ಹೊರ ಬರಬೇಡಿ;ಮನೆಗೇಬರಲಿದೆ ತರಕಾರಿ!

ನಿರ್ಬಂಧಿತ ಪ್ರದೇಶದ ಜನರಿಗೆ ಆಹಾರ ಧಾನ್ಯ-ತರಕಾರಿ ವಿತರಣೆ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚನೆ

Team Udayavani, Apr 12, 2020, 1:56 PM IST

12-April-16

ಬಾಗಲಕೋಟೆ: ಇಲ್ಲಿನ ಹಳೆ ಬಾಗಲಕೋಟೆ ನಗರದ ವಾರ್ಡ್‌ ನಂ.7 ಹಾಗೂ 14ರಲ್ಲಿ 7 ಜನರಿಗೆ ಕೋವಿಡ್‌ ಸೋಂಕು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ನಿರ್ಬಂಧಿತ ಪ್ರದೇಶದಲ್ಲಿ ಮನೆ ಬಿಟ್ಟು ಯಾರು ಹೊರಗೆ ಬರದಂತೆ ಅಗತ್ಯ ವಸ್ತುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನುಕೋವಿಡ್‌ ವಿಶೇಷ ಅಪರ ಜಿಲ್ಲಾಕಾರಿ ಬಸವರಾಜ ಸೋಮಣ್ಣವರ ವೀಕ್ಷಿಸಿ, ಪರಿಶೀಲನೆ ನಡೆಸಿದರು.

ಪೊಲೀಸ್‌, ನಗರಸಭೆ, ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಬಸವೇಶ್ವರ ವೃತ್ತದಲ್ಲಿ ತೀವ್ರ ತಪಾಸಣೆ ನಡೆಸಿದರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಾರ್ವಜನಿಕರು ಮನೆಬಿಟ್ಟು ಹೊರಬರದಂತೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಅಗತ್ಯ ಪಡಿತರ ಆಹಾರ ಧಾನ್ಯಗಳ ಕಿಟ್‌, ಕಾಯಿಪಲ್ಲೆ ಸಾಗಾಟ, ಸಿಲೆಂಡರ್‌, ಮೆಡಿಕಲ್‌ ಹಾಗೂ ದಿನಸಿ ಸರಬರಾಜು ಮಾಡುವ ಪ್ರಕ್ರಿಯೆಯನ್ನು ನಿಗಾ ವಹಿಸಲಾಯಿತು.

200 ರೂ. ಹಾಗೂ 100 ರೂ.ಗಳ ಕಾಯಿಪಲ್ಲೆ ಕಿಟ್‌ ಹೊತ್ತ ಎಪಿಎಂಸಿ ವಾಹನ ಮನೆ ಮನೆಗೆ ಕಾಯಿಪಲ್ಲೆಗಳನ್ನು ಧ್ವನಿವರ್ಧಕಗಳ ಮೂಲಕ ಬಾಗಿಲಿಗೆ ಮಾರಾಟ ಮಾಡಲಾಯಿತು. 200 ರೂ.ಗಳ ಕಿಟ್‌ನಲ್ಲಿ 2 ಕೆಜಿ ಉಳ್ಳಾಗಡ್ಡಿ, 1 ಕೆಜಿ ಟೊಮೊಟೋ, 1 ಕೆಜಿ ಬಟಾಟಿ, 1 ಕೆಜಿ ಬದನೆ, ಅರ್ದ ಕೆಜಿ ಮೆಣಸಿನಕಾಯಿ ಹಾಗೂ 2 ಕಟ್ಟು ಕೊತ್ತಂಬರಿ ಕರಿಬೇವು ಒಳಗೊಂಡಿದೆ. ಅಲ್ಲದೇ ಸಿಲೆಂಡರ್‌ಗಳನ್ನು ದ್ವಿಚಕ್ರ ವಾಹನಗಳಲ್ಲಿ ಸಾರ್ವಜನಿಕರು ಒಯ್ಯುತ್ತಿರುವುದನ್ನು ಕಂಡ ತಕ್ಷಣವೇ ಸಿಲೆಂಡರ್‌ ಸರಬರಾಜು ಮಾಡುವವರಿಗೆ ಮಾತನಾಡಿ, ಕಡ್ಡಾಯವಾಗಿ ವಾಹನಗಳಲ್ಲೇ ಎಚ್ಚರಿಕೆಯಿಂದ ವಿತರಿಸುವಂತೆ ಸೂಚಿಸಲಾಯಿತು. ಮೆಡಿಸಿನ್‌ ವಿತರಣೆಗೆ ಆರೋಗ್ಯ ಸಿಬ್ಬಂದಿಯು ಬಸವೇಶ್ವರ ವೃತ್ತದಲ್ಲಿ ಉಪಸ್ಥಿತರಿದ್ದು, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ| ಬಿ.ಜಿ.ಹುಬ್ಬಳ್ಳಿ (9449843186, 6361367737) ತಿಳಿಸಿದ್ದಲ್ಲಿ ಆರೋಗ್ಯ ಸಿಬ್ಬಂದಿಗಳು ಮೆಡಿಸಿನ್‌ ತಂದು ಕೊಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬಸವೇಶ್ವರ ವೃತ್ತದಲ್ಲಿಯ ಕೆಲ ಮಹಿಳೆಯರು ವೈದ್ಯರ ಚೀಟಿ ಹಿಡಿದು ಬಂದಿರುವಾಗಲೇ ಆರೋಗ್ಯ ಕಾರ್ಯಕರ್ತರು ಸ್ಥಳೀಯ ಔಷಧ ಅಂಗಡಿಯಿಂದ ಔಷಧ ತಂದು ಕೊಟ್ಟು ಸಹಾಯ ಮಾಡಿದರು. ಮನೆಯಿಂದ ಯಾರು ಹೊರಬರದಂತೆ ಧ್ವನಿವರ್ಧಕ ಮೂಲಕ ಓಣಿ ಓಣಿಗಳಲ್ಲಿ ಪ್ರಚಾರ ನಡೆಸಲಾಯಿತು. ಆಹಾರಧಾನ್ಯ ಪೂರೈಕೆದಾರ ಲಕ್ಷ್ಮೀನಾರಾಯಣ ಕಾಸಟ್‌ (ಮೊ.ನಂ: 9945502371) ಮತ್ತು ಮುಳಗುಂದ (9845101024) ಅವರಿಗೆ ಸುರಕ್ಷಿತವಾಗಿ ಅಗತ್ಯ ದಿನಸಿ ವಸ್ತುಗಳನ್ನು ಪೂರೈಸಲು ಸೂಚಿಸಿದರು. 7 ಕೋವಿಡ್‌ ಸೋಂಕು ಕಂಡು ಬಂದ ಪ್ರದೇಶವನ್ನು ಈಗಾಗಲೇ ಕಂಟೇನ್‌ ಮೆಂಟ್‌ ಝೋನ್‌ ಹಾಗೂ ಸುತ್ತಲಿನ ಪ್ರದೇಶವನ್ನು ಬಫರ್‌ ಝೋನ್‌ಗಳಾಗಿ ಗುರುತಿಸಿ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಲಾಗಿದೆ ಎಂದು ಸೋಮಣ್ಣವರ ತಿಳಿಸಿದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ, ನಗರಸಭೆ ಪೌರಾಯುಕ್ತ ಮುನಿಶಾಮಪ್ಪ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.