ಆಡಳಿತದ ವಿರುದ್ಧ ಅಸಮಾಧಾನ


Team Udayavani, Nov 15, 2019, 5:17 AM IST

14-KBL-1

ಕುಂಬಳೆ : ಪೈವಳಿಕೆ ಗ್ರಾಮ ಪಂಚಾಯತ್‌ನ ಸಾರ್ವಜನಿಕ ಶವ ಪೆಟ್ಟಿಗೆಗಳು ಮಾಯವಾಗಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.

ಪಂಚಾಯತಿನ ಕಳೆದ ಎರಡು ವರ್ಷದ ಹಿಂದಿನ ಸರಕಾರದ ಜನಪರ ಯೋಜನೆಯಲ್ಲಿ ಒಳಪಡಿಸಿ ಶವದಹನ ಕ್ಕಾಗಿ ನಾಲ್ಕು ಶವ ಪೆಟ್ಟಿಗೆಗಗಳನ್ನು ನಿರ್ಮಿಸಲಾಗಿತ್ತು. ಪಂಚಾಯತ್‌ ವ್ಯಾಪ್ತಿಯೊಳಗೆ ಪೆಟ್ಟಿಗೆ ನಿರ್ಮಿಸುವ ಅದೆಷೋr ವರ್ಕ್‌ಶಾಪ್‌ಗ್ಳಿದ್ದರೂ ಶವ ಪೆಟ್ಟಿಗೆ ನಿರ್ಮಿಸಲು ಬಲುದೂರದ ಕಾಞಂಗಾಡಿನ ಖಾಸಗೀ ಸಂಸ್ಥೆಯೊಂದಕ್ಕೆ ಪೆಟ್ಟಿಗೆ ನಿರ್ಮಿಸಲು ಗುತ್ತಿಗೆ ನೀಡಲಾಗಿತ್ತು. ಈ ಪೆಟ್ಟಿಗೆಗೆ ಸುಮಾರು 4 ಲಕ್ಷ ನಿಧಿ ವ್ಯಯಿಸಲಾಗಿದೆ.ಪೆಟ್ಟಿಗೆ ನಿರ್ಮಿಸಿ ತಂದ ಬಳಿಕ ಇದನ್ನು ಕೊಮ್ಮಂಗಳ ಸ್ಮಶಾನದಲ್ಲಿ ಮತ್ತು ಕುಡಾಲು ಮೇರ್ಕಳ,ಬಾಯಾರು, ಕುರುಡಪದವು ಎಂಬೆಡೆಗಳಲ್ಲಿ ಶವ ದಹನಕ್ಕಾಗಿ ಇರಿಸಲಾಗಿತ್ತು.ಆದರೆ ಈ ಪೆಟ್ಟಿಗೆ ಅವೈಜ್ಞಾನಿಕವಾಗಿ ನಿರ್ಮಿಸಿದೆ ಎಂಬ ಆರೋಪ ಆರಂಭದಲ್ಲೇ ಕೇಳಿ ಬಂದಿತ್ತು.ಪೆಟ್ಟಿಗೆಯನ್ನು ಹಿಡಿದೆತ್ತಲು ಇದಕ್ಕೆ ಪಕ್ಕದಲ್ಲಿ ಹ್ಯಾಂಡಲ್‌ ನಿರ್ಮಿಸಿಲ್ಲ .ಮತ್ತು ಅಳತೆಯಲ್ಲಿ ಪೆಟ್ಟಿಗೆ ಸಾಕಷ್ಟು ಉದ್ದವಿಲ್ಲವೆಂಬ ಆರೋಪದಲ್ಲಿ ಪೆಟ್ಟಿಗೆಯನ್ನು ಸರಿಪಡಿಸಲು ಕಳೆದ ಆರು ತಿಂಗಳ ಹಿಂದೆ ಗುತ್ತಿಗೆದಾರ ಇದನ್ನು ಒಯ್ದಿರುವರು.ಆದರೆ ಬಳಿಕ ಗ್ರಾಮ ಪಂಚಾಯತ್‌ ವತಿಯಿಂದ ಪದೇ ಪದೇ ದೂರವಾಣಿ ಮೂಲಕ ಗುತ್ತಿಗೆದಾರನಿಗೆ ಕರೆ ಮಾಡಿದರೂ ಪೆಟ್ಟಿಗೆ ಮಾತ್ರ ಈ ತನಕ ಸರಿಪಡಿಸಿ ಹಿಂದಿರುಗಿಸಿಲ್ಲ.ಅಲ್ಲದೆ ಕಳೆದ ವಾರ ಗ್ರಾ. ಪಂ. ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಗುತ್ತಿಗೆದಾರನನ್ನು ಹುಡುಕಿ ಕಾಞಂಗಾಡಿಗೆ ತೆರಳಿದಾಗ ಈತನ ವರ್ಕ್‌ಶಾಪ್‌ಗೆ ಬೀಗ ಜಡಿಯಲಾಗಿತ್ತಂತೆ. ವಿಚಾರಿಸಿದಾಗ ಕೆಲ ದಿನಗಳಿಂದ ಈತ ನಾಪತ್ತೆಯಾಗಿರುವನ‌ಂತೆ. ಗುತ್ತಿಗೆದಾರನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಗ್ರಾ ಪಂ ಆಡಳಿತ ಮುಂದಾಗಿದೆ.

ವಿಪಕ್ಷ ಆರೋಪ
ಎಡಬಲರಂಗ ಮೈತ್ರಿಯ ಆಡಳಿತದಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ.ಗ್ರಾ.ಪಂ. ವ್ಯಾಪ್ತಿಯ ವಿವಿದೆಡೆಗಳಲ್ಲಿ ಅಳವಡಿಸಿದ ದಾರಿ ದೀಪವೂ ಕಳಪೆ ಯಾಗಿದ್ದು ಇದು ಕೇವಲ ಕೆಲವೇದಿನ ಮಾತ್ರ ಉರಿದಿದೆ.ಬಳಿಕ ಕೆಟ್ಟು ಹೋದವುಗಳನ್ನು ಸರಿಪಡಿ ಸುವುದಾಗಿ ಗುತ್ತಿಗೆದಾರರು ಒಯ್ದು ಕೆಲವನ್ನು ಮಾತ್ರ ಸರಿ ಪಡಿಸಿ ಎಲ್ಲಾ ವಾರ್ಡಿನಲ್ಲಿ ಮರುಸ್ಥಾಪಿಸಿಲ್ಲ.ಮಾತ್ರವಲ್ಲದೆ ಆಯಾ ವಾರ್ಡಿನ ಚುನಾಯಿತ ಸದಸ್ಯರ ಗಮನಕ್ಕೆ ತಾರದೆ ಗುತ್ತಿಗೆದಾರರಿಗೆ ಆಡಳಿತ ಬಿಲ್‌ ನೀಡಿದೆ ಎಂಬ ಆರೋಪ ಪ್ರತಿಪಕ್ಷ ಬಿಜೆಪಿ ಸದಸ್ಯರದು. ಶವಪೆಟ್ಟಿಗೆ ನಿರ್ಮಿಸಿದ ಯೋಜನೆಯಲ್ಲಿ ಆಡಳಿತದ ಅಲಕ್ಷÂದಿಂದ ಶವಪೆಟ್ಟಿಗೆ ಮಾಯವಾಗಲು ಕಾರಣವೆಂಬುದಾಗಿ ವಿಪಕ್ಷ ಆರೋಪಿಸಿದೆ.

ಕ್ರಮ ಕೈಗೊಳ್ಳಲಾಗುವುದು
ಶವಪೆಟ್ಟಿಗೆಯನ್ನು ದುರಸ್ತಿಗಾಗಿ ಒಯ್ದ ಬಳಿಕ ಹಲವು ಬಾರಿ ಸರಿಪಡಿಸಿ ಹಿಂದಿರುಗಿಸಲು ಗುತಿತಗೆದಾರರಿಗೆ ತಿಳಿಸಲಾಗಿದೆ.ಆದರೆ ಈ ತನಕ ಹಿಂದಿರುಗಿಸದ ಕಾರಣ ಗುತ್ತಿಗೆದಾರನ ವಿರುದ್ಧ ಪೊಲೀಸ್‌ ಅಧಿಕಾರಿಗೆ ದೂರು ಸಲ್ಲಿಸಿ ಶವ ಪೆಟ್ಟಿಗೆಯನ್ನು ತಕ್ಷಣ ತರಿಸುವ ಕ್ರಮ ಕೈಗೊಳ್ಳಲಾಗುವುದು.
– ಭಾರತಿ ಶೆಟ್ಟಿ,
ಗ್ರಾಮ ಪಂಚಾಯತ್‌ ಅಧ್ಯಕ್ಷೆ

ತಕ್ಕ ಉತ್ತರ ದೊರಕಲಿದೆ
ಎಡಬಲ ಮೈತ್ರಿಯ ದುರಾಡಳಿತದ ಅವ್ಯವಹಾರಕ್ಕೆ ಸಾಕ್ಷಿ ಶವ ಪಟ್ಟಿಗೆ ಹಗರಣ.ಇಂತಹಾ ಹಲವಾರು ಭ್ರಷ್ಟಾಚಾರಗಳು ಆಡಳಿತದಲ್ಲಿ ನಡೆದಿವೆ.ಇದರ ವಿರುದ್ಧ ಬಿಜೆಪಿ ವತಿಯಿಂದ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ.ಮುಂದಿನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಮತದಾರರಿಂದ ಇದಕ್ಕೆ ತಕ್ಕ ಉತ್ತರ ದೊರಕಲಿದೆ.
– ಎಚ್‌.ಸುಬ್ರಹ್ಮಣ್ಯ ಭಟ್‌,
ಪ್ರತಿಪಕ್ಷ ಸದಸ್ಯ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.