ರಾಜಸ್ಥಾನ: ಥಳಿಸಿ ಹತ್ಯೆ ; ಇಬ್ಬರಿಗೆ ಶಿಕ್ಷೆ
Team Udayavani, Mar 14, 2020, 12:39 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಜೈಪುರ: 2017ರಲ್ಲಿ ರಾಜಸ್ಥಾನದಲ್ಲಿ ಥಳಿಸಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಹದಿಹರೆಯದ ಯುವಕರಿಗೆ ತಲಾ 3 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಇಬ್ಬರನ್ನೂ ಸುರಕ್ಷಿತ ಗೃಹದಲ್ಲಿರಿಸಬೇಕೆಂದು ಅಲ್ವಾರ್ ಬಾಲ ನ್ಯಾಯ ಮಂಡಳಿ ಹೇಳಿದೆ.
ಇದು 2017ರಲ್ಲಿ ನಡೆದಿದ್ದ ಪೆಹ್ಲುಖಾನ್ ಹತ್ಯೆ ಪ್ರಕರಣದಲ್ಲಿ ಜಾರಿಯಾದ ಮೊದಲ ಶಿಕ್ಷೆಯೆನ್ನುವುದು ಗಮನಾರ್ಹ. 2017, ಏ.1ರಲ್ಲಿ ಪೆಹ್ಲುಖಾನ್ ತನ್ನಿಬ್ಬರು ಪುತ್ರರೊಂದಿಗೆ ಜೈಪುರದಿಂದ ಹಸುವನ್ನು ಸಾಗಿಸುತ್ತಿದ್ದರು. ಆ ವೇಳೆ ಅಲ್ವಾರ್ನ ಬೆಹೊÅàರ್ನಲ್ಲಿ ಗೋರಕ್ಷಕರು ಗುಂಪಿನಲ್ಲಿ ಧಾವಿಸಿ ಬಂದು, ಪೆಹ್ಲು ಖಾನ್ ಮೇಲೆ ಹಲ್ಲೆ ಮಾಡಿದ್ದರು.
ಖಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ 6 ಮಂದಿಯ ವಿರುದ್ಧ ದೂರು ದಾಖಲಾಗಿತ್ತು. ಆರಂಭದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಎಲ್ಲರನ್ನೂ ಖುಲಾಸೆ ಮಾಡಲಾಗಿತ್ತು. ಇದರ ವಿರುದ್ಧ ರಾಜಸ್ಥಾನ ಸರಕಾರ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.