ಕಣ್ಣಿನ ಒತ್ತಡ ನಿವಾರಣೆ
Team Udayavani, Oct 1, 2019, 5:00 AM IST
ಪಂಚೇಂದ್ರಿಯಗಳಲ್ಲಿ ಅತಿ ಸೂಕ್ಷ್ಮವಾದ ಇಂದ್ರಿಯ ಎಂದರೆ ಅದು ಕಣ್ಣು. ಇದನ್ನು ರಕ್ಷಿಸಿಕೊಳ್ಳುವುದಕ್ಕೆ ಅಷ್ಟೇ ರೀತಿಯಾಗಿ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ನಾವು ದಿನದ ಹೆಚ್ಚು ಸಮಯ ಮೊಬೈಲ್, ಟಿವಿ, ಲ್ಯಾಪ್ಟಾಪ್, ಕಂಪ್ಯೂಟರ್ಗಳ ಮುಂದೆ ಇರುವ ಕಾರಣ ಈ ದೃಷ್ಟಿಯಲ್ಲಿ ಕಣ್ಣಿನ ರಕ್ಷಣೆ ಮಾಡಬೇಕಾಗುತ್ತದೆ. ಈ ಕುರಿತು ವೈದ್ಯರು ಕೆಲವೊಂದು ಸಲಹೆಗಳನ್ನು ನೀಡುತ್ತಾರೆ.
ಕಣ್ಣಿಗೆ ವಿಶ್ರಾಂತಿಯಿರಲಿ
ನಾವು ಹೊರಗಡೆಯಿಂದ ಬಂದಾಗ ನಮ್ಮ ಕಣ್ಣಿಗೆ ಒಂದಿಷ್ಟು ಸಮಯ ವಿಶ್ರಾಂತಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ಸುಮಾರು 2-3 ನಿಮಿಷ ಕಣ್ಮುಚ್ಚಿ ಕಣ್ಣಿಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಸರಿಯಾಗಿ ನಿದ್ದೆಯನ್ನು ಕೂಡ ಮಾಡಬೇಕಾಗುತ್ತದೆ. ಇದರಿಂದ ದೇಹಕ್ಕೂ ಹಾಗೂ ಕಣ್ಣಿಗೂ ವಿಶ್ರಾಂತಿ ನೀಡಿದಂತಾಗುತ್ತದೆ. ಇನ್ನು ದಿನದಲ್ಲಿ ತಾಸುಗಟ್ಟಲೇ ಮೊಬೈಲ್, ಕಂಪ್ಯೂಟರ್. ಲ್ಯಾಪ್ಟಾಪ್ ಬಳಸಿದ ಅನಂತರ ನಾವು 5-10 ನಿಮಿಷಗಳ ಕಾಲ ಕಣ್ಣನ್ನು ಮುಚ್ಚಿ ವಿಶ್ರಾಂತಿ ಪಡೆಯಬೇಕಾಗುತ್ತದೆ. ಇದರಿಂದ ತಲೆನೋವು, ಕಣ್ಣಿನ ಸಮಸ್ಯೆಗಳು ಉದ್ಭವಿಸುವುದಿಲ್ಲ.
ಕಣ್ಣನ್ನು ಅಲುಗಾಡಿಸಿ
ಸೂಕ್ಷ್ಮ ಅಂಗವಾದ ಕಣ್ಣನ್ನು ದಿನದಲ್ಲಿ 7-10 ಬಾರಿಯಾದರೂ ಗಡಿಯಾರ ಸುತ್ತುವಿನಂತೆ ತಿರುಗಾಡಿಸಬೇಕಾಗುತ್ತದೆ. ಇದರಿಂದ ಕಣ್ಣಿನ ರಕ್ಷಣೆ ಮಾಡಬಹುದು.
ಐ ಡ್ರಾಪ್ ಹಾಕಿ
ದಿನದಲ್ಲಿ ಹೆಚ್ಚು ಸಮಯ ಹೊರಗಡೆ ತಿರುಗಾಡಬೇಕಾದ ಕಾರಣ ಕಣ್ಣಿಗೆ ಧೂಳು ಬಿದ್ದಿರುತ್ತದೆ. ಧೂಳು ಬಿದ್ದಾಗಲೇ ಶುದ್ಧ ನೀರಿನಿಂದ ಅದನ್ನು ತೆಗೆಯಬೇಕು. ಹಾಗೇ ದಿನಾ ಮಲಗುವಾಗ ಐ -ಡ್ರಾಪ್ ಲಿಕ್ವಿಡ್ಗಳನ್ನು ಹಾಕಿ ಮಲಗಬೇಕು. ಇದರಿಂದ ಕಣ್ಣಿನ ರಕ್ಷಣೆ ಸಾಧ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ.
ನಿರಂತರ ವಿಶ್ರಾಂತಿ
ಹವಾನಿಯಂತ್ರಿತ ಕೋಣೆಯಲ್ಲಿದ್ದುಕೊಂಡು ಕೆಲಸ ನಿರ್ವಹಿಸುವವರಿಗೆ ಹೆಚ್ಚು ಕಣ್ಣಿನ ಸಮಸ್ಯೆಗಳು ಕಾಣಬಹುದು. ಆ ಪರಿಸರದಿಂದ ಅವರ ಕಣ್ಣು ಒಣಗಿರುತ್ತವೆ. ದಿನದ ಒಂದು ಬಾರಿಯಾದರೂ ಶುದ್ಧ ನೀರಿನಲ್ಲಿ ಕಣ್ಣನ್ನು ಅದ್ದಿ ತೆಗೆಯಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್