ರಸ್ತೆ ಅವಘಡಕ್ಕೆ ರಾಷ್ಟ್ರ ಪಕ್ಷಿ ಬಲಿ
Team Udayavani, Jul 29, 2019, 5:27 AM IST
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ನವಿಲೊಂದು ರಸ್ತೆ ಅವಘಡದಿಂದ ಮƒತಪಟ್ಟ ಘಟನೆಯು ಗುರುವಾರ ಸಂಭವಿಸಿದೆ.
ಆಹಾರವನ್ನು ಅರಸಿಕೊಂಡು ಪೇಟೆ, ವಸತಿ ಪ್ರದೇಶಗಳತ್ತ ಆಗಮಿಸಿದ್ದ ಈ ನವಿಲು ಹೆದ್ದಾರಿಯನ್ನು ದಾಟುವ ಸಂದರ್ಭದಲ್ಲಿ ಯಾವುದೋ ವಾಹನವು ಢಿಕ್ಕಿ ಹೊಡೆದಿದೆ.
ಮಾಹಿತಿಯನ್ನು ಅರಿತ ಅರಣ್ಯ ರಕ್ಷಕರು ಸ್ಥಳಕ್ಕಾಗಮಿಸಿ ನವಿಲನ್ನು ಚಿಕಿತ್ಸೆಗಾಗಿ ಕಾಪುವಿನ ಪಶುವೈದ್ಯಾಧಿಕಾರಿ ಅವರಲ್ಲಿ ಕೊಂಡೊಯ್ದಿದ್ದು, ಪರಿಶೀಲನೆ ನಡೆಸಿದ ವೈದ್ಯರು ವಯಸ್ಸಾದ ನವಿಲು ಮತ್ತು ಹೆಚ್ಚು ಪೆಟ್ಟಾಗಿರುವುದರಿಂದ ಅದು ಬದುಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಳಿಕ ರಾಷ್ಟ್ರ ಪಕ್ಷಿಯ ಕಳೇಬರವನ್ನು ಸುಡಲಾಯಿತು ಎಂದು ಅರಣ್ಯ ರಕ್ಷಕರು ಮಾಹಿತಿಯನ್ನು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್
ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ
Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”
Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ
KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ