ಜ್ಯೋತಿ ಅವರ ಕೃತಿ ಮೈಸೂರಿನಲ್ಲಿ ಸಿಎಂ ಬಿಡುಗಡೆ

ಯಕ್ಷಗಾನ ಪ್ರಸಂಗವಾಯಿತು ಪ್ರಧಾನಿ ಜೀವನಗಾಥೆ!

Team Udayavani, Nov 29, 2019, 5:26 AM IST

28KSDE2

ಕಾಸರಗೋಡು: ಅತಿಮಾನುಷ ಸಾಧನೆಗೈದ ವೀರ ಸಾಹಸಿಗರ ಜೀವನಗಾಥೆಯನ್ನು ಆಧರಿಸಿದ ಪ್ರಸಂಗಗಳು ಯಕ್ಷಗಾನಕ್ಕೆ ಹೊಸತಲ್ಲ. ಆದರೆ ದೇಶದ ಪ್ರಧಾನಮಂತ್ರಿಯೊಬ್ಬರ ಬದುಕಿನ ಯಶೋಗಾಥೆ, ರಾಜಕೀಯ ಏಳಿಗೆಯ ಕಥೆ, ದೇಶದ ಅಭ್ಯುದಯದ ಹೆಜ್ಜೆಯ ಕಥೆ ಯಕ್ಷಗಾನಕ್ಕೆ ಇದೇ ಮೊದಲು. ಅದುವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನುದ್ದೇಶಿಸಿದ “ನರೇಂದ್ರ ವಿಜಯ’. ಹೀಗೊಂದು ಪ್ರಸಂಗ ಹೆಣೆಯುವ ಕಥನ ಕೈಂಕರ್ಯ ಮುಗಿದು, ನೂತನ ಚರಿತ್ರೆಯ ಕೃತಿಯನ್ನು ಮೈಸೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಡುಗಡೆಗೊಳಿಸಿದರು.

ಉದಯೋನ್ಮುಖ ಮಹಿಳಾ ಯಕ್ಷಗಾನ ಕಲಾವಿದೆ ಜ್ಯೋತಿ ಶಾಸ್ತ್ರಿ ಅವರು ಹೆಣೆದಿರುವ ಪ್ರಧಾನಿ ನರೇಂದ್ರಮೋದಿಯವರ ಯಕ್ಷಗಾನೀಯ ಜೀವನಗಾಥೆಗೆ ಪ್ರಸಿದ್ಧ ಕಲಾವಿದ, ಪ್ರಸಂಗಕತೃ ಎಂ.ಕೆ.ರಮೇಶ ಆಚಾರ್ಯ ಪದ್ಯಗಳನ್ನು ಬರೆದಿದ್ದಾರೆ.

ಜಾಗತಿಕ ನೆಲೆಯಲ್ಲಿ ಭಾರತವನ್ನು ವಿಶ್ವರಾಷ್ಟ್ರಗಳ ಮುಂದೆ ಮುಂಪಕ್ತಿಯಲ್ಲಿ ನಿಲ್ಲುವಂತೆ ಮತ್ತು ಗೌರವಿಸುವಂತೆ ಮಾಡಿದ ಪ್ರಧಾನಿ ಮೋದಿಯವರ ಜೀವನದ ಸಂಕ್ಷಿಪ್ತ ಪೂರ್ವ ವೃತ್ತಾಂತ ಮತ್ತು ಗುಜರಾತಿನ ಮುಖ್ಯಮಂತ್ರಿಯಾಗಿ ಅಭಿವೃದ್ಧಿ ಪರ್ವವನ್ನು ದೇಶಕ್ಕೆ ಪರಿಚಯಿಸಿದ ಮೋದಿಯವರ ಯಶೋಗಾಥೆಯಲ್ಲಿ ಬಲಗೈಯ್ಯಂತೆ ನಿಂತ ಅಮಿತ್‌ ಶಾರ ಕುರಿತಾಗಿಯೂ ಪ್ರಸಂಗದಲ್ಲಿ ವಿಶೇಷ ಪಾತ್ರಚಿತ್ರಣಗಳಿವೆ.

ಒಟ್ಟಂದದಲ್ಲಿ ಮೋದಿ ವೈಭವೀಕರಣಕ್ಕಿಂತ ಮಿಗಿಲಾಗಿ ಯಕ್ಷಗಾನೀಯ ಆಶಯದಲ್ಲಿ ಎಲ್ಲಾ ರಸಗಳ ಆಧಾರದಲ್ಲಿ ವೈವಿಧ್ಯ ಪಾತ್ರಗಳು ಮತ್ತು ಮೋದಿ ಆಡಳಿತ ಬಂದ ಮೇಲೆ ದೇಶದಲ್ಲಿ ನಡೆದ ಪಲ್ಲಟಗಳು, ಕರೆನ್ಸಿ ಬದಲಾವಣೆ ಹಾಗೂ ಪರಿಣಾಮ, ಉಗ್ರರನ್ನು ಹೆಡೆಮುರಿಕಟ್ಟಿದ ದಿಟ್ಟತೆ ಸೇರಿದಂತೆ ವೈವಿಧ್ಯ ರಸಘಟ್ಟಗಳು ಬರುವಂತೆ ಕಥನ ಶೈಲಿಯಲ್ಲಿ ಹೆಣೆದ ಯಕ್ಷಗಾನ ಪ್ರಸಂಗವನ್ನು ಹಿಂದಿ ಭಾಷೆಗೂ ತರ್ಜುಮೆ ಮಾಡಲಾಗುತ್ತಿದೆ.

ಮುಂಬರುವ ದಿನಗಳಲ್ಲಿ ದೆಹಲಿಯಲ್ಲೂ ಪ್ರದರ್ಶನ ಏರ್ಪಡಿಸುವಂತೆ ಸಂಕಲ್ಪ ತೊಡಲಾಗಿದೆ.ಕರಾವಳಿಯಲ್ಲಿ ಜನರ ಮೇಲೆ ಯಕ್ಷಗಾನದಷ್ಟು ಪ್ರಭಾವ ಬೀರುವ ಕಲೆ ಮತ್ತೂಂದಿಲ್ಲ.

ಈ ದಿಶೆಯಲ್ಲಿ ಯಕ್ಷಗಾನದ ಮೂಲಕ ಭಾರತದ ಭವ್ಯ ನವೋತ್ಥಾನಕ್ಕೆ ಮುನ್ನುಡಿ ಬರೆದ ರಾಷ್ಟ್ರನಾಯಕರ ಕತೆಯನ್ನು ಹೇಳುತ್ತಾ, ದೇಶಭಕ್ತಿಯ ಸ್ಫೂರ್ತಿಗಾಥೆಗಳನ್ನು ತಿಳಿಸುತ್ತಾ ಹೊಸ ಪೀಳಿಗೆಯಲ್ಲಿ ಭಾರತದ ನವನಿರ್ಮಾಣದ ಪ್ರೇರಣೆ ಮೂಡಿಸುವುದಷ್ಟೇ ಈ ಪ್ರಸಂಗದ ಆಶಯ.

ಇದು ಎಲ್ಲಾ ಮೇಳಗಳಲ್ಲೂ, ಎಲ್ಲಾ ಹವ್ಯಾಸಿ ಸಂಘಸಂಸ್ಥೆಗಳಲ್ಲೂ ಪ್ರದರ್ಶನಗೊಳ್ಳಬೇಕು. ಕೇವಲ 11 ಕಥಾಪಾತ್ರಗಳಿರುವ, ಎರಡೂವರೆ ತಾಸಿನ ಕಥಾಹಂದರ ಇದಾಗಿದ್ದು, ಮೊದಲ ಪ್ರದರ್ಶನಕ್ಕೆ ಸ್ಥಳ ನಿರ್ಣಯವಾಗಿಲ್ಲ.
ಪ್ರಾಯೋಜಕತ್ವ ಒದಗಿಸಿದ್ದಲ್ಲಿ ಯಕ್ಷಗಾನೀಯ ವಾತಾವರಣ ಇದ್ದಡೆ ಪ್ರದರ್ಶನ ನೀಡಲು ತಂಡ ಸಜ್ಜಾಗಿದೆಯೆಂದು ಪ್ರಸಂಗಕರ್ತೆ, ಕಲಾವಿದೆ ಜ್ಯೋತಿ ಶಾಸ್ತ್ರಿ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲಿನಲ್ಲಿ ನ.26ರಂದು ನಡೆದ ಕೃತಿ ಬಿಡುಗಡೆ ಸಮಾರಂಭದ‌ಲ್ಲಿ ಮುಖ್ಯಮಂತ್ರಿಯವರ ಜೊತೆ ಹುಣಸೂರು ಬಿಜೆಪಿ ಅಭ್ಯರ್ಥಿ ಅಡಗೂರು ವಿಶ್ವನಾಥ, ಶಾಸಕ ನಾಗೇಂದ್ರ, ಉದ್ಯಮಿ ಇವಾಂಕಾ ಗ್ರೂಪ್‌ ಆಫ್‌ ಡೆವಲಪರ್ ಎಂ.ಡಿ. ಗೋಪಾಲಕೃಷ್ಣ, ಪ್ರಸಂಗಕರ್ತೆ, ಕಲವಿದೆ ಜ್ಯೋತಿಶಾಸ್ತ್ರಿ ತೀರ್ಥಹಳ್ಳಿ ಉಪಸ್ಥಿತರಿದ್ದರು

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.