ಬಾಯಿ ಹುಣ್ಣಿನ ನಿವಾರಣೆ ಹೇಗೆ ?
Team Udayavani, Dec 24, 2019, 5:09 AM IST
ಬಾಯಿ ಹುಣ್ಣು ಅಥವಾ ಮೌತ್ ಅಲ್ಸರ್ ಇದು ಬಾಯಿಯ ಒಳಗಡೆ ಉಂಟಾಗುವುವ ಒಂದು ಹುಣ್ಣು. ಇದರ ನೋವು ಅಸಹನೀಯ. ಈ ಹುಣ್ಣಿನ ನೋವಿನಿಂದಾಗಿ ಜ್ವರ ಬರಬಹುದು, ಆಯಾಸವಾಗಬಹುದು ಮತ್ತು ಹಲ್ಲಿನ ಒಸಡುಗಳು ಊದಿಕೊಳ್ಳಬಹುದು. ಸಾಮಾನ್ಯವಾಗಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ, ಉಷ್ಣತೆ ಜಾಸ್ತಿಯಾದಾಗ ಬಾಯಿಯಲ್ಲಿ ಹುಣ್ಣಾಗುತ್ತದೆ. ಅದರಲ್ಲೂ ಉಪ್ಪು ಹುಳಿ ಖಾರಗಳನ್ನು ಬಾಯಿಗೆ ಹಾಕಲು ಸಾಧ್ಯವಾಗುವುದಿಲ್ಲ. ಅತಿಯಾದ ಮಸಾಲೆಯುಕ್ತ ಆಹಾರ, ಆ್ಯಸಿಡಿಕ್ ಆಹಾರ ನಮ್ಮ ದೇಹಕ್ಕೆ ಅಲರ್ಜಿಯಾಗುವ ಆಹಾರಗಳನ್ನು ನಾವು ಸೇವಿಸಿದರೆ ಅಥವಾ ಹಲ್ಲನ್ನು ಸರಿಯಾಗಿ ಶುಚಿಗೊಳಿಸದ ಕಾರಣದಿಂದಾಗಿ, ಅತಿಯಾದ ಒತ್ತಡ, ಇಟಮಿನ್ ಬಿ, ಸಿ ಸೇರಿದಂತೆ ಪೌಷ್ಠಿಕಾಂಶದ ಕೊರತೆಯಿಂದ ಬಾಯಿಯಲ್ಲಿ ಹುಣ್ಣು ಉಂಟಾಗುವ ಸಾಧ್ಯತೆ ಇದೆ.
ಈ ಸಮಸ್ಯೆಯಿಂದ ನಿಮಗೆ ಮುಕ್ತಿ ಬೇಕಾದರೆ ನೀವು ಮನೆಯಲ್ಲೇ ಈ ಹುಣ್ಣನ್ನು ನಿವಾರಿಸಿಕೊಳ್ಳಬಹುದು.
ತುಳಸಿ ಎಲೆ
ತುಳಸಿ ಎಲೆ ಬಾಯಿ ಹುಣ್ಣಿನ ನಿವಾರಣೆ ಮಾಡುತ್ತದೆ. ಹತ್ತು ದಿನ ತುಳಸಿ ಎಲೆ ಜಗಿದು ನೀರು ಕುಡಿಯಬೇಕು. ಇದರಿಂದಾಗಿ ಬಾಯಿ ಹುಣ್ಣು ಶಮನಗೊಳ್ಳಬಹುದು.
ಮೆಂತೆ ಎಲೆ
ಮೆಂತೆ ಎಲೆಯನ್ನು ನೀರಿನಲ್ಲಿ ಸರಿಯಾಗಿ ಕುದಿಸಿ ದಿನಕ್ಕೆ ಮೂರು ಬಾರಿ ಬಾಯಿ ಮುಕ್ಕಳಿಸುತ್ತಿದ್ದರೆ ಬಾಯಿ ಹುಣ್ಣು ನಿವಾರಣೆಗೊಳ್ಳುತ್ತದೆ.
ಅರಶಿಣ
ಸಾಮಾನ್ಯವಾಗಿ ಅರಶಿಣ ನಮ್ಮ ಎಲ್ಲರ ಮನೆಯಲ್ಲಿ ಸಿಗುವಂತ ವಸ್ತು. ಚಿಟಿಕಿ ಅರಶಿಣವನ್ನು ಹುಣ್ಣು ಆದ ಜಾಗಕ್ಕೆ ಹಚ್ಚುತ್ತಾ ಬಂದರೆ ಹುಣ್ಣು ನಿವಾರಣೆಯಾಗುತ್ತದೆ.
ಬಸಲೆಸೊಪ್ಪು: ಎರಡು ಬಸಲೆ ಸೊಪ್ಪನ್ನು ಚೆನ್ನಾಗಿ ಅಗೆದು ತಿನ್ನಬೇಕು. ಇದನ್ನು ದಿನದಲ್ಲಿ 3-4 ಬಾರಿ ಮಾಡಬೇಕು. ಈ ರೀತಿ ಮಾಡುವುದರಿಂದ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.
ಜೇನುತುಪ್ಪ
ಹುಣ್ಣಾಗಿರುವ ಜಾಗದಲ್ಲಿ ಜೇನುತುಪ್ಪವನ್ನು ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆದುಕೊಂಡರೆ ಅದರ ಉರಿ ಕಡಿಮೆಯಾಗುತ್ತದೆ. ಜೇನುತುಪ್ಪಕ್ಕೆ ಅರಶಿಣ ಹಾಕಿ ಹುಣ್ಣಾದಲ್ಲಿಗೆ ಹಚ್ಚಿದರೆ 10ರಿಂದ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ ಹುಣ್ಣು ಮಾಯವಾಗುತ್ತದೆ.
ತೆಂಗಿನ ಹಾಲು
ಒಂದು ತೆಂಗಿನ ಕಾಯಿಯ ಹಾಲನ್ನು ತೆಗೆದುಕೊಂಡು ಅದನ್ನು ನಿಧಾನವಾಗಿ ಹುಣ್ಣುಗಳ ಮೇಲೆ ಮಸಾಜ್ ಮಾಡುತ್ತಾ ಬಂದರೆ ಬಾಯಿ ಹುಣ್ಣು ನಿವಾರಣೆಯಾಗುತ್ತದೆ. ಪ್ರತಿದಿನ ಮಲಗುವ ಮುನ್ನ ಸರಿಯಾಗಿ ಬಾಯಿ ಮುಕ್ಕಳಿಸಿ, ಉಪಹಾರದ ನಂತರವೂ ಈ ರೀತಿ ಮಾಡುವುದರಿಂದ ಬಾಯಿಯಲ್ಲಿ ಉಂಟಾಗುವ ಹುಣ್ಣನ್ನು ತಡೆಗಟ್ಟಬಹುದು.
ಟೊಮೇಟೊ
ಬಾಯಿ ಹುಣ್ಣಿಗೆ ಟೊಮೇಟೊ ಉತ್ತಮ ಕೆಲಸ ಮಾಡುತ್ತದೆ. ಹಸಿಯಾದ ಟೊಮ್ಯಾಟೋ ತಿಂದರೆ ಅಥವಾ ಟೊಮ್ಯಾಟೋ ಜ್ಯೂಸ್ ಮಾಡಿ ಅದರಲ್ಲಿ ಬಾಯಿ ಮುಕ್ಕಳಿಸಿಕೊಂಡರೆ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.
- ಪೂರ್ಣಿಮಾ ಪೆರ್ಣಂಕಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Kunigal; ಬೈಕ್ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ
ನಮ್ಮ ವಿರುದ್ಧ ಷಡ್ಯಂತ್ರ: ಎಚ್.ಡಿ. ರೇವಣ್ಣ