ಗೌರಿ ಗಣೇಶ ಮೂರ್ತಿಗಳು ಭಗ್ನ: ಅವಧಿಗೆ ಮೊದಲೇ ವಿಸರ್ಜನೆ
Team Udayavani, Sep 12, 2019, 5:41 AM IST
ಗೋಣಿಕೊಪ್ಪಲು: ಪೊನ್ನಂ ಪೇಟೆಯ ಕಾಟ್ರಕೊಲ್ಲಿಯಲ್ಲಿ ಗಜಮುಖ ಗೆಳೆಯರ ಬಳಗ ಆಶ್ರಯದಲ್ಲಿ ಗಣೇಶ ಗೌರಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದ ಕಟ್ಟಡ ಒಂದು ಭಾಗದ ಗೋಡೆ ಕುಸಿತವಾದ ಹಿನ್ನಲೆಯಲ್ಲಿ ಗೌರಿ ಗಣೇಶ ಮೂರ್ತಿಗಳು ಭಗ್ನವಾಗಿದ್ದು, ಇದನ್ನು ನಿಗಧಿತ ಅವಧಿಗೆ ಮುಂಚಿತವಾಗಿ ವಿಸರ್ಜಿಸಲಾಯಿತು.
ಸೋಮವಾರ ರಾತ್ರಿ 9 ಗಂಟೆಗೆ ಮೂರ್ತಿಗಳ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ ಪ್ರತಿಷ್ಠಾಪನೆ ಮಾಡಿದ್ದ ಮೂರ್ತಿಗಳಿಗೆ ಹಾನಿಯಾಗಿದೆ.
ಮಣ್ಣಿನ ಮೂರ್ತಿಗಳು ಹುಡಿಯಾಗಿದ್ದು, ಅಲಂಕೃತ ಮಂಟಪ ಸಹ ಹಾನಿಯಾಗಿದೆ. ಸೋಮವಾರ ಸಂಜೆ 7:30 ಕ್ಕೆ ಪೂಜೆ ಮುಗಿದು ಅಲ್ಲಿಂದ ಸಮಿತಿಯವರು ತೆರಳಿದ್ದರು. ಗೋಡೆ ಕುಸಿದ ಸಂದರ್ಭ ಆ ಸ್ಥಳದಲ್ಲಿ ಯಾರು ಇಲ್ಲದ ಪರಿಣಾಮ ಜನರಿಗೆ ತೊಂದರೆಯಾಗಿಲ್ಲ. ಮೂರ್ತಿ ವಿಸರ್ಜನೆಯನ್ನು ತಾ. 11ರಂದು ನಡೆಸಲು ನಿಗಧಿಯಾಗಿತ್ತು. ಆದರೆ ಗೋಡೆ ಕುಸಿತದಿಂದ ಮೂರ್ತಿಗಳು ಹುಡಿಯಾಗಿರುವ ಹಿನ್ನಲೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಯಮದಂತೆ ಪೂಜೆ ಸಲ್ಲಿಸಿ ಮೂರ್ತಿಗಳ ಅಳಿದುಳಿದ ಭಾಗವನ್ನು ಬಾಳಾಜಿ ಗ್ರಾಮದ ಕೀರೆ ಹೊಳೆ ನದಿಯಲ್ಲಿ ಸಮಿತಿಯವರು ವಿಸರ್ಜಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್