ಕೇಂದ್ರಾಡಳಿತ ಸ್ಥಾನ; ಬಹುಪತ್ನಿತ್ವ ಜೀವಂತ, ಜಗತ್ತಿನ ಎತ್ತರದಲ್ಲಿರೋ ಲಡಾಖ್ ಹೇಗಿದೆ ಗೊತ್ತಾ?


Team Udayavani, Aug 5, 2019, 12:36 PM IST

Ladakh

ನವದೆಹಲಿ:ಜಮ್ಮು-ಕಾಶ್ಮೀರದಲ್ಲಿ ಏನಾಗುತ್ತಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದ್ದು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370ನೇ ವಿಧಿ, ಆರ್ಟಿಕಲ್ 35ಎ ವಿಧಿಯನ್ನು ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ರದ್ದುಗೊಳಿಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ರಾಜ್ಯಸಭೆಯಲ್ಲಿ ಘೋಷಿಸಿದ್ದಾರೆ.

ಅಲ್ಲದೇ ಜಮ್ಮು-ಮತ್ತು ಕಾಶ್ಮೀರದ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಕೇಂದ್ರ ಸರಕಾರ ಘೋಷಿಸಿದೆ. ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು ನಿರೀಕ್ಷಿತವಾಗಿತ್ತು, ಆದರೆ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿರುವುದು ಹೆಚ್ಚಿನ ಮಹತ್ವದ ಪಡೆದಿದೆ. ಲಡಾಖ್ ಪ್ರದೇಶ ಹೇಗಿದೆಎಂಬ ಕಿರು ಮಾಹಿತಿ ಇಲ್ಲಿದೆ..

ಚೀನಾ-ಟಿಬೆಟ್, ಪಾಕಿಸ್ತಾನ ಪ್ರದೇಶಗಳಿಂದ ಸುತ್ತುವರಿದಿರುವ ಲಡಾಖ್ ಹಿಮಾಲಯದ ಮೇಲಿನ ಪ್ರಸ್ಥಭೂಮಿಯಾಗಿದೆ. ಲಡಾಖ್ ಪ್ರದೇಶದಲ್ಲಿ ಮುಂಗೋಲಿಯನ್ ಬುಡಕಟ್ಟು ಹಾಗೂ ಬೌದ್ಧರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.

ದುರ್ಗಮ ಪ್ರದೇಶವಾಗಿರುವ ಲಡಾಖ್ ಸಮುದ್ರ ಮಟ್ಟದಿಂದ 8ಸಾವಿರದಿಂದ 13 ಸಾವಿರಗಳಷ್ಟು ಎತ್ತರದಲ್ಲಿದೆ. ಲಡಾಖ್ ಗೆ ಶ್ರೀನಗರದಿಂದ ಹೆದ್ದಾರಿ ನಿರ್ಮಿಸಿದ್ದು ಕೂಡಾ ದೊಡ್ಡ ಸಾಧನೆಯಾಗಿದೆ. ಆರು ತಿಂಗಳ ಕಾಲ ಹಿಮಪಾತದಿಂದ ಈ ಮಾರ್ಗ ಮುಚ್ಚಿ ಹೋಗುತ್ತದೆ. ಲೇಹ್ ನಿಂದ ಮನಾಲಿಗೂ ಒಂದು ರಸ್ತೆ ಇದ್ದು, ಭೀಕರ ಪ್ರಪಾತ, ಭಾರೀ ಕಣಿವೆಗಳು ಇರುವ ಈ ರಸ್ತೆಯಲ್ಲಿ ಚಳಿಗಾಲದಲ್ಲಿ ದುರ್ಗಮವಾಗಿರುತ್ತದೆ.

ಲಡಾಖ್ ನ ರಾಜಧಾನಿ ಲೇಹ್ ನಲ್ಲಿರುವ ವಿಮಾನ ನಿಲ್ದಾಣ ಜಗತ್ತಿನ ಅತ್ಯಂತ ಎತ್ತರದ ವಿಮಾನ ನಿಲ್ದಾಣವಾಗಿದೆ. ಯೋಧರಿಗೆ ಹಿಮಾಲಯದ ಈ ಪ್ರದೇಶದಲ್ಲಿ ಆರು ತಿಂಗಳ ಸೇವೆ ಕಡ್ಡಾಯ. ದಿನನಿತ್ಯದ ದಿನಸಿ, ತರಕಾರಿ, ಮಾಂಸ, ಹಾಲು ಔಷಧಿ ಹಾಗೂ ಪತ್ರಗಳು ತಲುಪುವುದು ದಿನಕ್ಕೆ ಮೂರು, ನಾಲ್ಕು ಬಾರಿ ಚಂಡೀಗಢದಿಂದ ಬಂದು ಹೋಗುವ ಐಎಲ್ 36 ಅಥವಾ ಐಎನ್ 32 ವಿಮಾನದ ಮೂಲಕವೇ. ಹಿಮಪಾತ ಇಲ್ಲದ ದಿನಗಳಲ್ಲಷ್ಟೇ ಲೇಹ್ ವಿಮಾನ ನಿಲ್ದಾಣ ಕಾರ್ಯನಿರ್ವಹಿಸುತ್ತದೆ.

ಜಗತ್ತಿನ ಅತೀ ಎತ್ತರದ ಜನವಸತಿ ಪ್ರದೇಶವಾಗಿರುವ ಲಡಾಖ್ ಒಂದು ನೈಸರ್ಗಿಕ ರೆಫ್ರಿಜರೇಟರ್ ಆಗಿದೆ. ಅಂಗಡಿಗಳಲ್ಲಿ ಜೋಡಿಸಿಟ್ಟ ತರಕಾರಿ, ಹೋಟೆಲ್ ನಲ್ಲಿನ ಆಹಾರ ಪದಾರ್ಥ ದಿನಗಟ್ಟಲೇ ಕೆಟ್ಟು ಹೋಗದೆ ಹಾಗೇ ಇರುತ್ತದೆ. ಚಳಿಗಾಲದಲ್ಲಿ ಲಡಾಖಿಗಳ ದೈನಂದಿನ ಚಟುವಟಿಕೆ ಬೆಳಗ್ಗೆ 8ಗಂಟೆಗೆ ಆರಂಭವಾಗಿ ಸಂಜೆ 4ಗಂಟೆಗೆ ಮುಕ್ತಾಯವಾಗುತ್ತಂತೆ! ಸಂಜೆ 4ಗಂಟೆಗೆ ಸೂರ್ಯ ಕೂಡಾ ಕಣ್ಮರೆಯಾಗಿ ಕತ್ತಲು ಆವರಿಸಿಕೊಳ್ಳುತ್ತದೆ!

ಲಡಾಖ್ ನಲ್ಲಿ ದಿನಕ್ಕೊಂಡು ಅಕ್ರೂಟ್ ತಿನ್ನಿ ಚಳಿಯನ್ನು ದೂರವಿಡಿ ಎಂಬ ಮಾತು ಸಾಮಾನ್ಯವಂತೆ. ಲಡಾಖ್ ನಲ್ಲಿ ಬಹುಪತ್ನಿತ್ವ ಅಸ್ತಿತ್ವದಲ್ಲಿದೆಯಂತೆ! ಲಡಾಖ್, ಲೇಹ್ ನಲ್ಲಿ ಕಣ್ಮಣ ಸೆಳೆಯುವ ಹಲವಾರು ತಾಣಗಳಿವೆ. ಅದರಲ್ಲಿ ಶೆಯ್ ಅರಮನೆ, ಹೆಮಿಸ್ ಗೊಂಪ, ಸ್ತೋಕ್ ಅರಮನೆ , ಶಾಂತಿ ಸ್ತೂಪ ಪ್ರಮುಖವಾದವು.

ಲಡಾಖ್ ವಿಸ್ತಾರ: 86,904 ಕಿಲೋ ಮೀಟರ್

ಒಟ್ಟು ಜನಸಂಖ್ಯೆ: 2,70,126

ಬೌದ್ಧ, ಕ್ರಿಶ್ಚಿಯನ್, ಇಸ್ಲಾಂ ಧರ್ಮ

ಟಾಪ್ ನ್ಯೂಸ್

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.