ಸುದೀಪ್ ಹೆಸರು ತಂದರೆ ಕ್ಷಮೆ ಇಲ್ಲ, ಆತ ನನ್ನ ತಮ್ಮನಂತೆ
ಕಿಡಿಗೇಡಿಗಳಿಗೆ ಜಗ್ಗೇಶ್ ಖಡಕ್ ವಾರ್ನಿಂಗ್
Team Udayavani, Aug 15, 2019, 3:03 AM IST
“ಕೆಂಪೇಗೌಡ-2′ ಚಿತ್ರದ ಬಿಡುಗಡೆಯ ನಂತರ ನಟ ಕೋಮಲ್ ಅವರ ಮೇಲೆ ನಡೆದ ಹಲ್ಲೆ ಘಟನೆ ಬೇರೆ ಬೇರೆ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ನಟ ಸುದೀಪ್ ಅವರ ಹೆಸರನ್ನು ಹರಿಬಿಟ್ಟಿದ್ದರು. ಈ ವಿಷಯ ನಟ ಕೋಮಲ್ ಅವರ ಹಿರಿಯ ಸೋದರ ಜಗ್ಗೇಶ್ ಅವರ ಗಮನಕ್ಕೆ ಬರುತ್ತಿದ್ದಂತೆ, ಕೂಡಲೇ ಎಚ್ಚೆತ್ತ ಕೋಮಲ್ ಹಿರಿಯ ಜಗ್ಗೇಶ್, ಟ್ವಿಟ್ಟರ್ನಲ್ಲಿ “ವೈಯಕ್ತಿಕ ಅನಿಸಿಕೆ ನಿರ್ಧಾರ ಮಾಡಿ ನನ್ನ ಕಲಾ ಬಂಧು ಸುದೀಪ್ ಹೆಸರು ಯಾರಾದರು ಈ ವಿಷಯದಲ್ಲಿ ತಂದರೆ ಕ್ಷಮೆಯಿಲ್ಲಾ.
ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಿಕ ವಿಷಯ ಬರೆಯಿರಿ, ಕೆಡಿಸದಿರಿ ಮನಗಳ. ಸುದೀಪ್ ನನ್ನ ಒಡ ಹುಟ್ಟದಿದ್ದರು, ನನ್ನ ಹೆಮ್ಮೆಯ ತಮ್ಮನಂತೆ. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸುದೀಪ್ ಹೆಸರು ತರುತ್ತಿರುವವರ ವಿರುದ್ಧ ಜಗ್ಗೇಶ್ ಟ್ವಿಟ್ಟರ್ನಲ್ಲಿ ಗುಡುಗಿದ್ದಾರೆ. ಅಲ್ಲದೆ ಈ ಘಟನೆಗೂ ಮತ್ತು ನಟ ಸುದೀಪ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಹೀಗಾಗಿ ಅನಗತ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಹೆಸರನ್ನು ತರಬಾರದು ಎಂದು ಜಗ್ಗೇಶ್ ವಿನಂತಿ ಮಾಡಿದ್ದಾರೆ.
ವಿನಂತಿ:
ವೈಯಕ್ತಿಕ ಅನಿಸಿಕೆ ನಿರ್ದಾರ ಮಾಡಿ ನನ್ನ
ಕಲಾಬಂಧು #ಸುದೀಪ್ ಹೆಸರು ಯಾರಾದರು ಈ ವಿಷಯದಲ್ಲಿ ತಂದರೆ
ಕ್ಷಮೆಯಿಲ್ಲಾ!
ಸುದೀಪ್ ನನ್ನ ಒಡಹುಟ್ಟದಿದ್ದರು
ನನ್ನ ಹೆಮ್ಮೆಯ ತಮ್ಮನಂತೆ..
ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು..
ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಿಕ ವಿಷಯ ಬರೆಯಿರಿ!ಕೆಡಿಸದಿರಿ
ಮನಗಳ!ಧನ್ಯವಾದಗಳು.— ನವರಸನಾಯಕ ಜಗ್ಗೇಶ್ (@Jaggesh2) August 14, 2019
ಸದ್ಯ ಕೋಮಲ್ ಮೇಲಿನ ಹಲ್ಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮಲ್ಲೇಶ್ವರಂ ಪೊಲೀಸರು ಹಲ್ಲೆ ಮಾಡಿರುವ ವಿಜಿ ಎಂಬುವವನನ್ನು ಬಂದಿಸಿ ವಿಚಾರಣೆ ಮಾಡುತ್ತಿದ್ದಾರೆ. ಇತ್ತ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದ್ದರೆ, ಅತ್ತ ಪ್ರಕರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮಲ್ ಮೇಲಿನ ಹಲ್ಲೆಗೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಒಟ್ಟಾರೆ ಈ ಬಗ್ಗೆ ಪೊಲೀಸ್ ತನಿಖೆಯ ಬಳಿಕ ಪೂರ್ಣಗೊಂಡ ಬಳಿಕವಷ್ಟೇ ಸತ್ಯ ಏನೆಂಬುದು ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ