಶಕ ಇದ್ದರೂ, ಅಷ್ಟೇ ಅದ್ಭುತವಾಗಿ ನಟಿಸುವ ನಟನಿದ್ದರೂ, ನಿರ್ಮಾಪಕ ಅದನ್ನು ಇನ್ನೊಂದು ಲೆವೆಲ್‌ಗೆ ಕೊಂಡೊಯ್ಯುವಂತಿರಬೇಕು. ಆಗಲೇ ಸಿನಿಮಾ ಎನಿಸಿಕೊಳ್ಳೋದು. ಹಾಗಾಗಿ ನಾನು ಕಥೆ ಕೇಳಿದ ಕೂಡಲೇ, ಎಕ್ಸೆ„ಟ್‌ ಆಗಿ ಕಮಿಟ್‌ ಆಗಲ್ಲ. ಅದು ಪ್ರಾಕ್ಟಿಕಲ್‌ ಆಗಿ ವರ್ಕೌಟ್‌ ಆಗುತ್ತೋ ಇಲ್ಲವೋ ಎಂಬುದನ್ನು ಗಮನಿಸುತ್ತೇನೆ’ ಎನ್ನುತ್ತಾರೆ.

ಸಮಾನತೆ ಇದ್ದರೆ ಇಂಡಸ್ಟ್ರಿ ಬ್ಯೂಟಿಫ‌ುಲ್‌
ಎಲ್ಲಾ ನಟರಿಗೂ ಇದ್ದಂತೆ ಅಜೇಯ್‌ ಅವರಿಗೂ ನಿರ್ದೇಶನ ಮೇಲೆ ಆಸೆ ಇದೆಯಾ? ಇದಕ್ಕೆ “ಖಂಡಿತ ಇದೆ. ಯಾವಾಗ ಅನ್ನೋದು ಗೊತ್ತಿಲ್ಲ. ಪ್ರತಿ ಸಲವೂ ಈ ಪ್ರಶ್ನೆ ಬಂದಾಗ, ಮುಂದಿನ ವರ್ಷ ಅಂತ ಹೇಳ್ತಾನೆ ಇರಿ¤àನಿ. ಎರಡು ಕಥೆ ತಲೆಯಲ್ಲಿದೆ. ಸದ್ಯಕ್ಕೊಂದು ಸಕ್ಸಸ್‌ ಸಿನಿಮಾ ಕೊಡಬೇಕು. ನಂತರ ನಿರ್ದೇಶನದತ್ತ ಗಮನ. ಅದು ನನ್ನ ಹೋಮ್‌ ಬ್ಯಾನರ್‌ನಲ್ಲೇ ಆಗಿರುತ್ತೆ. ಇನ್ನು, ಮುಂದಿನ ವರ್ಷ ನನ್ನ ಹೋಮ್‌ ಬ್ಯಾನರ್‌ನಲ್ಲೊಂದು ಚಿತ್ರ ಗ್ಯಾರಂಟಿ. ಹೊಸಬರಿಗೆ ಅವಕಾಶ ಕೊಡಬೇಕು. ನಟನೆ, ನಿರ್ಮಾಣ ನನ್ನದೇ ಇರುತ್ತೆ ಎಂದು ಹೇಳುವ ಅಜೇಯ್‌, ಮಲ್ಟಿಸ್ಟಾರ್‌ ಸಿನಿಮಾಗಳು ಬಂದರೆ ಚಿತ್ರರಂಗದ ಇನ್ನಷ್ಟು ಬೆಳವಣಿಗೆ ಒಳ್ಳೆಯದು. ಫ‌ಸ್ಟ್‌ ಹೀರೋ, ಸೆಕೆಂಡ್‌ ಹೀರೋ ಎಂಬ ಕಾನ್ಸೆಪ್ಟ್ ಹೋಗಬೇಕು. ಒಟ್ಟಿಗೆ ನಟಿಸುವ ಸಂಸ್ಕೃತಿ ಹೆಚ್ಚಬೇಕು. ಇಲ್ಲಿ ಎಲ್ಲವೂ ಸಮಾನವಾಗಿ ಅಭಿವೃದ್ಧಿಯಾಗಬೇಕು. ಎಲ್ಲರೂ ಒಂದೇ ಎನ್ನುವ ಭಾವಬಂದರೆ, ಚಿತ್ರರಂಗ ಬ್ಯೂಟಿಫ‌ುಲ್‌ ಆಗಿರುತ್ತೆ. ನಿರ್ಮಾಪಕ, ನಿರ್ದೇಶಕರಿಗೆ ಆ ಐಡಿಯಾ ಬರಬೇಕಷ್ಟೇ’ ಎಂದು ಮಾತು ಮುಗಿಸುತ್ತಾರೆ ಅಜೇಯ್‌.

– ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.