ತಿನಿಸಿನ ಜತೆ ಬಲೂನ್ ನುಂಗಿ ಐದು ವರ್ಷದ ಮಗು ಸಾವು
Team Udayavani, Oct 9, 2019, 3:03 AM IST
ಮರಿಯಮ್ಮನಹಳ್ಳಿ: ಮಕ್ಕಳ ತಿನಿಸುಗಳ ಜತೆ ಉಚಿತವಾಗಿ ಕೊಡುವ ಬಲೂನ್ ನುಂಗಿ ಐದು ವರ್ಷದ ಮಗು ಮೃತಪಟ್ಟ ಘಟನೆ ಸಮೀಪದ ಅಯ್ಯನಹಳ್ಳಿ ಗ್ರಾಮದಲ್ಲಿ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಯ್ಯನಹಳ್ಳಿ ಗ್ರಾಮದ ಹರಿಜನ ಚಂದ್ರಪ್ಪ ಮತ್ತು ಕವಿತಾ ದಂಪತಿಯ ಮಗು ಎಚ್.ಈರಮ್ಮ (5) ಮೃತಪಟ್ಟ ದುರ್ದೈವಿ. ಅ.3ರಂದು ಗುರುವಾರ ಬೆಳಗ್ಗೆ ಚಂದ್ರಪ್ಪ ತನ್ನೆರಡು ಹೆಣ್ಣು ಮಕ್ಕಳಿಗೆ ದುಡ್ಡು ಕೊಟ್ಟು ತಿಂಡಿ ತಿನ್ನಲು ಕಳುಹಿಸಿದ್ದಾರೆ.
ಅವರ ಮನೆ ಸಮೀಪದ ತಾಯಮ್ಮನಗುಡಿ ಹತ್ತಿರವಿರುವ ಗೂಡಂಗಡಿಯೊಂದರಲ್ಲಿ ಫ್ರಿ ಬಲೂನ್ ಸ್ನ್ಯಾಕ್ಸ್ ಎಂಬ ಹೆಸರಿನ ತಿನಿಸಿನ ಜತೆ ಉಚಿತವಾಗಿ ಕೊಡುವ ಬಲೂನನ್ನು ತೆಗೆದುಕೊಂಡು ಹೋಗಿದ್ದಾರೆ. ಗುಡಿ ಹತ್ತಿರ ತಿನಿಸನ್ನು ತಿಂದು ಬಲೂನನ್ನು ಬಾಯಲ್ಲಿಟ್ಟುಕೊಂಡು ಆಟವಾಡುತ್ತಿದ್ದಾಗ ಮಗು ಈರಮ್ಮನ ಗಂಟಲಲ್ಲಿ ಸಿಲುಕಿಕೊಂಡಿದೆ. ಅಲ್ಲಿಂದ ಮನೆಗೆ ಓಡಿ ಹೋಗಿ ತಂದೆ ಹತ್ತಿರ ಹೇಳುವಷ್ಟರಲ್ಲಿ ಕುಸಿದುಬಿದ್ದಿದೆ.
ಕೂಡಲೇ ಮರಿಯಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದರಿಂದ ಆಂಬ್ಯುಲೆನ್ಸ್ ಮೂಲಕ ಹೊಸಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ತಪಾಸಣೆ ಮಾಡಿದಾಗ ಜೀವ ಹೋಗಿದೆ ಎಂದು ವೈದ್ಯರು ಹೇಳಿದ್ದಾರೆ. ಭಾವನಾತ್ಮಕ ಕಾರಣಗಳಿಗಾಗಿ ಮರಣೋತ್ತರ ಪರೀಕ್ಷೆಗೆ ಸಂಬಂಧಿಕರು ಒಪ್ಪದೆ ಮಗುವಿನ ಕಳೇಬರವನ್ನು ಅಯ್ಯನಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ