ಒಡೆಯನಪುರ ಗ್ರಾಮದಲ್ಲಿ ಗೌರಿ-ಗಣೇಶ ವಿಸರ್ಜನೆ
Team Udayavani, Sep 12, 2019, 5:44 AM IST
ಶನಿವಾರಸಂತೆ: ಸಮಿಪದ ಒಡೆಯನಪುರ ಗ್ರಾಮದ ಶ್ರೀ ಗಣಪತಿ ಸೇವಾ ಸಮಿತಿ ವತಿಯಿಂದ ಗ್ರಾಮದ ಸಮೂದಾಯ ಭವನ ದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಿದ ಗೌರಿ- ಗಣೇಶಮೂರ್ತಿಗಳ ವಿಸಜನೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಗೌರಿ-ಗಣೇಶಮೂರ್ತಿ ವಿಸರ್ಜನಾ ಕಾರ್ಯಕ್ರಮದ ಪ್ರಯುಕ್ತ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.ವಿವಿಧ ಹೂವುಗಳಿಂದ ಅಲಂಕರಿಸಿದ ವಾಹನದಲ್ಲಿ ಗೌರಿ-ಗಣೇಶ ಮೂರ್ತಿಯನ್ನು ಕೂರಿಸಿ ಮಂಗಳ ವಾದ್ಯಗೋಷ್ಠಿಯೊಂದಿಗೆ ಗ್ರಾಮದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಯುವಕ, ಯುವತಿಯರು, ಮಕ್ಕಳು, ವಿವಿಧ ಜಾತಿ-ಜನಾಂಗದ ಬಾಂಧವರು ಬೇದಭಾವ ಮರೆತು ಒಂದಾಗಿ ಬೆರೆತು ಸಂಭ್ರಮದಿಂದ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.
ಅನಂತರ ಗೌರಿ-ಗಣೇಶ ಮೂರ್ತಿ ಗಳನ್ನು ಶನಿವಾರಸಂತೆ ಹೊಳೆಯಲ್ಲಿ ವಿಸರ್ಜನೆ ಮಾಡಲಾಯಿತು.
ಗ್ರಾಮದ ಪ್ರಮುಖರಾದ ವಿ.ಆರ್.ಸುರೇಶ್ ಮೊಗೇರ, ಶ್ರೀಜಿತ್, ಪ್ರಕಾಶ್, ಪ್ರವೀಣ್, ಯತೀಶ್, ಪವನ್, ರಾಜು, ಉಮೇಶ್, ಮಂಜುನಾಥ್, ಪ್ರಸನ್ನ ಮುಂತಾದವರು ಉಪಸ್ಥಿತರಿದ್ದರು.