ಮಾರ್ಚ್‌ನಲ್ಲಿ ಮನೆಗಳಿಗೆ ಪೈಪ್‌ ಮೂಲಕ ಗ್ಯಾಸ್‌ ಸರಬರಾಜು

ಕೊಚ್ಚಿ-ಮಂಗಳೂರು ಅಡುಗೆ ಅನಿಲ ಪೈಪ್‌ ಲೈನ್‌ ಕಾಮಗಾರಿ ಬಹುತೇಕ ಪೂರ್ಣ

Team Udayavani, Feb 19, 2020, 10:33 PM IST

19KSDE11

ಕಾಸರಗೋಡು: ಕೊಚ್ಚಿ-ಮಂಗಳೂರು ಅಡುಗೆ ಅನಿಲ ಪೈಪ್‌ ಲೈನ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದೀಗ ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ಮಾರ್ಚ್‌ ತಿಂಗಳಲ್ಲಿ ಮಹತ್ವಾಕಾಂಕ್ಷೆಯ ಗೈಲ್‌ ಯೋಜನೆ ಪೂರ್ತಿಯಾಗಲಿದ್ದು, ಆ ಬಳಿಕ ಮನೆ ಮನೆಗಳಿಗೆ ಅಡುಗೆ ಅನಿಲ ಪೈಪ್‌ ಮೂಲಕ ತಲುಪಲಿದೆ. ಕೇರಳದ 7 ಜಿಲ್ಲೆಗಳಲ್ಲಿ ಪೈಪ್‌ ಲೈನ್‌ ಮುಖಾಂತರ ಅಡುಗೆ ಅನಿಲ ಮನೆಗಳಿಗೆ ತಲುಪಲಿದೆ.

ಕಾಸರಗೋಡು ಜಿಲ್ಲೆಯಲ್ಲಿ ಚಂದ್ರಗಿರಿ ಹೊಳೆಯಲ್ಲಿ ಸಾಗುವ ಪೈಪ್‌ ಅಳವಡಿಸಲು ಮಾತ್ರವೇ ಬಾಕಿಯಿದೆ. ಈ ಕಾಮಗಾರಿ ಮಾರ್ಚ್‌ ತಿಂಗಳಲ್ಲಿ ಪೂರ್ತಿಯಾಗಲಿದೆ.
ಕಲ್ಲಿಕೋಟೆ ಜಿಲ್ಲೆಯ ಚಾಲಿಯಾರ್‌, ಇರುವಳಿಂಞಿ, ಕುಟ್ಯಾಡಿ, ಮಲಪ್ಪುರ ಜಿಲ್ಲೆಯ ಭರತಪ್ಪುಳ ಹೊಳೆಯ ಅಡಿಯಲ್ಲಿ ಸಾಗುವ ಪೈಪ್‌ಗ್ಳನ್ನು ಅಳವಡಿಸುವ ಕಾಮಗಾರಿ ಈಗಾಗಲೇ ಪೂರ್ತಿಯಾಗಿದೆ. 96 ಕಿ.ಮೀ. ನೀಳಕ್ಕೆ ವಿಸ್ತರಿಸಿರುವ ಕೊಚ್ಚಿ-ಕುಟ್ಟನ್ನಾಡು ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಸುರಕ್ಷಾ ಪರಿಶೋಧನೆ ನಡೆಯುತ್ತಿದೆ.

404 ಕಿ.ಮೀ. ಗ್ಯಾಸ್‌ ಪೈಪ್‌ಲೈನ್‌
ಕೊಚ್ಚಿ-ಕುಟ್ಟನ್ನಾಡು-ಮಂಗಳೂರು ಪೈಪ್‌ ಲೈನ್‌ 404 ಕಿ.ಮೀ. ನೀಳದಲ್ಲಿ ವಿಸ್ತರಿಸಿದೆ. ಇದರ ಶೇ. 99 ಕಾಮಗಾರಿ ಪೂರ್ತಿಯಾಗಿದೆ. ಕೇರಳದ 7 ಜಿಲ್ಲೆಗಳಲ್ಲಿ ಗ್ಯಾಸ್‌ ಪೈಪ್‌ಲೈನ್‌ ಹಾದು ಹೋಗುತ್ತದೆ. ಕೇರಳದಲ್ಲಿ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ, ತಮಿಳುನಾಡಿನಲ್ಲಿ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪವಿದೆ.

ಗೈಲ್‌, ಐಒಸಿ ಹಾಗೂ ಅದಾನಿ ಗ್ರೂಪ್‌
ಮಂಗಳೂರಿನಿಂದ ಕೊಚ್ಚಿಯ ವರೆಗೆ ಹಾದು ಹೋಗುವ ಪ್ರಮುಖ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿಯನ್ನು ಗೈಲ್‌ ಕಂಪೆನಿ ಮೂಲಕ ನಡೆದಿದೆ. ಮನೆಗಳಿಗೆ ಹಾಗೂ ಇತರೆಡೆಗಳಿಗೆ ವಿತರಿಸುವ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುವ ಪೈಪ್‌ಲೈನ್‌ಗಳ ಕಾಮಗಾರಿಯನ್ನು ಐ.ಒ.ಸಿ. ಮತ್ತು ಅದಾನಿ ಗ್ರೂಪ್‌ ನಿರ್ವಹಿಸಲಿದೆ.

ಈ ಎಲ್ಲ ಕಂಪೆನಿಗಳು ಜತೆಯಾಗಿ ಪೈಪ್‌ಲೈನ್‌ ಅಳವಡಿಸಬೇಕೆಂದು ತೀರ್ಮಾನಿಸಲಾಗಿದ್ದರೂ ಅದು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಕಂಪೆನಿಗಳಿಗೆ ಸಹಿತ ಬೃಹತ್‌ ಪ್ರಮಾಣದಲ್ಲಿ ಗ್ಯಾಸ್‌ ವಿತರಿಸುವ ಪೈಪ್‌ಲೈನ್‌ನ್ನು ಗೈಲ್‌ ಕಂಪೆನಿ ಅಳವಡಿಸಿದೆ.

ಮನೆ, ವಾಹನಗಳಿಗೆ ವಿತರಿಸುವ ಗ್ಯಾಸ್‌ ಪೈಪ್‌ಲೈನ್‌ಗಳನ್ನು ಐಒಸಿ ಮತ್ತು ಅದಾನಿ ಗ್ರೂಪ್‌ ಅಳವಡಿಸುವುದು. ಈ ಕಾಮಗಾರಿಗಳು ಮುಂದಿನ ತಿಂಗಳೊಳಗೆ ಪೂರ್ತಿಯಾಗಲಿವೆ.

2010ರಲ್ಲಿ ಗ್ಯಾಸ್‌ ಪೈಪ್‌ಲೈನ್‌ ಯೋಜನೆ ಯನ್ನು ಆರಂಭಿಸಲಾಗಿತ್ತು. 2012 ಜನವರಿ ತಿಂಗಳಲ್ಲಿ ಕೊಚ್ಚಿ-ಮಂಗಳೂರು-ಕೊಯಮ ತ್ತೂರು-ಬೆಂಗಳೂರು ಗ್ಯಾಸ್‌ ಪೈಪ್‌ಲೈನ್‌ ಆರಂಭಿಸುವುದಕ್ಕೆ ಅನುಮತಿ ಲಭಿಸಿತ್ತು. ಆದರೆ ಭೂಸ್ವಾಧೀನ ಸಾಧ್ಯವಾಗದಿದ್ದುದರಿಂದ 2014 ರಲ್ಲಿ ಎಲ್ಲ ಗುತ್ತಿಗೆ ಒಡಂಬಡಿಕೆಯನ್ನು ಗೈಲ್‌ ಕಂಪೆನಿ ರದ್ದುಗೊಳಿಸಿತ್ತು. ನಿಧಾನವಾಗಿ ಸಾಗುತ್ತಿದ್ದ ಯೋಜನೆಗೆ 2016ರಲ್ಲಿ ಮತ್ತೆ ಜೀವ ಬಂತು.

ಕಡಿಮೆ ವೆಚ್ಚದಲ್ಲಿ ವಿತರಣೆ
ಮಂಗಳೂರು-ಕೊಚ್ಚಿ ಗ್ಯಾಸ್‌ ಪೈಪ್‌ಲೈನ್‌ ಯೋಜನೆ ಕಾಮಗಾರಿ ಪೂರ್ತಿಯಾಗುವುದರೊಂದಿಗೆ ಕಡಿಮೆ ವೆಚ್ಚದಲ್ಲಿ ಅಡುಗೆ ಅನಿಲವನ್ನು ಪೈಪ್‌ಗ್ಳ ಮುಖಾಂತರ ಮನೆ ಮನೆಗಳಿಗೆ ವಿತರಿಸಲು ಸಾಧ್ಯವಾಗಲಿದೆ.
– ಕೆ.ಆರ್‌.ರಾಜೇಶ್‌
ಲೇಸನ್‌ ಆಫೀಸರ್‌,ಗೈಲ್‌.

ಟಾಪ್ ನ್ಯೂಸ್

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.