ಬೆಳ್ತಂಗಡಿ: ಸಿಬಂದಿ ರಕ್ಷಣಾ ಕಾರ್ಯಕ್ಕೆ ಐಜಿಪಿ ಶ್ಲಾಘನೆ
Team Udayavani, Sep 8, 2019, 5:43 AM IST
ಬೆಳ್ತಂಗಡಿ: ಸಮಾಜದಲ್ಲಿನ ಹಲವಾರು ಸವಾಲುಗಳ ನಡುವೆಯೂ ತಾಲೂಕಿನಲ್ಲಿ ಪ್ರಕೃತಿ ವಿಕೋಪ ಸಂದರ್ಭ ಪ್ರಾಣದ ಹಂಗು ತೊರೆದು ಹಲವಾರು ಮಂದಿಯ ಪ್ರಾಣ ರಕ್ಷಿಸಿದ ಪೊಲೀಸ್ ಇಲಾಖೆ ಸಹಿತ ಇತರರಕ್ಷಣಾ ಪಡೆಗಳ ಸಿಬಂದಿಯ ಸೇವೆ ಅಭಿನಂದನೀಯ ಎಂದು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಶನಿವಾರ ಬೆಳ್ತಂಗಡಿ ತಾಲೂಕಿನ ಹಲವೆಡೆ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ನಾಗರಿಕರ ಪ್ರಾಣ ರಕ್ಷಣೆಗೆ ನೆರವಾದ ತಾ|ನ ಪೊಲೀಸ್, ಎಎನ್ಎಫ್ ಹಾಗೂ ಅಗ್ನಿಶಾಮಕ ದಳದ ಸಿಬಂದಿಯನ್ನು ಗೌರವಿಸಿ ಅವರು ಮಾತನಾಡಿದರು.
ಬೆಳ್ತಂಗಡಿ, ಧರ್ಮಸ್ಥಳ ಠಾಣಾಧಿಕಾರಿ ಗಳಾದ ರವಿ, ಅವಿನಾಶ್ ಗೌಡ, ಸಿಬಂದಿ ಹರೀಶ್ ನಾಯ್ಕ, ದುರ್ಗಾದಾಸ್, ಸವಿತಾ, ಅಶೋಕ, ವೆಂಕಟೇಶ, ರಾಜೇಶ್, ಮುತ್ಯಪ್ಪ, ದೇವಿಪ್ರಸಾದ್, ರವೀಂದ್ರ, ರಾಹುಲ್ ರಾವ್, ಕೃಷ್ಣಪ್ಪ, ಚೌಡಪ್ಪ, ಹರೀಶ್ ಕುಮಾರ್, ಎಎನ್ಎಫ್ನ ರಾಜೇಶ್, ರಾಮಣ್ಣ ಗೌಡ, ಯತೀಂದ್ರ, ರಘು, ಮುಖ್ಯ ಫೈರ್ಮನ್ ಕೃಷ್ಣ ನಾಯಕ್, ಚಾಲಕ ಶಂಕರ, ಫೈರ್ಮನ್ ಉಸ್ಮಾನ್ ಅವರನ್ನು ಐಜಿಪಿ ಗೌರವಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಹೆಚ್ಚುವರಿ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ, ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್, ಡಿವೈಎಸ್ಪಿ ನಟರಾಜ್ ಉಪಸ್ಥಿತರಿದ್ದರು. ಬೆಳ್ತಂಗಡಿ ಠಾಣಾ ವೃತ್ತ ನಿರೀಕ್ಷಕ ಸಂದೇಶ್ ಸ್ವಾಗತಿಸಿ, ವಂದಿಸಿ ದರು. ಮುಖ್ಯ ಪೇದೆ ವೆಂಕಪ್ಪ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ