ಕೋವಿಡ್-19 ತಡೆಯುವಲ್ಲಿ ಕೇರಳಕ್ಕಿಂತ ಕರ್ನಾಟಕ ಮುಂದು: ಸಚಿವ ಸುಧಾಕರ್
Team Udayavani, Mar 21, 2020, 2:14 PM IST
ಚಿಕ್ಕಬಳ್ಳಾಪುರ: ಕೋವಿಡ್-19 ವೈರಸ್ ತಡೆಯುವಲ್ಲಿ ಕೇರಳಕ್ಕಿಂತ ಕರ್ನಾಟಕ ಮುಂದಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು.
ಕೇರಳ ಸರ್ಕಾರ ಕೋವಿಡ್-19 ವೈರಸ್ ತಡೆಯಲು 20,000 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿ ಇಡೀ ದೇಶಕ್ಕೆ ಕೇರಳ ಮಾದರಿ ಆಗಿದೆಯೆಂಬುದರ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.
ಕೇರಳಕ್ಕಿಂತ ತಂತ್ರಜ್ಞಾನ ಬಳಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕೇರಳಕ್ಕಿಂತ ಹೆಚ್ಚು ಪ್ರಾಶಸ್ತ್ಯವನ್ನು ಕೋವಿಡ್-19 ತಡೆಗೆ ಕರ್ನಾಟಕ ನೀಡಿದೆ ಎಂದರು. ಆರೋಗ್ಯ ಸಚಿವರ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ನಡುವೆ ಸಮನ್ವಯತೆ ಕೊರತೆ ಇದೆಯೆ ಎಂಬುದರ ಬಗ್ಗೆ ಕೇಳಿದ ಪ್ರಶ್ನೆಗೆ ಇದೆಲ್ಲಾ ರಾಜಕೀಯ ಪ್ರೇರಿತ ಆರೋಪಗಳು ಎಂದು ಸಚಿವ ಡಾ.ಕೆ.ಸುಧಾಕರ್ ಕಿಡಿಕಾರಿದರು.