ಬ್ಯಾಟಿಂಗ್‌ ಲಯಕ್ಕೆ ಮರಳಿದ ಅಗರ್ವಾಲ್‌, ರಿಷಭ್‌ ಪಂತ್‌


Team Udayavani, Feb 17, 2020, 6:09 AM IST

agarwal

ಹ್ಯಾಮಿಲ್ಟನ್‌: ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ತಮ್ಮ ಜನ್ಮದಿನಕ್ಕೆ ಹೊಸ ಮೆರುಗು ತಂದಿತ್ತಿದ್ದಾರೆ. ಜತೆಗೆ ನ್ಯೂಜಿಲ್ಯಾಂಡ್‌ನ‌ಲ್ಲಿ ಈವರೆಗೆ ವೀಕ್ಷಕನಾಗಿಯೇ ಉಳಿದಿರುವ ರಿಷಭ್‌ ಪಂತ್‌ ಕೂಡ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನವೊಂದನ್ನು ನೀಡಿದ್ದಾರೆ. ನಿರೀಕ್ಷೆಯಂತೆ ಡ್ರಾದಲ್ಲಿ ಕೊನೆಗೊಂಡ ತ್ರಿದಿನ ಅಭ್ಯಾಸ ಪಂದ್ಯದ ಕೊನೆಯ ದಿನ ಇವರಿಬ್ಬರು ಆಕರ್ಷಣೆಯ ಕೇಂದ್ರವಾದರು.

ಪಂದ್ಯ ಕೊನೆಗೊಳ್ಳುವಾಗ ಭಾರತ 4 ವಿಕೆಟಿಗೆ 252 ರನ್‌ ಮಾಡಿತ್ತು. ಇದರಲ್ಲಿ ಅಗರ್ವಾಲ್‌ ಕೊಡುಗೆ 81 ರನ್ನುಗಳಾದರೆ, ಪಂತ್‌ 70 ರನ್‌ ಮಾಡಿದರು. ಪೃಥ್ವಿ ಶಾ 39, ವೃದ್ಧಿಮಾನ್‌ ಸಾಹಾ ಔಟಾಗದೆ 30 ರನ್‌ ಮಾಡಿದರು. ಆದರೆ ಓಪನಿಂಗ್‌ ರೇಸ್‌ನಲ್ಲಿದ್ದ ಶುಭಮನ್‌ ಗಿಲ್‌ (8) ಅವರ ವೈಫ‌ಲ್ಯ ಇಲ್ಲಿಯೂ ಮುಂದುವರಿಯಿತು.

ಬರ್ತ್‌ಡೇ ಬಾಯ್‌ ಅಗರ್ವಾಲ್‌
ಮೊದಲ ಸರದಿಯಲ್ಲಿ ಶಾ ಖಾತೆ ತೆರೆಯಲು ವಿಫ‌ಲರಾಗಿದ್ದರು. ಅಗರ್ವಾಲ್‌ ಒಂದೇ ರನ್ನಿಗೆ ವಿಕೆಟ್‌ ಒಪ್ಪಿಸಿದ್ದರು. ಹೀಗಾಗಿ ಟೆಸ್ಟ್‌ ಸರಣಿಯಲ್ಲಿ ಭಾರತದ ಓಪನಿಂಗ್‌ ಕತೆ ಏನು ಎಂಬ ಬಗ್ಗೆ ಸಹಜವಾಗಿಯೇ ಚಿಂತೆ ಕಾಡಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇವರಿಬ್ಬರೂ ಬ್ಯಾಟಿಂಗ್‌ ಫಾರ್ಮ್ ಕಂಡುಕೊಳ್ಳುವುದರೊಂದಿಗೆ ಭಾರತದ ಆರಂಭಿಕರ ಸಮಸ್ಯೆ ಬಗೆಹರಿದಿದೆ ಎನ್ನಲಡ್ಡಿಯಿಲ್ಲ. ಇವರಿಂದ ಮೊದಲ ವಿಕೆಟಿಗೆ 9.5 ಓವರ್‌ಗಳಿಂದ 72 ರನ್‌ ಹರಿದು ಬಂತು.

ಆರಂಭಿಕರಿಬ್ಬರೂ ಬಿರುಸಿನ ಆಟಕ್ಕಿಳಿದರು. ರವಿವಾರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಾಯಾಂಕ್‌ ಅಗರ್ವಾಲ್‌ ಅವರ 81 ರನ್‌ 99 ಎಸೆತಗಳಿಂದ ಬಂತು. ಇದರಲ್ಲಿ 10 ಬೌಂಡರಿ ಜತೆಗೆ 3 ಸಿಕ್ಸರ್‌ ಸೇರಿತ್ತು. ಶಾ 31 ಎಸೆತಗಳಿಂದ 39 ರನ್‌ ಬಾರಿಸಿದರು (6 ಬೌಂಡರಿ, 1 ಸಿಕ್ಸರ್‌). ಈ ಪಂದ್ಯಕ್ಕೂ ಮುನ್ನ 10 ಪಂದ್ಯಗಳ 11 ಇನ್ನಿಂಗ್ಸ್‌ಗಳನ್ನಾಡಿದ್ದ ಅಗರ್ವಾಲ್‌ ಒಮ್ಮೆಯೂ 80 ರನ್‌ ಗಡಿ ದಾಟಿರಲಿಲ್ಲ. ನ್ಯೂಜಿಲ್ಯಾಂಡ್‌ “ಎ’ ವಿರುದ್ಧದ ಅನಧಿಕೃತ ಟೆಸ್ಟ್‌ ಪಂದ್ಯಗಳಲ್ಲಂತೂ ಎರಡೂ ಇನ್ನಿಂಗ್ಸ್‌ಗಳಲ್ಲಿ ಸೊನ್ನೆ ಸುತ್ತಿದ್ದರು.

ಪಂತ್‌ ಪ್ರಚಂಡ ಬ್ಯಾಟಿಂಗ್‌
ಗಿಲ್‌ ಬೇಗನೇ ಪೆವಿಲಿಯನ್‌ ಸೇರಿಕೊಂಡ ಬಳಿಕ ಬ್ಯಾಟ್‌ ಹಿಡಿದು ಬಂದ ರಿಷಭ್‌ ಪಂತ್‌ ಕೂಡ ಸ್ಫೋಟಕ ಆಟಕ್ಕಿಳಿದರು. ಅವರ 70 ರನ್‌ ಕೇವಲ 65 ಎಸೆತಗಳಲ್ಲಿ ಬಂತು. 4 ಬೌಂಡರಿ ಜತೆಗೆ 4 ಪ್ರಚಂಡ ಸಿಕ್ಸರ್‌ ಬಾರಿಸಿ ಆರ್ಭಟಿಸಿದರು. ಅವರ ನಾಲ್ಕೂ ಸಿಕ್ಸರ್‌ಗಳು ಸ್ಪಿನ್ನರ್‌ಗಳಾದ ಸೋಧಿ ಹಾಗೂ ಕೂಪರ್‌ ಎಸೆತಗಳಲ್ಲಿ ಸಿಡಿದವು. ಅಗರ್ವಾಲ್‌-ಪಂತ್‌ ಕೇವಲ 14.3 ಓವರ್‌ಗಳಲ್ಲಿ ಶತಕದ ಜತೆಯಾಟ ಪೂರೈಸಿದರು.

ಪಂತ್‌ ಸಿಡಿದರೂ ಟೆಸ್ಟ್‌ ತಂಡದ ಕೀಪಿಂಗ್‌ ಹೊಣೆಗಾರಿಕೆ ವೃದ್ಧಿಮಾನ್‌ ಸಾಹಾ ಪಾಲಾಗುವು ದರಲ್ಲಿ ಅನುಮಾನವಿಲ್ಲ. ಅವರು 38 ಎಸೆತ ನಿಭಾಯಿಸಿ 30 ರನ್‌ ಮಾಡಿದರು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ನ್ಯೂಜಿಲ್ಯಾಂಡ್‌ ಬೌಲರ್ ಘಾತಕ ಪ್ರದರ್ಶನ ನೀಡುವಲ್ಲಿ ವಿಫ‌ಲರಾದರು. ಕ್ಯುಗೆಲೀನ್‌, ಟಿಕ್ನರ್‌ ಇಬ್ಬರೂ ವಿಕೆಟ್‌ ಲೆಸ್‌ ಎನಿಸಿದರು. ಉರುಳಿದ 3 ವಿಕೆಟ್‌ ನಾಯಕ ಡ್ಯಾರಿಲ್‌ ಮಿಚೆಲ್‌ ಪಾಲಾಯಿತು.

ಸ್ಕೋರ್‌ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌ 263
ನ್ಯೂಜಿಲ್ಯಾಂಡ್‌ ಇಲೆವೆನ್‌
ಪ್ರಥಮ ಇನ್ನಿಂಗ್ಸ್‌ 235
ಭಾರತ ದ್ವಿತೀಯ ಇನ್ನಿಂಗ್ಸ್‌
ಪೃಥ್ವಿ ಶಾ ಬಿ ಮಿಚೆಲ್‌ 39
ಮಾಯಾಂಕ್‌ ಅಗರ್ವಾಲ್‌ ನಿವೃತ್ತಿ 81
ಶುಭಮನ್‌ ಗಿಲ್‌ ಎಲ್‌ಬಿಡಬ್ಲ್ಯು ಮಿಚೆಲ್‌ 8
ರಿಷಭ್‌ ಪಂತ್‌ ಸಿ ಕ್ಲೀವರ್‌ ಬಿ ಮಿಚೆಲ್‌ 70
ವೃದ್ಧಿಮಾನ್‌ ಸಾಹಾ ಔಟಾಗದೆ 30
ಆರ್‌. ಅಶ್ವಿ‌ನ್‌ ಔಟಾಗದೆ 16
ಇತರ 8
ಒಟ್ಟು (4 ವಿಕೆಟಿಗೆ) 252
ವಿಕೆಟ್‌ ಪತನ: 1-72, 2-82, 3-216.
ಬೌಲಿಂಗ್‌:
ಬ್ಲೇರ್‌ ಟಿಕ್ನರ್‌ 3-0-19-0
ಸ್ಕಾಟ್‌ ಕ್ಯುಗೆಲೀನ್‌ 12-0-81-0
ಸ್ಕಾಟ್‌ ಜಾನ್ಸನ್‌ 4-0-18-0
ಡ್ಯಾರಿಲ್‌ ಮಿಚೆಲ್‌ 9-2-33-3
ಜೇಮ್ಸ್‌ ನೀಶಮ್‌ 6-1-29-0
ಐಶ್‌ ಸೋಧಿ 5-0-32-0
ಹೆನ್ರಿ ಕೂಪರ್‌ 3-0-27-0
ಟಾಮ್‌ ಬ್ರೂಸ್‌ 5-1-8-0
ಫಿನ್‌ ಅಲೆನ್‌ 1-1-0-0

ಟಾಪ್ ನ್ಯೂಸ್

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.