ಕಟಪಾಡಿ : ರಸ್ತೆಗೆ ಬಿದ್ದ ಜಲ್ಲಿ ಹುಡಿಯನ್ನು ಸ್ವಚ್ಛಗೊಳಿಸಿದ ವರ್ತಕರು
Team Udayavani, Sep 17, 2019, 5:58 AM IST
ಕಟಪಾಡಿ: ಶಿರ್ವ ಕಟಪಾಡಿ ಸಂಪರ್ಕದ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ ಮಣಿಪುರ ಕ್ರಾಸ್ ಬಳಿ ಜಲ್ಲಿ ಮತ್ತು ಜಲ್ಲಿಹುಡಿಯು ಯಾವುದೋ ವಾಹನದಿಂದ ರಸ್ತೆಗೆ ಬಿದ್ದಿದ್ದು, ವಾಹನ ಸವಾರರಿಗೆ ಅಪಾಯವನ್ನು ಗ್ರಹಿಸಿದ ಸ್ಥಳೀಯ ವರ್ತಕರು ಹಿಡಿಸೂಡಿ ಹಿಡಿದುಕೊಂಡು ರಸ್ತೆಯನ್ನು ಸ್ವಚ್ಛಗೊಳಿಸಿ ಪ್ರಮುಖವಾಗಿ ದ್ವಿಚಕ್ರ ವಾಹನ ಸವಾರರಿಗೆ ಸುಗಮ ಸಂಚಾರದ ಅವಕಾಶವನ್ನು ಕಲ್ಪಿಸಿಕೊಡುವ ಮೂಲಕ ಮಾನವೀಯ ಕೆಲಸವನ್ನು ನಡೆಸಿರುತ್ತಾರೆ. ಸಾರ್ವಜನಿಕ ವಲಯದಲ್ಲಿ ವರ್ತಕರ ಸಮಯಪ್ರಜ್ಞೆಗೆ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗಿದೆ.