ಕೋವಿಡ್ ವೈರಸ್: ಚಿತ್ರ ಬಿಡಿಸಿ ಜಾಗೃತಿ ಮೂಡಿಸಿದು
Team Udayavani, Apr 15, 2020, 4:44 PM IST
ಕುರುಗೋಡು: ಕಲಾವಿದರು ಕೋವಿಡ್ ವೈರಸ್ ನಿಯಂತ್ರಿಸಲು ಚಿತ್ರಗಳನ್ನು ಬಿಡಿಸಿ ಜಾಗೃತಿ ಮೂಡಿಸಿದರು.
ಕುರುಗೋಡು: ಪಟ್ಟಣದ ಮುಖ್ಯವೃತ್ತದಲ್ಲಿ ಚಿತ್ರ ಕಲಾವಿದರು ಕೋವಿಡ್ ವೈರಸ್ ನಿಯಂತ್ರಿಸಲು ಲಾಕ್ ಡೌನ್ ಹಿನ್ನೆಲೆಯಲ್ಲಿ ಡಾಕ್ಟರ್, ಪೊಲೀಸ್, ಪುರಸಭೆ ಮುಂಜಾಗೃತಿ ಕಾರ್ಯಗಳು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸುವುದರ ಮೂಲಕ ಗಮನ ಸೆಳೆದರು.
ಚಿತ್ರಕಲಾವಿದ ಮೆಹೆಬೂಬ್ ಮಾತನಾಡಿ, ವಿಶ್ವದಲ್ಲೇ ಹೆಮ್ಮಾರಿಯಾಗಿ ಕಾಡುತ್ತಿರುವ ಕೋವಿಡ್ ವೈರಸ್ ನಿಯಂತ್ರಿಸಲು ಸರ್ಕಾರ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿದೆ. ವೈರಸ್ನ್ನು ನಿಯಂತ್ರಿಸಿ ದೇಶದ ರಕ್ಷಣೆಗಾಗಿ ಡಾಕ್ಟರ್ಗಳು, ಪೊಲೀಸರು ಹಾಗೂ ಪುರಸಭೆ ಸಿಬ್ಬಂದಿ ಹೋರಾಟ ಮಾಡುತ್ತಿರುವುದು ಶ್ಲಾಘನೀಯ. ಹಾಗಾಗಿ ಅವರ ಕಾರ್ಯಗಳು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸ್ಲೋಗನ್ಗಳು ಮತ್ತು ಚಿತ್ರಗಳನ್ನು ಸ್ನೇಹಿತರ ಸಹಾಯದಿಂದ ಹಾಕಿದ್ದೇವೆ ಎಂದರು. ಚಿತ್ರಕಲಾವಿದ ಮಣ್ಣೂರು ಬಸವರಾಜ್ ಮಾತನಾಡಿದರು.
ಕೋವಿಡ್ ಮಾರಿ ನಿನಗೆ ಇಲ್ಲ ದಾರಿ ಮತ್ತು ಸ್ಟೇ ಹೋಮ್ ಸೇವ್ ಲೈಫ್ ಎಂಬ ಸ್ಲೋಗನ್ನಿಂದ ಹಾಗೂ ಪೊಲೀಸ್ ಇಲಾಖೆಯವರು ಸಾರ್ವಜನಿಕರ ರಕ್ಷಣೆಗಾಗಿ ಮಾಸ್ಕ್ ಧರಿಸಿ ಹಾಗೂ ಹೊರಗಡೆ ಬರಬೇಡಿ, ಪುರಸಭೆ ಸಿಬ್ಬಂದಿ ಸ್ವಚ್ಛತೆ ಹಾಗೂ ಡಾಕ್ಟರ್ ಕೋವಿಡ್ ಸೋಂಕಿತರ ಚಿಕಿತ್ಸೆ ನೀಡುತ್ತಿರುವ ಸ್ವ-ರಚಿತ ಚಿತ್ರಗಳನ್ನು ಬಿಡಿಸಿದರು.
ದಾದಾಪೀರ್, ಕೆ.ಕಿರಣ್ಕುಮಾರ್, ಅಲಿಂ, ಪಿ.ಶೇಕ್ಷವಲಿ, ಅಮೀರ್, ಮದುಸೂದನ್, ಚಂದ್ರಸಿಂಗ್. ರವಿ, ಜೆ.ಕಿರಣ್ಕುಮಾರ್, ಮಲ್ಲಿಕಾರ್ಜುನ್, ಮಹಾಲಿಂಗ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ
Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್
ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ
ಎಸಿ ಗ್ಯಾಸ್ ಸ್ಫೋಟ; ಐವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
HDK ಹೇಳುತ್ತಿದ್ದದ್ದು ಪ್ರಜ್ವಲ್ ಪೆನ್ಡ್ರೈವ್ ಇರಬೇಕು: ಜಮೀರ್