ಕಿವಿ ಮೊರೆತದ ಬಗ್ಗೆ ಅರಿಯಿರಿ

ಫೆಬ್ರವರಿ 3 - 9 ಅಂತಾರಾಷ್ಟ್ರೀಯ ಕಿವಿ ಮೊರೆತ ಸಪ್ತಾಹ

Team Udayavani, Feb 2, 2020, 5:00 AM IST

kat-40

ಸಾಂದರ್ಭಿಕ ಚಿತ್ರ

ಸುತ್ತಮುತ್ತ ಯಾವುದೇ ಸದ್ದು ಇಲ್ಲದಿದ್ದಾಗಲೂ ಕಿವಿಯಲ್ಲಿ ಗುಂಯ್‌ಗಾಡುವ ಸದ್ದು ಕೇಳುವುದನ್ನು ಕಿವಿ ಮೊರೆತ ಅಥವಾ ಇಂಗ್ಲಿಷ್‌ನಲ್ಲಿ “ಟಿನ್ನಿಟಸ್‌’ ಎಂದು ಕರೆಯುತ್ತಾರೆ. ಕಿವಿ ಮೊರೆತವು ಹಿಸ್‌ ಸದ್ದು, ಗುಂಯ್‌ಗಾಡುವ ಸದ್ದು, ಮೊರೆತದ ಸದ್ದು, ಚಿಲಿಪಿಲಿಗುಡುವಿಕೆ, ಸಿಳ್ಳೆ ಅಥವಾ ಟಿಕ್‌ ಟಿಕ್‌ ಸದ್ದುಗಳಾಗಿ ಕೇಳಿಸಬಹುದು. ಇದು ಆಗಾಗ ಉಂಟಾಗಬಹುದು ಅಥವಾ ನಿರಂತರವಾಗಿರಬಹುದು; ಅದರ ಪ್ರಮಾಣವು ಸಣ್ಣಗಿರಬಹುದು ಅಥವಾ ದೊಡ್ಡದಾಗಿರಬಹುದು. ಕಿವಿ ಮೊರೆತವು ಒಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ಜಾಗತಿಕವಾಗಿ ಸುಮಾರು 2.6 ಬಿಲಿಯನ್‌ ಜನರು ಇದರಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ವಯಸ್ಕರಲ್ಲಿ ಮೂರನೇ ಒಂದರಷ್ಟು ಮಂದಿ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಬಾರಿ ಕಿವಿ ಮೊರೆತವನ್ನು ಅನುಭವಿಸಿರುತ್ತಾರೆ. ಶೇ.10ರಿಂದ 15 ಮಂದಿ ವಯಸ್ಕರಿಗೆ ದೀರ್ಘ‌ಕಾಲಿಕ ಕಿವಿ ಮೊರೆತ ಇದ್ದು, ವೈದ್ಯಕೀಯ ವಿಶ್ಲೇಷಣೆ ಅಗತ್ಯವಾಗುತ್ತದೆ. ಕಿವಿ ಮೊರೆತಕ್ಕೆ ಕಾರಣವಾಗಬಲ್ಲ ಅಪಾಯಾಂಶಗಳು ಅನೇಕ – ಸದ್ದಿಗೆ ದೀರ್ಘ‌ಕಾಲ ತೆರೆದುಕೊಂಡಿರುವುದು, ತಲೆ/ಕುತ್ತಿಗೆ ಗಾಯ, ಸೋಂಕುಗಳು ಮತ್ತು ಕೆಲವೊಮ್ಮೆ ಗೊತ್ತಿಲ್ಲದ ಯಾವುದಾದರೂ ಕಾರಣಗಳು.

ಕಿವಿ ಮೊರೆತದ ಪರಿಣಾಮವೇನು?
ಕಿವಿ ಮೊರೆತವು ರೋಗಿಯ ಒಟ್ಟಾರೆ ಆರೋಗ್ಯ ಮತ್ತು ಸಾಮಾಜಿಕ ಸೌಖ್ಯವನ್ನು ಉಡುಗಿಸಿಬಿಡುವ ಒಂದು ಅನಾರೋಗ್ಯ ಸ್ಥಿತಿಯಾಗಿದೆ. ಮಧ್ಯಮ ಪ್ರಮಾಣದ ಕಿವಿ ಮೊರೆತವು ಕೂಡ ಕೆಲಸ ಕಾರ್ಯಗಳು ಮತ್ತು ಸಾಮಾಜಿಕ ಸ್ಥಿತಿಗತಿಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದಾಗಿದೆ. ಕಿವಿ ಮೊರೆತವನ್ನು ಹೊಂದಿರುವ ರೋಗಿಗಳು ಈ ಕೆಳಗಿನವುಗಳನ್ನು ಅನುಭವಿಸುತ್ತಾರೆ:

 ಹತಾಶೆ
 ಖನ್ನತೆ
 ಉದ್ವಿಗ್ನತೆ
 ಆಗಾಗ ಮನೋಸ್ಥಿತಿ ಬದಲಾವಣೆ
 ನಿದ್ದೆ ಬಾರದಿರುವುದು, ಎಚ್ಚರಾಗುವುದು
 ಕಿರಿಕಿರಿಗೊಳ್ಳುವುದು, ಸಿಟ್ಟಿಗೇಳುವುದು
 ಏಕಾಗ್ರತೆಯ ಕೊರತೆ
 ಜೀವನಶೈಲಿ ಬದಲಾವಣೆ

ಕಿವಿ ಮೊರೆತವನ್ನು ಹೊಂದಿರುವ ರೋಗಿಗಳು ಅದನ್ನು ಅನುಭವಿಸದವರಿಗಿಂತ ಕಳಪೆ ಜೀವನ ಗುಣಮಟ್ಟವನ್ನು ಅನುಭವಿಸುತ್ತಾರೆ ಎಂಬುದಾಗಿ ಇತ್ತೀಚೆಗಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಕಿವಿ ಮೊರೆತವು ರೋಗಿಯ ದೈನಂದಿನ ಕಾರ್ಯಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ- ಅವರ ಉದ್ಯೋಗ, ನಿದ್ದೆ, ಕುಟುಂಬ ಮತ್ತು ಗೆಳೆಯ-ಗೆಳತಿಯರ ಜತೆಗೆ ಉಲ್ಲಸಿತರಾಗಿರುವುದಕ್ಕೆ ಅಡ್ಡಿಯಾಗಿ ಪರಿಣಮಿಸುತ್ತದೆ. ಜೀವನದಲ್ಲಿ ನಿಶಬ್ಧತೆಯ ಕೊರತೆಯಿಂದಾಗಿ (ಸದಾ ಕಿವಿಯಲ್ಲಿ ಶಬ್ಧ ಇರುವ ಕಾರಣ) ಅವರು ಖನ್ನತೆ ಮತ್ತು ಉದ್ವಿಗ್ನತೆಗೆ ಒಳಗಾಗುತ್ತಾರೆ. ಜತೆಗೆ, ಜತೆಗಿರುವವರಿಗೆ/ ಸುತ್ತಮುತ್ತಲಿನ ಜನರಿಗೆ ಇದು ಕಾಣಿಸದ ಮತ್ತು ಅನುಭವಕ್ಕೆ ಬಾರದ ಸ್ಥಿತಿಯಾದ್ದರಿಂದ ಕಿವಿ ಮೊರೆತವನ್ನು ಅನುಭವಿಸುತ್ತಿರುವವರು ತನ್ನ ಸಮಸ್ಯೆ ಯಾರಿಗೂ ಅರ್ಥವಾಗುತ್ತಿಲ್ಲ, ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ, ತನ್ನಲ್ಲೇ ಏನೋ ಸಮಸ್ಯೆ ಇದೆ ಎಂಬುದಾಗಿ ತಪ್ಪು ತಿಳಿದುಕೊಳ್ಳುವ ಸಾಧ್ಯತೆಯಿದೆ. ಈ ಅಪಕಲ್ಪನೆಯು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದಾಗಿದ್ದು, ರೋಗಿಯ ದೈಹಿಕ ಮತ್ತು ಮಾನಸಿಕ ಸ್ವಾಸ್ಥ  éದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ.

ಪರಿಹಾರವಿದೆಯೇ?
ಕಿವಿ ಮೊರೆತಕ್ಕೆ ಅತ್ಯುತ್ತಮವಾದ ಏಕೈಕ ಚಿಕಿತ್ಸೆ ಎಂಬುದು ಇಲ್ಲ. ಕಿವಿ ಮೊರೆತ ಹೊಂದಿರುವ ಯಾವುದೇ ಇಬ್ಬರು ಏಕಪ್ರಕಾರದವರಾಗಿರುವುದಿಲ್ಲ. ಹೀಗಾಗಿ ಚಿಕಿತ್ಸೆಯೂ ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ, ಕಿವಿ ಮೊರೆತಕ್ಕೆ ಕಾರಣವನ್ನು ಆಧರಿಸಿಯೂ ಬದಲಾಗುತ್ತದೆ.

ಕಿವಿ ಮೊರೆತಕ್ಕೆ ವೈದ್ಯಕೀಯೇತರ ನಿರ್ವಹಣೆಯನ್ನು ಆಡಿಯಾಲಜಿಸ್ಟ್‌ ಮುಖಾಂತರ ಒದಗಿಸಲಾಗುತ್ತದೆ. ಕಿವಿ ಮೊರೆತ ಉಂಟಾಗುವುದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ ಬಹುತೇಕ ಸಂದರ್ಭಗಳಲ್ಲಿ ಇದು ಪ್ರತ್ಯಕ್ಷವಾದ ಅಥವಾ ಪರೋಕ್ಷವಾದ ಶ್ರವಣ ಶಕ್ತಿ ನಷ್ಟದ ಜತೆಗೆ ಸಂಬಂಧವನ್ನು ಹೊಂದಿರುತ್ತದೆ. ಆದ್ದರಿಂದ ಹತ್ತಿರದ ಆಸ್ಪತ್ರೆಯಲ್ಲಿ ನುರಿತ ಆಡಿಯಾಲಜಿಸ್ಟ್‌ ಬಳಿ ನಿಮ್ಮ ಶ್ರವಣ ಶಕ್ತಿ ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಒಳಿತು. ಸಮರ್ಪಕವಾದ ಚಿಕಿತ್ಸೆಯಿಂದ ಕಿವಿ ಮೊರೆತವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು (ಅಂದರೆ ಇನ್ನಷ್ಟು ಉಲ್ಬಣಿಸುವುದನ್ನು ತಡೆಯಬಹುದು) ಅಥವಾ ಕೆಲವೊಮ್ಮೆ ಕಾರಣವನ್ನು ಸರಿಯಾಗಿ ನಿಭಾಯಿಸಿದರೆ ಅದರಿಂದ ಮುಕ್ತಿಯನ್ನೂ ಪಡೆಯಬಹುದು. ಕಿವಿ ಮೊರೆತಕ್ಕೆ ಸದ್ಯ ಲಭ್ಯವಿರುವ ಎಲ್ಲ ಚಿಕಿತ್ಸಾ ವಿಧಾನಗಳೂ ಅದರ ಅನುಭವಕ್ಕೆ ಬರುವ ಹೊರೆಯನ್ನು ತಗ್ಗಿಸುವ ಮೂಲಕ ರೋಗಿಯು ಹಿತಕರವಾದ, ಬಾಧೆಯಿಲ್ಲದ ಮತ್ತು ಸಂತೃಪ್ತ ಜೀವನವನ್ನು ನಡೆಸುವ ಗುರಿಯನ್ನು ಹೊಂದಿವೆ.

ಕಿವಿ ಮೊರೆತಕ್ಕೆ ನಿಖರವಾದ ಉಪಶಮನವನ್ನು ಕಂಡುಹಿಡಿಯುವ ಕಾರ್ಯ ಪ್ರಗತಿಯಲ್ಲಿದ್ದು, ಸಾಕಷು³ ಪ್ರಗತಿಯನ್ನು ಸಾಧಿಸಲಾಗಿದೆ. ಆದರೆ ಕಿವಿ ಮೊರೆತದ ಅನುಭವವನ್ನು ನೂರಕ್ಕೆ ನೂರು ನಿವಾರಿಸುವ ಚಿಕಿತ್ಸೆ ಸದ್ಯಕ್ಕೆ ಲಭ್ಯವಿಲ್ಲ.

ಕಿವಿ ಮೊರೆತಕ್ಕೆ ತುತ್ತಾಗಿರುವ ರೋಗಿಗಳು ಅದನ್ನು ಯಶಸ್ವಿಯಾಗಿ ನಿಭಾಯಿಸುವುದಕ್ಕೆ ಸಹಾಯ ಮಾಡುವ, ಅದರ ಅನುಭವಕ್ಕೆ ಬರುವ ತೀಕ್ಷ್ಣತೆಯನ್ನು ಕಡಿಮೆ ಮಾಡುವ ಮತ್ತು ಕಿವಿ ಮೊರೆತ ಬಾಧೆಯನ್ನು ತಗ್ಗಿಸುವ ಅನೇಕ ಪರಿಣಾಮಕಾರಿ ವಿಧಾನಗಳು ಲಭ್ಯವಿವೆ. ಪ್ರಸ್ತುತ ಲಭ್ಯವಿರುವ ಚಿಕಿತ್ಸೆಗಳು ಕಿವಿ ಮೊರೆತಕ್ಕೆ ಅಂತರ್ನಿಹಿತ ಕಾರಣಗಳನ್ನು ಸರಿಪಡಿಸುವುದಿಲ್ಲ ಮತ್ತು ಮಿದುಳಿನಲ್ಲಿ ಕಿವಿ ಮೊರೆತದ ಸಂಕೇತಗಳನ್ನು ನಿವಾರಿಸುವುದಿಲ್ಲವಾದ್ದರಿಂದ ಅವುಗಳು ಸಮಸ್ಯೆಯನ್ನು “ಗುಣಪಡಿಸುವುದಿಲ್ಲ’. ಇದರ ಬದಲು ಅವು ಕಿವಿ ಮೊರೆತದಿಂದ ಏಕಾಗ್ರತೆಗೆ, ಭಾವನಾತ್ಮಕತೆಗೆ ಮತ್ತು ಗ್ರಹಣ ಶಕ್ತಿಯ ಮೇಲೆ ಉಂಟಾಗುವ ಪರಿಣಾಮಗಳನ್ನು ತಗ್ಗಿಸುತ್ತವೆ. ಇದರಿಂದ ಕಿವಿ ಮೊರೆತದ ಅನುಭವ ಇದ್ದರೂ ರೋಗಿಗಳು ಹೆಚ್ಚು ಉತ್ತಮವಾಗಿ ಬದುಕಲು, ಹೆಚ್ಚು ಸಂತೃಪ್ತರಾಗಿರಲು ಸಾಧ್ಯವಾಗುತ್ತದೆ.

ಪ್ರತಿ ರೋಗಿಗೂ ಭಿನ್ನವಾಗಿರುವ ಕಿವಿ ಮೊರೆತದ ಅಂಶಗಳನ್ನು ಆಧರಿಸಿ ಆಯಾ ರೋಗಿಗೆ ಅತ್ಯುತ್ತಮವಾದ ಚಿಕಿತ್ಸೆಯನ್ನು ಆಯ್ದುಕೊಳ್ಳಲಾಗುತ್ತದೆ. ಆದ್ದರಿಂದ ವೈಯಕ್ತಿಕ ಅಗತ್ಯಗಳನ್ನು ಆಧರಿಸಿ ಉತ್ತಮ ಚಿಕಿತ್ಸಾ ವಿಧಾನವನ್ನು ಸಂಯೋಜಿಸಲು ರೋಗಿಯು ತನ್ನ ಆರೋಗ್ಯ ಸೇವಾ ಪೂರೈಕೆದಾರರ ಜತೆಗೆ ಕೂಡಿ ಕೆಲಸ ಮಾಡಬೇಕಾಗುತ್ತದೆ.

ಬಹುತೇಕ ಪ್ರಕರಣಗಳಲ್ಲಿ ತನಗಿರುವ ಅನಾರೋಗ್ಯ ಸ್ಥಿತಿಯ ಬಗ್ಗೆ ರೋಗಿ ಅರಿವನ್ನು ಬೆಳೆಸಿಕೊಳ್ಳುವುದು ಸಾಕಷ್ಟು ನೆರವಾಗುತ್ತದೆ. ಜನಸಾಮಾನ್ಯರಲ್ಲಿ ಕಿವಿ ಮೊರೆತದ ಬಗ್ಗೆ ಅರಿವು ಮೂಡಿಸಿ ಮಾಹಿತಿ ಒದಗಿಸುವುದು ಈ ಲೇಖನದ ಉದ್ದೇಶವಾಗಿದೆ.

ಕೆಎಂಸಿಯಲ್ಲಿ ಉಚಿತ ತಪಾಸಣ ಶಿಬಿರ
ಫೆಬ್ರವರಿ 3ರಿಂದ 9ರ ತನಕ ಒಂದು ವಾರವನ್ನು “ಅಂತಾರಾಷ್ಟ್ರೀಯ ಕಿವಿ ಮೊರೆತ ಸಪ್ತಾಹ’ವನ್ನಾಗಿ ಆಚರಿಸಲಾಗುತ್ತಿದೆ. ಈ ಆಚರಣೆಯ ಹಿನ್ನೆಲೆಯಲ್ಲಿ ಕೆಎಂಸಿ ಆಸ್ಪತ್ರೆಯ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗದಲ್ಲಿ ಉಚಿತ ಶ್ರವಣ ಶಕ್ತಿ ಮತ್ತು ಕಿವಿ ಮೊರೆತ ತಪಾಸಣ ಶಿಬಿರವನ್ನು ಫೆಬ್ರವರಿ 3ರಿಂದ 8ರ ವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಅಪರಾಹ್ನ 4ರ ವರೆಗೆ ಏರ್ಪಡಿಸಲಾಗಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಿಟಿಸಿ ಕಟ್ಟಡ (ಮಹಿಳೆಯರು ಮತ್ತು ಮಕ್ಕಳ ವಿಭಾಗದ ಬಳಿ)ದ ಮೂರನೇ ಮಹಡಿಯಲ್ಲಿರುವ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗವನ್ನು ಸಂಪರ್ಕಿಸಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಡಾ| ಹರಿಪ್ರಕಾಶ್‌ ಪಿ.,
ಹರಿಣಿ ವಾಸುದೇವನ್‌ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.