ಬನಶಂಕರಿದೇವಿ ಜಾತ್ರೆ ಆರಂಭ: ನೂತನ ಧ್ವಜಸ್ತಂಭ ಸ್ಥಾ ಪನೆ
Team Udayavani, Jan 5, 2020, 1:46 PM IST
ಬಾದಾಮಿ: ಶ್ರೀ ಬನಶಂಕರಿ ದೇವಿ ಜಾತ್ರೆ ಆರಂಭಗೊಂಡಿದೆ ದೇವಸ್ಥಾನದಲ್ಲಿ ಶ್ರೀ ದೇವಿ ಗರ್ಭ ಗುಡಿಯ ಎದುರು ನೂತನ ಧ್ವಜಸ್ತಂಭದ ಕಳಾಕರ್ಷಣೆ ಹಾಗೂ ಕಳಾದಿ ಹೋಮ ನೆರವೇರಿಸುವ ಮೂಲಕ ಆಗಮಶಾಸ್ತ್ರದ ಪ್ರಕಾರ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು.
ನೂರು ವರ್ಷಗಳ ಇತಿಹಾಸ ಹೊಂದಿದ್ದ ಹಳೆಯ ಧ್ವಜಸ್ತಂಭ ಶಿಥಿಲಗೊಂಡಿತ್ತು. ಹೀಗಾಗಿ ಆ ಧ್ವಜಸ್ತಂಭ ತೆರವುಗೊಳಿಸಲಾಯಿತು. ಆಗಮಶಾಸ್ತ್ರದ ವಿಧಿ ವಿಧಾನಗಳ ಮೂಲಕ ನೂತನ ಸ್ತಭ ಸ್ಥಾಪನೆ ಮಾಡಲಾಯಿತು.
ಧ್ವಜಸ್ತಂಭದ ವಿಶೇಷತೆ: ಚೌರಸ ಮಾದರಿಯ ಅಷ್ಠಪವನ, ವರ್ತುಲ ಆಕಾರ ಮೂರು ಭಾಗಗಳಿವೆ. ಇದರಲ್ಲಿ ಮಹಾಕಾಳಿ, ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿ ಸ್ವರೂಪದ ಢಮುರ, ತ್ರಿಶೂಲ ಆಯುಧಗಳಿವೆ. ಈ ಸ್ತಂಭವನ್ನು ಸಾಗಾವಾನಿ (ಟೀಕ) ಕಟ್ಟಿಗೆ (ಕಾಸ್ಟ) ಬಳಸಿ ಸೂಕ್ಷ್ಮ ಕೆತ್ತನೆಯಿಂದ ತಯಾರಿಸಲಾಗಿದ್ದು, ಇದು ಭೂವಿಸ್ತಾರದಿಂದ ಗರ್ಭಾಲಯದ ಕಂಠದವರೆಗೆ ಎತ್ತರವಿದೆ. ಇದರಲ್ಲಿ ಶ್ರೀದೇವಿ ಮೂರ್ತಿ, ಆಯುಧಗಳನ್ನು ಕೆತ್ತನೆ ಮಾಡಲಾಗಿದೆ.
ಘಟಸ್ಥಾಪನೆ: ಬನಶಂಕರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಘಟಸ್ಥಾಪನೆ ನಿಮಿತ್ತ ಬೆಳಗ್ಗೆಯಿಂದಲೇ ದೇವಸ್ಥಾನದ ಪ್ರಾಂಗಣ ಶುಚಿಗೊಳಿಸಿ ಧಾರ್ಮಿಕ ವಿಧಿ ವಿಧಾನ ಕೈಗೊಳ್ಳುವ ಮೂಲಕ ಘಟಸ್ಥಾಪನೆ ಹಾಕಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ವಿದ್ವಾನ್ ಅಶೋಕಭಟ್ಟ ಪೂಜಾರ ನೇತೃತ್ವದಲ್ಲಿ ಶ್ರೀರಂಗ, ವಿಕ್ರಮ, ಚಿದಂಬರ ಶಾಸ್ತ್ರೋಕ್ತ ಪೂಜಾ ಕೈಂಕರ್ಯ ಕೈಗೊಂಡು ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಚೇರಮನ್ ಮಲ್ಲಾರಭಟ್ಟ, ಮಹೇಶ, ಪ್ರಕಾಶ, ಮಾಲತೇಶ, ಅಣಭಟ್ಟ, ಅರವಿಂದ, ಶ್ಯಾಮಭಟ್ಟ, ಉದಯ, ಪೂಜಾರ ಮನೆತನದ ಸದಸ್ಯರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ
Mahalingpur: ತೆರಬಂಡಿ ಸ್ಪರ್ಧೆಯ ಹೋರಿ ದಾಖಲೆಯ 10.10 ಲಕ್ಷಕ್ಕೆ ಖರೀದಿಸಿದ ರೈತ
Rabkavi Banhatti: ಪ್ರಾಚೀನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ
ಆನ್ಲೈನ್ ವಂಚನೆ: 6 ವರ್ಷದಲ್ಲಿ 4 ಕೋಟಿ ರೂ. ಕಳೆದುಕೊಂಡ ವಿದ್ಯಾವಂತರು!
Online ವಂಚಕರಿದ್ದಾರೆ ಹುಷಾರ್..!”ಉದಯವಾಣಿ’ ಇಂದಿನಿಂದ ಸರಣಿ ವರದಿ ಆರಂಭಿಸಿದೆ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ
Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು
Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ
Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್