ಚಿತ್ರತಂಡಕ್ಕೆ 25 ದಿನದ ಸಂಭ್ರಮ


Team Udayavani, Dec 20, 2019, 11:53 AM IST

cinema-tdy-3

“ನಮ್ಮ ಮೇಷ್ಟ್ರು ಮಾಡಿದ ಪಾಠ ಯಶಸ್ವಿ 25 ದಿನ ಪೂರೈಸಿದ್ದು, 50 ದಿನಗಳವರೆಗೂ ಜನರು ಅವರ ಪಾಠ ಕೇಳ್ತಾರೆ ಎಂಬ ನಂಬಿಕೆ ನನಗಿದೆ…’

– ನಿರ್ದೇಶಕ ಕವಿರಾಜ್‌ ತಮ್ಮ “ಕಾಳಿದಾಸ ಕನ್ನಡ ಮೇಷ್ಟ್ರು’ ಕುರಿತು ಹೀಗೆ ಹೇಳಿ ಖುಷಿಗೊಂಡರು. ಹಲವು ಸಿನಿಮಾಗಳ ನಡುವೆಯೂ ಯಶಸ್ವಿ 25 ದಿನ ಪೂರೈಸಿರುವ ಚಿತ್ರದ ಕುರಿತು ಹೇಳಲೆಂದೇ ಕವಿರಾಜ್‌, ತಮ್ಮ ಚಿತ್ರತಂಡದ ಜೊತೆ ಆಗಮಿಸಿದ್ದರು. ಅಂದು ಕವಿರಾಜ್‌ “ಮೇಷ್ಟ್ರು’ ಬಗ್ಗೆ ಹೇಳಿದ್ದಿಷ್ಟು. “ನಾನು ಬರಹಗಾರನಾಗಿ ಎರಡು ದಶಕ ಪೂರೈಸಿದ್ದೇನೆ. ರೈಟರ್‌ ಆಗಿ ಗುರುತಿಸಿಕೊಂಡೆ. ಆದರೆ, ನಿರ್ದೇಶಕನಾಗಿ ಗುರುತಿಕೊಂಡಿಲ್ಲವಲ್ಲ ಎಂಬ ಕೊರಗು ಇತ್ತು. “ಕಾಳಿದಾಸ ಕನ್ನಡ ಮೇಷ್ಟ್ರು’ ಅದನ್ನು ನೀಗಿಸಿದೆ. ನಾನು ಹತ್ತು ಸಿನಿಮಾ ಮಾಡಿದಷ್ಟು ಹೆಸರು ಈ ಸಿನಿಮಾದಲ್ಲಿ ಸಿಕ್ಕಿದೆ. ಇದಕ್ಕಿಂತಲೂ ಅದ್ಭುತ ತಾಂತ್ರಿಕತೆ ಇರುವ, ಕಂಟೆಂಟ್‌ ಇರುವ, ಮನರಂಜನೆ ಇರುವ ಸಾವಿರಾರು ಚಿತ್ರಗಳಿವೆ. ಆದರೆ, ಈ ಚಿತ್ರ ತನ್ನದೇ ದಾಟಿಯಲ್ಲಿ ನೋಡುಗರನ್ನು ಸೆಳೆದಿದೆ ಎಂಬ ದೊಡ್ಡ ಸಂತೃಪ್ತಿ ನನ್ನದು. ಗುಣಾತ್ಮಕ ವಿಷಯ ಇದ್ದರೆ ಖಂಡಿತ ಜನ ಕೈ ಹಿಡಿಯುತ್ತಾರೆ ಎಂಬುದಕ್ಕೆ ಈ ಚಿತ್ರ ಸಾಕ್ಷಿ.

ಚಿತ್ರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಈಗ ಸಾಗರದಾಚೆಯೂ ಚಿತ್ರ ಪ್ರದರ್ಶನ ಕಾಣಲಿದೆ. ಯುಎಸ್‌ಎ, ದುಬೈ, ಕೆನಡಾ, ಸಿಂಗಾಪುರ್‌ ಇತರೆ ದೇಶಗಳಲ್ಲಿ ಮೇಷ್ಟ್ರು ಪಾಠ ಕೇಳಲು ಅಲ್ಲಿನ ಕನ್ನಡಿಗರು ಬಯಸಿದ್ದಾರೆ. ಇದಕ್ಕಿಂತ ದೊಡ್ಡ ಖುಷಿ ಮತ್ತೂಂದಿಲ್ಲ. ಇನ್ನು, ಹೊಸ ಸುದ್ದಿಯೆಂದರೆ, ತೆಲುಗು ಭಾಷೆಯ ನಿರ್ಮಾಪಕರೊಬ್ಬರು ಅಲ್ಲಿನ ಇಂಡಸ್ಟ್ರಿಗೆ ಸಿನಿಮಾ ತೋರಿಸುವ ತಯಾರಿ ನಡೆಸಿದ್ದಾರೆ. ಡಿ.22 ರಂದು ಹೈದರಾಬಾದ್‌ನಲ್ಲಿ ಪ್ರದರ್ಶನ ಕಾಣಲಿದೆ. ಬಾಲಿವುಡ್‌ ಮಂದಿ ಕೂಡ ಚಿತ್ರ ನೋಡುವ ಬಯಕೆ ವ್ಯಕ್ತಪಡಿಸಿದ್ದಾರೆ. ನಿಜ ಹೇಳುವುದಾದರೆ, ಹಾಕಿದ ಹಣ ಬಂದಿದೆ. ಇದು ಪ್ರಾಮಾಣಿಕ ಮಾತು. ಎಲ್ಲರ ಶ್ರಮಕ್ಕೆ ಫ‌ಲ ಸಿಕ್ಕಿದೆ.

ಚಿತ್ರ ಈ ರೀತಿಯ ಯಶಸ್ಸು ಪಡೆಯೋಕೆ ಮಾಧ್ಯಮ, ಪತ್ರಕರ್ತರು ಕಾರಣ’ ಎನ್ನುತ್ತಲೇ ಎಲ್ಲರಿಗೂ ಧನ್ಯವಾದ ಅರ್ಪಿಸಿದರು ಕವಿರಾಜ್‌. ಜಗ್ಗೇಶ್‌ ಅವರಿಗೂ ಚಿತ್ರ ಯಶಸ್ಸು ಪಡೆದಿದ್ದಕ್ಕೆ ಖುಷಿ ಇದೆಯಂತೆ. ಜನರು ಒಳ್ಳೆಯ ವಿಷಯವನ್ನು ಎಂದಿಗೂ ಕೈ ಬಿಡುವುದಿಲ್ಲ. ಪೋಷಕರು ತಮ್ಮ ಮಕ್ಕಳ ಜೊತೆ ಚಿತ್ರ ನೋಡಬೇಕು. ಸಿನಿಮಾ ನೋಡಿದ ಹಲವರು ಸಂದೇಶ ಕಳುಹಿಸಿದ್ದಾರೆ. ಒಂದಷ್ಟು ಜನರಿಗೆ ಸಿನಿಮಾ ನೋಡುವಂತೆ ಹೇಳುತ್ತಿದ್ದಾರೆಂದರೆ, ಅದು ಚಿತ್ರದಲ್ಲಿರುವ ತಾಕತ್ತು’ ಎಂದರು ಜಗ್ಗೇಶ್‌. ನಾಯಕಿ ಮೇಘನಾ ಗಾಂವ್ಕರ್‌ ಅವರಿಗೆ ಕಥೆ ಕೇಳುವಾಗಲೇ, ಈ ಚಿತ್ರ ಯಶಸ್ಸು ಪಡೆಯುತ್ತೆ ಎಂದು ಅನಿಸಿತಂತೆ. ಆದರೆ, ಅದು ಈ ರೀತಿಯ ದೊಡ್ಡ ಯಶಸ್ಸು ಸಿಗುತ್ತೆ ಅಂತ ಗೊತ್ತಿರಲಿಲ್ಲವಂತೆ. ಬಹಳ ದಿನಗಳ ಬಳಿಕ ಒಳ್ಳೆಯ ಸಿನಿಮಾ ಮಾಡಿದ ಖುಷಿ ನನ್ನದು.

ಕವಿರಾಜ್‌ ಅವರ ನಿರ್ದೇಶನದಲ್ಲಿಂದು ಹೊಸ ಶೈಲಿ ಇದೆ. ತುಂಬಾ ತಾಳ್ಮೆಯಿಂದ, ಏನು ಬೇಕೋ ಅಷ್ಟನ್ನೇ ಕೇಳಿ ಪಡೆಯುವ ನಿರ್ದೇಶಕರು ಅವರು, ಸೆಟ್‌ಗೆ ಮುನ್ನ ಮಾಡಿಕೊಂಡ ತಯಾರಿ ಈ ಯಶಸ್ಸಿಗೆ ಕಾರಣ’ ಎಂದರು ಮೇಘನಾ ಗಾಂವ್ಕರ್‌. ಛಾಯಾಗ್ರಾಹಕ ಎಲ್‌.ಎಂ.ಸೂರಿ (ಗುಂಡ್ಲುಪೇಟೆ ಸುರೇಶ್‌) ಅವರು ಅಷ್ಟೊಂದು ಚಿತ್ರ ಮಾಡಿದ್ದರೂ, ಅಷ್ಟಾಗಿ ಮೆಚ್ಚುಗೆ ಸಿಕ್ಕಿರಲಿಲ್ಲವಂತೆ. ಆದರೆ, ಈ ಚಿತ್ರ ನೋಡಿ ಹೊರಬಂದ ಅದೆಷ್ಟೋ ಜನ ಫೋನ್‌ ಮಾಡಿ ಶುಭಹಾರೈಸಿದ್ದಾರಂತೆ. ಶ್ರಮ ಮತ್ತು ಶ್ರದ್ಧೆಯ ಜೊತೆ ಒಳ್ಳೆಯ ವಿಷಯ ಇದ್ದರೆ ಸಿನಿಮಾ ಗೆಲುವು ಕೊಡುತ್ತೆ ಎಂಬುದಕ್ಕೆ ಈ ಚಿತ್ರ ಕಾರಣ’ ಎಂಬುದು ಎಲ್‌. ಎಂ.ಸೂರಿ ಮಾತು. ವಿತರಕ ದೀಪಕ್‌ ಅವರು ಸಿನಿಮಾ ಪ್ರಾಮಾಣಿಕವಾಗಿಯೇ 25 ದಿನ ಪೂರೈಸಿದೆ. ಈಗಿನ ದಿನದಲ್ಲಿ ಇಷ್ಟು ದಿನ ಪ್ರದರ್ಶನ ಕಾಣುವುದು ಕಷ್ಟ. ಕೆಲವು ಚಿತ್ರಮಂದಿರಗಳಲ್ಲಿ ಬೇಡಿಕೆ ಇಟ್ಟು ಸಿನಿಮಾ ಹಾಕಿಸಿಕೊಂಡಿದ್ದಾರೆ ಎಂದರು.

ಟಾಪ್ ನ್ಯೂಸ್

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.