ಕೋವಿಡ್ 19 ವೈರಸ್ : ಹಲವು ಸವಾಲು ಉಗ್ರ ದಮನವೂ ಅಗತ್ಯ


Team Udayavani, Apr 16, 2020, 12:13 AM IST

ಕೋವಿಡ್ 19 ವೈರಸ್ : ಹಲವು ಸವಾಲು ಉಗ್ರ ದಮನವೂ ಅಗತ್ಯ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಸಂಕಷ್ಟವೊಂದು ತನ್ನ ಜತೆಗೆ ಅನೇಕ ಸಮಸ್ಯೆಗಳನ್ನೂ ಹೊತ್ತು ತಂದುಬಿಡುತ್ತದೆ. ಸಾಮಾನ್ಯವಾಗಿ ನಮ್ಮ ಗಮನವೆಲ್ಲ, ಮೂಲ ಆಪತ್ತಿನ ಮೇಲೆಯೇ ಇರುತ್ತದೆ. ಆದರೆ ಅದರ ಜತೆಗೆ ಬೆಸೆದುಕೊಂಡ ಇತರೆ ಅಪಾಯಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ವಿಶ್ವಸಂಸ್ಥೆಯು, ಕೋವಿಡ್ 19 ವೈರಸ್ ಎದುರಾಗಬಹುದಾದ ಈ ರೀತಿಯ ಸಂಭಾವ್ಯ ಸವಾಲುಗಳ ಬಗ್ಗೆ ಎಚ್ಚರಿಕೆ ನೀಡಿದೆ.

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯಾ ಗುಟೆರೆಸ್‌ ಅವರು, ಕೊರೊನಾ ಖಂಡಿತ ಸ್ವಾಸ್ಥ್ಯ ಸಂಕಷ್ಟವಾಗಿರಬಹುದು, ಆದರೆ ಈ ಮಹಾಮಾರಿಯಿಂದಾಗಿ ಅನೇಕ ದೂರಗಾಮಿ ಪರಿಣಾಮ ಉಂಟಾಗಬಹುದು ಎಂದು ಹೇಳಿದ್ದಾರೆ. ಇಂದು ಎಲ್ಲಾ ದೇಶಗಳೂ ಈ ಆಪತ್ತಿನೊಂದಿಗೆ ಹೋರಾಡಲು ವ್ಯಸ್ತವಾಗಿದ್ದರೆ ಇನ್ನೊಂದೆಡೆ ಉಗ್ರ ಸಂಘಟನೆಗಳು ಇದರ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿವೆ.

ಅದರಲ್ಲೂ ಮುಖ್ಯವಾಗಿ, ಉಗ್ರರು ಪ್ರಸಕ್ತ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಹಿಂಸಾತ್ಮಕ ಕೃತ್ಯಗಳಿಗೆ ಮುಂದಾಗಬಹುದು. ಇದರಿಂದಾಗಿ ಕೊರೊನಾ ಮಹಾಮಾರಿಯ ವಿರುದ್ಧದಲ್ಲಿನ ನಮ್ಮ ಪ್ರಯತ್ನಗಳಿಗೆ ಅಡ್ಡಿಗಳು ಎದುರಾಗಬಹುದು ಎಂದು ಗುಟೆರೆಸ್‌ ಎಚ್ಚರಿಸಿದ್ದಾರೆ.

ಇಂದು ಬಹುತೇಕ ದೇಶಗಳ ಸಂಪೂರ್ಣ ಆಡಳಿತ ಯಂತ್ರಗಳು ಕೋವಿಡ್ 19 ವೈರಸ್ ಜತೆಗೆ ಹೋರಾಡಲು ವ್ಯಸ್ತವಾಗಿವೆ. ಭದ್ರತಾ ಸಿಬಂದಿ, ಪೊಲೀಸ್‌ ವ್ಯವಸ್ಥೆಯೂ ಈ ಕೆಲಸದಲ್ಲಿ ನಿರತರಾಗಿದ್ದಾರೆ. ಇಂಥ ಸಮಯದಲ್ಲಿ ಉಗ್ರವಾದಿಗಳು ತಮ್ಮ ಉಪಟಳ ಅಧಿಕ ಮಾಡಿದರೆ ಭಾರೀ ಸಮಸ್ಯೆ ಎದುರಾಗಬಹುದು. ಇತ್ತೀಚೆಗಷ್ಟೇ ಕಾಶ್ಮೀರದ ಗಡಿಯೊಳಕ್ಕೆ ನುಸುಳಲು ಪ್ರಯತ್ನಿಸಿ ಹತರಾದ ಪಾಕಿಸ್ಥಾನಿ ಉಗ್ರರು ಇದಕ್ಕೊಂದು ಉದಾಹರಣೆ. ಉಗ್ರದಮನದ ಈ ಹೋರಾಟದಲ್ಲಿ ಭಾರತದ 5 ಸೈನಿಕರು ವೀರಮರಣವಪ್ಪಿದ್ದಾರೆ.

ಸತ್ಯವೇನೆಂದರೆ, ಪಾಕಿಸ್ಥಾನ ಇಂಥ ಸಂಕಷ್ಟದ ಸಮಯದಲ್ಲೂ ತನ್ನ ದುಷ್ಟಬುದ್ಧಿ ಬಿಡುವುದಿಲ್ಲ ಎನ್ನುವುದು ಭಾರತಕ್ಕೆ ಅರಿವಿದೆ. ಈ ಕಾರಣಕ್ಕಾಗಿಯೇ, ನಮ್ಮ ಸೇನೆ, ಗುಪ್ತಚರ ವಿಭಾಗಗಳು ತುಂಬಾ ಎಚ್ಚರಿಕೆ ವಹಿಸುತ್ತಿವೆ. ಅತ್ತ ಮಧ್ಯಪ್ರಾಚ್ಯದಲ್ಲಿ ಅವಸಾನದಂಚು ತಲುಪಿರುವ ಐಸಿಸ್‌ ಕೂಡ, ಜೆಹಾದ್‌ ನಡೆಸಲು ಉಗ್ರರಿಗೆ ಪ್ರಚೋದಿಸುತ್ತಿದೆ.

ಇಂಥ ಸಂದರ್ಭದಲ್ಲಿ ಕೋವಿಡ್ 19 ವೈರಸ್ ಜತೆಜತೆಗೆ ಉಗ್ರರೆಂಬ ವೈರಸ್‌ಗಳ ವಿರುದ್ಧವೂ ಹೋರಾಡುವ ಸವಾಲು ಎಲ್ಲಾ ದೇಶಗಳಿಗೂ ಇದೆ. ಕೋವಿಡ್ 19 ವೈರಾಣು, ಉಗ್ರರಿಗೆ ‘ಜೈವಿಕ ಅಸ್ತ್ರ’ವಾಗಬಹುದು, ಹೀಗಾಗಿ, ಈ ಹೋರಾಟದಲ್ಲೂ ಜಗತ್ತಿನ ರಾಷ್ಟ್ರಗಳೆಲ್ಲ ಒಂದಾಗಬೇಕು. ಗುಪ್ತಚರ ಮಾಹಿತಿಗಳನ್ನು ನಿಯಮಿತವಾಗಿ ಹಂಚಿಕೊಂಡು ಪರಸ್ಪರರನ್ನು ರಕ್ಷಿಸಬೇಕು.

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.