ಮೂಡುಬಿದಿರೆ: ಆರೋಪಿಗಳ ಬಂಧನ
Team Udayavani, Aug 2, 2019, 9:12 AM IST
ಮೂಡುಬಿದಿರೆ: ಅಲಂಗಾರಿನ ಮುರಮೇಲಿನಲ್ಲಿ ಸರ ಕಳವು ಮತ್ತು ವಾಲ್ಪಾಡಿಯಲ್ಲಿ ಕಳವು ನಡೆಸಿದ್ದ ಆರೋಪದಲ್ಲಿ ಮೂಡುಮಾರ್ನಾಡು ಗ್ರಾಮದ ತಂಡ್ರಕೆರೆಯ ದಿನೇಶ್ ಪೂಜಾರಿ ಮತ್ತು ಕೃತ್ಯಕ್ಕೆ ಸಹಕರಿಸಿದ್ದ ಆರೋಪದಲ್ಲಿ ದರೆಗುಡ್ಡೆ ಜನತಾ ಕಾಲನಿಯ ಯೋಗೀಶ್ ಆಚಾರ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಎರಡು ಬೈಕ್, 3 ಮೊಬೈಲ್ ಫೋನ್ಗಳು, 2 ಚಿನ್ನದ ಸರಗಳು, ಒಂದು ಜತೆ ಕಿವಿಯ ಆಭರಣ ಸಹಿತ ಒಟ್ಟು 1.73 ಲ. ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಆಯುಕ್ತರ ನಿರ್ದೇಶನ ದಂತೆ ಮೂಡುಬಿದಿರೆ ಪ್ರಭಾರ ನಿರೀಕ್ಷಕ ಅನಂತಪದ್ಮನಾಭ, ಎಸ್ ಐಗಳಾದ ದೇಜಪ್ಪ, ಕೃಷ್ಣ ಸಹಿತ ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.