ಪ್ರತಿದಿನ 2350 ಹಸುಳೆಗಳ ಸಾವು

ಬಗೆಹರಿಯದ ಶಿಶು ಮರಣ ಸಮಸ್ಯೆ

Team Udayavani, Jan 14, 2020, 6:06 AM IST

j-16

ಸಾಂದರ್ಭಿಕ ಚಿತ್ರ

ಪ್ರತಿದಿನ ದೇಶದಲ್ಲಿ ಒಂದು ವರ್ಷದೊಳಗಿನ 2,350 ಶಿಶುಗಳು ಸಾವಿಗೀಡಾಗುತ್ತಿವೆ. ಇದರಲ್ಲಿ ರಾಜಸ್ಥಾನ ಅಗ್ರ ಸ್ಥಾನದಲ್ಲಿದ್ದು, ಪ್ರತಿ ಸಾವಿರ ನವಜಾತ ಶಿಶುಗಳ ಪೈಕಿ 33 ಶಿಶುಗಳು ಹುಟ್ಟಿದ ಸಮಯದಲ್ಲೇ ಅಸುನೀಗುತ್ತಿವೆ. ಹಾಗಾದರೆ ಮರಣ ಪ್ರಮಾಣ ಏರಿಕೆಯಾಗಲು ಕಾರಣವೇನು? ದೇಶದ ಯಾವ ಭಾಗಗಳಲ್ಲಿ ಹೆಚ್ಚು ಮೊದಲಾದ ವಿಷಯಗಳ ಕುರಿತು ಮಾಹಿತಿ ಇಲ್ಲಿದೆ.

8 ಲಕ್ಷ ಶಿಶುಗಳ ಸಾವು
ಜಾಗತಿಕವಾಗಿ ಅತೀ ಹೆಚ್ಚು ಶಿಶುಗಳ ಮರಣ ದಾಖಲಾಗುತ್ತಿರುವ ದೇಶ ಭಾರತವಾಗಿದೆ. ಯುನಿಸೆಫ್ ಪ್ರಕಾರ 2017ರಲ್ಲಿ ದೇಶದಲ್ಲಿ 8,02,000 ಶಿಶುಗಳು ಸಾವನ್ನಪ್ಪಿವೆ.

ಶೇ. 78.9ರಷ್ಟು
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಕೇವಲ ಶೇ. 78.9ರಷ್ಟು ಶಿಶುಗಳು ಮಾತ್ರ ವೈದ್ಯಕೀಯ ಸೌಲಭ್ಯ ಮತ್ತು ಮಾರ್ಗದರ್ಶನದಲ್ಲಿ ಜನನ ವಾಗುತ್ತಿವೆ. ಶೇ. 21.1ರಷ್ಟು ಶಿಶುಗಳು ಸೌಲಭ್ಯ ವಂಚಿತ, ಅಸುರಕ್ಷತೆಯಲ್ಲಿ ಹುಟ್ಟುತ್ತಿರುವುದು ಮರಣ ಹೆಚ್ಚಳಕ್ಕೆ ಒಂದು ಕಾರಣ.

ಎಲ್ಲಿ ಹೆಚ್ಚು ?
ರಾಜಸ್ಥಾನದಲ್ಲಿ ಪ್ರತಿವರ್ಷ 1.65 ದಶಲಕ್ಷ ಶಿಶುಗಳ ಜನನವಾಗುತ್ತಿದ್ದು, 1,000 ದಲ್ಲಿ 38 ಶಿಶುಗಳು ಮರಣವಾಗುತ್ತಿವೆ. ವಾರ್ಷಿಕವಾಗಿ 62,843 ಮತ್ತು ಪ್ರತಿದಿನ ಸರಾಸರಿ 172 ಶಿಶುಗಳು ಸಾವನ್ನಪ್ಪುತ್ತಿವೆ. ಗುಜರಾತ್‌ನಲ್ಲಿ 1,000ಕ್ಕೆ 30 ಶಿಶುಗಳು ಅಸುನೀಗುತ್ತಿದ್ದು, ವರ್ಷಕ್ಕೆ ಸುಮಾರು 36,000 ಮತ್ತು ದಿನಕ್ಕೆ ಸರಾಸರಿ 98 ಶಿಶುಗಳು ಸಾಯುತ್ತಿವೆ.

ರಾಜ್ಯದ ಸ್ಥಿತಿ ಏನು ?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ- ಅಂಶ (2017) ದ ಪ್ರಕಾರ ಪ್ರತಿವರ್ಷ ರಾಜ್ಯದಲ್ಲಿ 12 ಸಾವಿರ ಶಿಶುಗಳು ಮರಣ ಹೊಂದುತ್ತಿದ್ದು, ಜನಿಸಿದ 1,000 ಶಿಶುಗಳಲ್ಲಿ 31 ಶಿಶುಗಳು ಸಾಯುತ್ತಿವೆ. 2015ರಿಂದ 2019ರ ಅಕ್ಟೋಬರ್‌ ವರೆಗೆ 44,250 ಶಿಶುಗಳು ಸಾವನ್ನಪ್ಪಿವೆ.

ಅನಕ್ಷರತೆ ಮುಖ್ಯ ಕಾರಣ
ಯುನಿಸೆಫ್ ವರದಿಯ ಪ್ರಕಾರ, 20 ವರ್ಷಕ್ಕಿಂತ ಒಳಗೆ ಗರ್ಭ ಧರಿಸುವ ತಾಯಂದಿರು ಮತ್ತು ಶಿಶುಗಳ ಮರಣ ಪ್ರಮಾಣ ಹೆಚ್ಚಿದೆ ಎಂದು ಉಲ್ಲೇಖಿಸಿದ್ದು, ಅನ‌ಕ್ಷರತೆ ಮತ್ತು ಮಾಹಿತಿ ಕೊರತೆ ಈ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ ಎಂದು ವರದಿ ಹೇಳಿದೆ.

ಕಾರಣವೇನು ?
· ತಾಯಿಯಲ್ಲಿ ಶಿಕ್ಷಣದ ಕೊರತೆ
· ಅಪೌಷ್ಟಿಕತೆ (ಭಾರತೀಯ ಮಹಿಳೆಯರಲ್ಲಿ ಅರ್ಧಕ್ಕಿಂತ  ಹೆಚ್ಚು ಜನರು ರಕ್ತಹೀನತೆ ಹೊಂದಿದ್ದಾರೆ)
· ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆ.
· ಸೌಲಭ್ಯಗಳ ಕೊರತೆ

ಮರಣ ಪ್ರಮಾಣ
(2014-17ರಲ್ಲಿ ಪ್ರತಿ ಸಾವಿರಕ್ಕೆ)
ಮಧ್ಯಪ್ರದೇಶ 47
ರಾಜಸ್ಥಾನ‌ 46
ಅಸ್ಸಾಂ 44
ಅರುಣಾಚಲ ಪ್ರದೇಶ 42
ಉತ್ತರ ಪ್ರದೇಶ 41
ಒಡಿಶಾ 41
ಮೇಘಾಲಯ 39
ಛತ್ತೀಸ್‌ಗಢ್‌ 38
ಗುಜರಾತ್‌ 35
ಕರ್ನಾಟಕ 31

ಶೇ. 33ರಷ್ಟು ಮರಣ
ದೇಶದಲ್ಲಿ ವಾರ್ಷಿಕವಾಗಿ ಸುಮಾರು 2.6 ಕೋಟಿ ಜನನ ವಾಗುತ್ತಿವೆ. ಸದ್ಯ ಶಿಶು ಮರಣದ ಪ್ರಮಾಣ (ಐಎಂಆರ್‌) 1,000 ಜನನಗಳಿಗೆ 33ರಷ್ಟಿದ್ದು, ದೈನಂದಿನ 2,350 ಶಿಶುಗಳು ಸಾಯುತ್ತಿವೆ.

ಟಾಪ್ ನ್ಯೂಸ್

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.