ಬಸ್ನಲ್ಲೇ ನಿರ್ವಾಹಕನ ಮದುವೆ ವಾರ್ಷಿಕೋತ್ಸವ!
ನಿತ್ಯ ಪ್ರಯಾಣಿಕರ ಅಚ್ಚರಿಯ ಕೊಡುಗೆ
Team Udayavani, Jan 25, 2020, 6:38 AM IST
ಉಡುಪಿ: ಖಾಸಗಿ ಬಸ್ ನಿರ್ವಾಹಕರೊಬ್ಬರ ಮದುವೆಯ ವಾರ್ಷಿಕ ದಿನವನ್ನು ಅವರು ಕೆಲಸ ಮಾಡುವ ಖಾಸಗಿ ಬಸ್ನಲ್ಲೇ ನಿತ್ಯ ಪ್ರಯಾಣಿಕರು ಆಚರಿಸಿ ಅಚ್ಚರಿಯ ಉಡುಗೊರೆ ನೀಡಿದ್ದಾರೆ.
ಪ್ರಯಾಣಿಕರಿಂದ ಸಪ್ರೈಸ್
ಉಡುಪಿ-ಮಂಗಳೂರು ಖಾಸಗಿ ಬಸ್ಸೊಂದರ ನಿರ್ವಾಹಕ ಸುರೇಶ್ ಸಾನಾಡಿ ಸ್ನೇಹ ಜೀವಿ, ಎಲ್ಲ ಪ್ರಯಾಣಿ ಕರನ್ನು ಗೌರವದಿಂದ ಕಾಣುವವರು. ಹೀಗಾಗಿ ಅನೇಕ ಪ್ರಯಾಣಿಕ ಮಿತ್ರರನ್ನು ಹೊಂದಿದ್ದಾರೆ. ಮೂರು ವರ್ಷಗಳಿಂದ ಇದೇ ಬಸ್ನಲ್ಲಿ ಮಂಗಳೂರಿಗೆ ತೆರಳುವ ಪ್ರಯಾಣಿಕರ ಗುಂಪು ಶುಕ್ರವಾರ ಈ ವಿಭಿನ್ನ ಆಚರಣೆ ನಡೆಸಿ ಅವರಿಗೆ ಅಚ್ಚರಿ ಉಂಟು ಮಾಡಿತು. ಬಸ್ ಶುಕ್ರವಾರ ಬೆಳಗ್ಗೆ ಉಡುಪಿ ಬಿಟ್ಟು ಪಡುಬಿದ್ರಿ ತಲುಪುವ ಹೊತ್ತಿಗೆ ಕೇಕ್ ಕತ್ತರಿಸಿ ಶುಭ ಕೋರಿದರು. ಬಳಿಕ ಉಳಿದ ಪ್ರಯಾ ಣಿಕರಿಗೆ ಸಿಹಿ ಹಂಚಲಾಯಿತು.
ರಜೆ ಇಲ್ಲದ ಕಾರಣ ಮದುವೆ ವಾರ್ಷಿಕೋತ್ಸವವನ್ನು ಮನೆಯಲ್ಲಿ ಆಚರಿಸಲು ಸಾಧ್ಯವಾಗಲಿಲ್ಲ. ಆದರೆ ಸ್ನೇಹಿತರು ಬೇರೆಯೇ ರೀತಿ ಆಚರಿಸಿದ್ದು ಖುಷಿ ಅನಿಸಿದೆ. ಅವರಿಗೆ ಧನ್ಯವಾದಗಳು.
ಸುರೇಶ್ ಸಾನಾಡಿ, -ಬಸ್ ನಿರ್ವಾಹಕರು
3 ವರ್ಷಗಳಿಂದ ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೇವೆ. ಹೀಗಾಗಿ ನಿರ್ವಾಹಕರಲ್ಲಿ ಆತ್ಮೀಯತೆ ಬೆಳೆದಿದೆ. ಕಳೆದ ಬಾರಿ ಅವರು ಮದುವೆ ವಾರ್ಷಿಕೋತ್ಸವದ ಬಗ್ಗೆ ತಿಳಿಸಿದ್ದರು. ಈ ಬಾರಿ ಪ್ರಯಾಣಿಕ ಸ್ನೇಹಿತರು ಸೇರಿ ಈ ಸಪ್ರೈಸ್ ಸಂಭ್ರಮ ನೀಡಿದರು.
ಸಂತೋಷ್ ಶೇಟ್ , -ಬಸ್ ಪ್ರಯಾಣಿಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಆಗ್ರ ಸ್ಥಾನ
Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು
Davanagere; ಟೈರ್ ಸಿಡಿದು ಸೇತುವೆ ಮೇಲಿಂದ ಉರುಳಿದ ಕಾರು:ಇಬ್ಬರು ಮೃತ್ಯು
Ullal Beach ಸಮುದ್ರ ಪಾಲಾಗುತ್ತಿದ್ದ ವಿದ್ಯಾರ್ಥಿಯ ರಕ್ಷಣೆ
Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್ಪಾರ್ಕ್ ಸುರಕ್ಷಿತ