ವಿದ್ಯಾರ್ಥಿನಿಯರ ಮೇಲೆ ಸಲಗ ದಾಳಿ
Team Udayavani, Jan 4, 2020, 3:00 AM IST
ಮಡಿಕೇರಿ: ಶಾಲೆಗೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದ್ದರಿಂದ ಓರ್ವಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದ ಇಂಜಿಲಗೆರೆಯಲ್ಲಿ ನಡೆದಿದೆ. ಇಂಜಿಲಗೆರೆ ನಿವಾಸಿ ಮಣಿ ಮತ್ತು ಮೇಘಲ ದಂಪತಿ ಪುತ್ರಿಯರಾದ ಯುವಶ್ರೀ (7), ನಿತ್ಯಶ್ರೀ (9) ಸೇರಿ ಸತ್ಯಾ (15) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಲಗ ದಾಳಿ ವೇಳೆ ಸತ್ಯ ಕ್ಷಣಾರ್ಧದಲ್ಲಿ ತೋರಿದ ಸಮಯ ಪ್ರಜ್ಞೆಯಿಂದ ನಿತ್ಯಶ್ರೀ ಕೂಡ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾಳೆ. ಕಾಡಾನೆ ದಾಳಿಯಿಂದ ಯುವಶ್ರೀ ತಲೆ, ದವಡೆ, ಹೊಟ್ಟೆ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಿತ್ಯಶ್ರೀ ಕಾಲಿನ ಭಾಗಕ್ಕೆ ಗಾಯವಾಗಿದ್ದು ಚೇತರಿಸಿಕೊಂಡಿದ್ದಾಳೆ.
ಏಕಾಏಕಿ ದಾಳಿ: ಇಂಜಿಲಗೆರೆ ಸರ್ಕಾರಿ ಕನ್ನಡ ಶಾಲೆಗೆ ಶುಕ್ರವಾರ ಬೆಳಗ್ಗೆ ಮನೆಯಿಂದ ಇಂಜಿಲಗೆರೆ ಮಾರ್ಗವಾಗಿ ಮಕ್ಕಳು ಶಾಲೆ ಕಡೆ ಹೊರಟಿದ್ದರು. ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ಕಾಫಿ ತೋಟದ ಒಳಗಿನಿಂದ ಒಂಟಿ ಸಲಗ ಏಕಾಏಕಿ ರಸ್ತೆಗೆ ನುಗ್ಗಿ ಬಂದು ಎದುರಿಗೆ ಸಿಕ್ಕಿದ ಯುವಶ್ರೀಯನ್ನು ಸೊಂಡಿಲಿನಿಂದ ಎತ್ತಿ ಕಾಫಿ ತೋಟದೊಳಕ್ಕೆ ಎಸೆದಿದೆ. ಜತೆಯಲ್ಲಿದ್ದ ಸತ್ಯಾ ಅಪಾಯ ಅರಿತು ನಿತ್ಯಶ್ರೀಯ ಕೈಹಿಡಿದು ಎಳೆದುಕೊಂಡು ಓಡಿ ಜೀವ ಉಳಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ