ನಮ್ಮ ನಾಡಿನಾಗ ರಕ್ಷಾಬಂಧನ ರಕ್ಷೆಯ ದ್ಯೋತಕ


Team Udayavani, Aug 15, 2019, 12:19 PM IST

raksha

ಈ ನಮ್ಮ ದೇಶ ಭಾರತದ ಅದೆಷ್ಟೋ ಆಚಾರ ವಿಚಾರಗಳು, ಸಂಸ್ಕೃತಿ ಸಂಪ್ರದಾಯಗಳು ಇಡಿ ಜಗತ್ತಿನಲ್ಲೇ ಒಂದು ವೈಶಿಷ್ಟ್ಯ ಪೂರ್ಣವಾಗಿರುವಂತಹದ್ದು. ಇವುಗಳೇ ಭಾರತದ ಕುಟುಂಬ ಪದ್ಧತಿಯನ್ನು ಬಲಯುತಗೊಳಿಸಿ ವಿಶ್ವಕ್ಕೆ ಮಾದರಿಯಾಗುವಂತೆ ಮಾಡಿದೆ.

ಇಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಹಿನ್ನೆಲೆ ಮತ್ತು ಭಾವನಾತ್ಮಕ ನೆಲೆ ಇದೆ. ಕುಟುಂಬ ಎಂದರೆ ಅದು ಸಂಬಂಧಗಳ ಆಗರ. ಆ ಸಂಬಂಧಗಳು ಸದಾ ಹಚ್ಚಹಸುರಾಗಿ ಅನ್ಯೋನ್ಯವಾಗಿರಬೇಕಾದರೆ ಆ ಸಂಬಂಧದ ವಿಶೇಷತೆಯನ್ನು ಸಾರುವ ಯಾವುದಾದರೊಂದು ಪ್ರಕ್ರಿಯೆ ನಡೆಯುತ್ತಲೇ ಇರಬೇಕು. ಆ ಕಾರಣಕ್ಕಾಗಿಯೆ ಭಾವನಾತ್ಮಕವಾಗಿ ಬೆಸೆಯುವ ಹಬ್ಬಗಳು ಜೀವ ಪಡೆದುಕೊಂಡವು. ಈ ಹಬ್ಬಗಳು ಮನೆಯ ತುಂಬಾ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿ ಮನಸ್ಸುಗಳನ್ನು ಬೆಸೆಯುವಂತೆ ಪ್ರೇರೇಪಿಸುತ್ತದೆ. ಇಂತಹ ಹಬ್ಬಗಳ ಲೋಕದಲ್ಲಿ ರಕ್ಷ ಬಂಧನವೂ ಅರ್ಥಪೂರ್ಣವಾದುದು.

ರಕ್ಷಾಬಂಧನ ಸಹೋದರ ಸಹೋದರಿಯರ ನೆಚ್ಚಿನ ಹಬ್ಬ. ಭಾರತೀಯ ಪರಂಪರೆಯನುಸಾರ ಶ್ರಾವಣ ಪೂಣಿರ್ಮೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಜಗತ್ತಿನ ಸೃಷ್ಟಿಯಲ್ಲೇ ಅಣ್ಣ ತಂಗಿಯ ಸಂಬಂಧ ಅರ್ಥಗರ್ಭಿತವಾದುದು. ಈ ಸಂಬಂಧದ ಸಂಕೋಲೆ ಕೇವಲ ಮನುಜರ ನಡುವೆ ಮಾತ್ರವಲ್ಲದೇ ದೇವಾನು ದೇವತೆಗಳ ನಡುವೆಯೂ ಅಸ್ತಿತ್ವ ಪಡೆದಿದೆ. ತಂಗಿಯ ಪಾಲಿಗೆ ಅಣ್ಣನೇ ಶ್ರೀರಕ್ಷೆ.

ಈ ಜಗತ್ತಿನಲ್ಲಿ ಪ್ರತಿ ಹೆಣ್ಣೂ ಕೂಡ ತನಗೊಬ್ಬ ಅಣ್ಣ ಬೇಕು ಎಂಬ ಕನಸನ್ನು ಕಾಣುತ್ತಾಳೆ. ಯಾಕೆಂದರೆ ಆ ಒಂದು ಸಂಬಂಧವೇ ಹಾಗೆ ಮನಮೋಹಕ. ಅಣ್ಣ ತಂಗಿ ಜಗಳವಾಡದ ದಿನವಿರದಿದ್ದರೂ, ಮನದೊಳಗಿನ ಪ್ರೀತಿ ಮಾತ್ರ ಸದಾ ಹಸಿರು. ತಂಗಿಗೆ ನೋವಾದಾಗ ಎದ್ದು ನಿಲ್ಲುವ ಅಣ್ಣ, ಆಕೆಯ ಪ್ರತಿಯೊಂದು ಬೇಡಿಕೆಯನ್ನು ಆಕೆ ಕೇಳುವುದಕ್ಕೆ ಮೊದಲೇ ಪೂರೈಸಬೇಕೆಂದು ಹಂಬಲಿಸುತ್ತಾನೆ. ತಂಗಿಯೂ ಅಷ್ಟೇ ಪ್ರತಿ ಬಾರಿಯೂ ಅಣ್ಣನ ನೋವು ನಲಿವುಗಳಲ್ಲಿ ಒಂದಾಗಿ, ಅವನಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಬಹಳಷ್ಟು ಸಂದರ್ಭ ತಮ್ಮನೂ ಕೂಡ ಅಣ್ಣನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಾನೆ. ಈ ಹಬ್ಬವನ್ನು ರಕ್ಷಾಬಂಧನ ಎಂದು ಹೇಳುವ ಬದಲು ಸಹೋದರ ಸಹೋದರಿಯರ ಹಬ್ಬ ಎಂದರೆ ಹೆಚ್ಚು ಸೂಕ್ತ.

ಪರಂಪರಾನುಗತದಿಂದ ಆಚರಣೆಯಾಗುತ್ತಾ ಬಂದ ಈ ಹಬ್ಬ ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಮಾಡಲಿ. ಮನದಲ್ಲಿ ಮನಸ್ತಾಪವೆಂಬ ಅಂಧಕಾರ ಮೂಡಿದ್ದರೆ, ಅದನ್ನು ದೂರ ಮಾಡಿ ಮತ್ತೆ ಪ್ರೀತಿಯ ಬಂಧ ಬೆಸೆಯುವಂತಾಗಲಿ.

ಈ ಲೇಖನ ಸದಾ ನನಿಗೆ ಬೆಂಗಾವಲಾಗಿ ನಿಂತು ಅಪರಿಮಿತ ಪ್ರೀತಿಯನ್ನು ತೋರಿದ ನನ್ನ ಪ್ರೀತಿಯ ಅಣ್ಣಂದಿರಿಗೆ ಹಾಗೂ ತಮ್ಮನಿಗೆ ಅರ್ಪಿತಾ ಎನ್ನಲು ಮನ ಮುದಗೊಳ್ಳುತ್ತಿದೆ.

ಸಾಯಿ ಶ್ರೀಪದ್ಮ ಡಿ.ಎಸ್.

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.