ಕೊನೆಯಲ್ಲಿ ಕಾಡಿದ ಉಮೇಶ್: ಭಾರತ ಡಿಕ್ಲೇರ್- ಸಂಕಷ್ಟದಲ್ಲಿ ಆಫ್ರಿಕಾ
Team Udayavani, Oct 20, 2019, 3:21 PM IST
ರಾಂಚಿ: ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಚೊಚ್ಚಲ ದ್ವಿಶತಕ, ಅಜಿಂಕ್ಯ ರಹಾನೆ ಭರ್ಜರಿ ಶತಕ, ಜಡೇಜಾ ಅರ್ಧಶತಕ ಮತ್ತು ಕೊನೆಯಲ್ಲಿ ಅಬ್ಬರಿಸಿದ ಉಮೇಶ್ ಯಾದವ್ ನೆರವಿನಿಂದ ಭಾರತ ತೃತೀಯ ಟೆಸ್ಟ್ ಪಂದ್ಯದಲ್ಲಿ ಸುಸ್ಥಿತಿಯಲ್ಲಿದೆ.
ಭಾರತ ಒಂಬತ್ತು ವಿಕೆಟ್ ಕಳೆದುಕೊಂಡು 497 ರನ್ ಗಳಿಸಿ ಡಿಕ್ಲೇರ್ ಮಾಡಿದೆ. ರೋಹಿತ್ 212 ರನ್ ಗಳಿಸಿ ಔಟಾದರೆ, ಅಜಿಂಕ್ಯ ರಹಾನೆ 115 ರನ್ ಗಳಿಸಿದರೆ. ರವೀಂದ್ರ ಜಡೇಜಾ 51 ರನ್ ಗಳಿಸಿದರೆ, ಅಂತಿಮವಾಗಿ ಉಮೇಶ್ ಯಾದವ್ ಸಿಕ್ಸರ್ ಗಳ ಸುರಿಮಳೆಗೈದರು. ಕೇವಲ 10 ಎಸೆತ ಎದುರಿಸಿದ ಉಮೇಶ್ ಭರ್ಜರಿ ಐದು ಸಿಕ್ಸರ್ ಬಾರಿಸಿ 31 ರನ್ ಗಳಸಿದರು.
ಆಫ್ರಿಕಾ ಪರ ಜಾರ್ಜ್ ಲಿಂಡೆ ನಾಲ್ಕು ವಿಕೆಟ್ ಪಡೆದರೆ, ರಬಾಡ ಮೂರು ವಿಕೆಟ್ ಕಬಳಿಸಿದರು. ಡೇನ್ ಪೀಟ್ ಮತ್ತು ನೋರ್ಜೆ ತಲಾ ಒಂದು ವಿಕೆಟ್ ಹಂಚಿಕೊಂಡರು.
ಪ್ರಥಮ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಕೇವಲ 9 ರನ್ ಗಳಿಗೆ ಆರಂಭಿಕರನ್ನಿಬ್ಬರನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ. ಸದ್ಯ ಮಂದ ಬೆಳಕಿನ ಕಾರಣ ಆಟವನ್ನು ಸ್ಥಗಿತಗೊಳಿಸಲಾಗಿದೆ.