ದೇರಳಕಟ್ಟೆ: ವೈನ್ ಶಾಪ್ ದೋಚಿದ ಕಳ್ಳ ವಶಕ್ಕೆ
Team Udayavani, Apr 13, 2020, 1:11 PM IST
ಉಳ್ಳಾಲ : ದೇರಳಕಟ್ಟೆ ನಿತ್ಯಾನಂದನಗರ ವೈನ್ಶಾಪ್ ದೋಚಿದ ಕಳ್ಳನನ್ನು ಕೊಣಾಜೆ ಪೊಲೀಸರು ನಿನ್ನೆ ಬಂಧಿಸಿದ್ದು, ಇನ್ನೋರ್ವ ಕಳ್ಳ ತಲೆಮರೆಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದೆ.
ನಾಟೆಕಲ್ ನಿವಾಸಿ ಫಯಾನ್ ಯಾನೆ ಪಯ್ಯ (25) ಬಂಧಿತ. ಇನ್ನೋರ್ವ ಫಾರೂಕ್ ಎಂಬಾತ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಆರೋಪಿಗಳು ಲಾಕ್ ಡೌನ್ ಸಮಯವನ್ನು ಉಪಯೋಗಿಸಿ ನಿತ್ಯಾನಂದನಗರದಲ್ಲಿರುವ ಎಂ.ಎಸ್.ಐ.ಎಲ್ ಅಂಗಡಿಯಿಂದ ಸುಮಾರು ರೂ. 25,000 ಬೆಲೆಯ ಮದ್ಯವನ್ನು ಕಳವುಗೈದಿದ್ದರು. ಕಳವುಗೈದ ಮಾಲನ್ನು ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿಯಲ್ಲಿ ಕುಳಿತು ಹೊರರಾಜ್ಯದ ಕಾರ್ಮಿಕರಿಗೆ ಅಧಿಕ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದಿದ್ದ ಕೊಣಾಜೆ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗ ಫಯಾನ್ ಕುರಿತು ಮಾಹಿತಿ ಲಭಿಸಿದೆ. ಕೊಣಾಜೆ ಪೊಲೀಸರು ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಆತ್ಮಶಕ್ತಿ ಸೊಸೈಟಿಗೂ ಕನ್ನ ಹಾಕಿದ್ದರು !
ವೈನ್ ಶಾಪ್ ಕಳವುಗೈದ ಮರುದಿನ ನಾಟೆಕಲ್ ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಶಟರ್ ಮುರಿದು ಇದೇ ತಂಡ ಕಳವಿಗೆ ಯತ್ನಿಸಿತ್ತು. ಲಾಕರ್ ಮುರಿಯುವ ಹಂತದಲ್ಲಿದ್ದ ಸಂದರ್ಭ ಸೈರನ್ ಮೊಳಗಿದ ಹಿನ್ನೆಲೆಯಲ್ಲಿ ಕಳ್ಳರಿಬ್ಬರೂ ಅಲ್ಲಿಂದ ಪರಾರಿಯಾಗಿದ್ದರು. ಈ ಪ್ರಕರಣ ಸೇರಿದಂತೆ ಬೈಕ್ ಕಳವು ಪ್ರಕರಣವೂ ಇಬ್ಬರ ಮೇಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ
IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್ಗಳ ಜಯ
Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ
Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ
Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ