ಅಮೆರಿಕದ ಹಾರ್ಟ್‌ ದ್ವೀಪದ ಸಾಮೂಹಿಕ ಸಮಾಧಿಯ ಕಥೆ


Team Udayavani, Apr 20, 2020, 5:45 PM IST

ಅಮೆರಿಕದ ಹಾರ್ಟ್‌ ದ್ವೀಪದ ಸಾಮೂಹಿಕ ಸಮಾಧಿಯ ಕಥೆ

ನ್ಯೂಯಾರ್ಕ್‌: ಕೋವಿಡ್‌ 19 ವೈರಸ್‌ ಸಾಂಕ್ರಾಮಿಕ ಸಮಯದಲ್ಲಿ ನ್ಯೂಯಾರ್ಕ್‌ ಕುಟುಂಬಗಳ ಸಾಮೂಹಿಕ-ಸಮಾಧಿಗಳ ಸಂಖ್ಯೆ ಹೆಚ್ಚಾಗಿದೆ. ಬಹುತೇಕ ಮೃತಪಟ್ಟ ದೇಹಗಳನ್ನು ಅವರ ಕುಟುಂಬದವರಿಗೆ ನೋಡಲಾಗಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ದೇಹಗಳ ಗುರುತು ಹಚ್ಚಲಾಗದೇ ಅಂತ್ಯಕ್ರಿಯೆಯನ್ನು ನಡೆಸಲು ಸಾಧ್ಯವಾಗಿಲ್ಲ.

ಇತ್ತೀಚಿನ ವಾರಗಳಲ್ಲಿ ವಾರಕ್ಕೆ ಸರಾಸರಿ 25ರಿಂದ 120ಕ್ಕೆ ಏರಿದೆ. ಈ ವಾರ ಹಾರ್ಟ್‌ ದ್ವೀಪದಲ್ಲಿ 100 ಸಮಾಧಿಗಳು ನಡೆದಿವೆ. ನ್ಯೂಯಾರ್ಕ್‌ನಾದ್ಯಂತ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮೃತ ದೇಹಗಳನ್ನು ಹೂಳಲು ಜಾಗವಿಲ್ಲದಾಗಿದೆ. ಸಾಮೂಹಿಕ ಸಮಾಧಿಗಳಿಗೆ ಸಾರ್ವಜನಿಕ ಉದ್ಯಾನವನಗಳನ್ನು ಅಗೆಯಲಾಗುತ್ತಿದೆ. ಈ ಹಿಂದೆ ಜನರ ಪ್ರಾಣ ಕಿತ್ತುಕೊಂಡಿದ್ದ ಅನೇಕ ವೈರಸ್‌ಗಳ ಸಂದರ್ಭ ನ್ಯೂಯಾರ್ಕ್‌ ನಗರದ ಸುತ್ತಮುತ್ತಲಿನ ಪ್ರಮುಖ ಉದ್ಯಾನವನಗಳೀಗ ಸಾಮೂಹಿಕ ಸಮಾಧಿಗಳ ತಾಣಗಳಾಗಿ ಬದಲಾಗಿವೆ.

ಹಾರ್ಟ್‌ ದ್ವೀಪದ ಡ್ರೋನ್‌ ವೀಡಿಯೊಗಳು ಘಟನೆಗಳ ತೀವ್ರತೆಯನ್ನು ಪ್ರದರ್ಶಿಸಿವೆ. ಬಿಳಿ ಹಜ್ಮತ್‌ ಸೂಟ್‌ಗಳನ್ನು ಧರಿಸಿದ ಜನರು ಶವಪೆಟ್ಟಿಗೆಯನ್ನು ಎತ್ತುವ ಮತ್ತು ಎರಡು ಉದ್ದದ ಸಾಲುಗಳಲ್ಲಿ ಮೂರು ಶವಪೆಟ್ಟಿಗೆಯನ್ನು ಒಂದರ ಮೇಲೊಂದು ಜೋಡಿಸುವ ದೃಶ್ಯ ವೈರಲ್‌ ಆಗುತ್ತಿದೆ.

ಆಸ್ಪತ್ರೆಗಳ ಶವಾಗಾರಗಳಿಂದ‌ ಟ್ರಕ್‌ಗಳಲ್ಲಿ ಶವಗಳನ್ನು ಸಂಗ್ರಹಿಸಿಡಲಾಗುತ್ತಿದೆ. ನಗರವೊಂದರಲ್ಲೇ ಸಾವಿನ ಸಂಖ್ಯೆ 10,000 ದಾಟಿದೆ. 15 ದಿನಗಳೊಳಗೆ ಸಂಬಂಧಿಕರಿಂದ ಗುರುತಿಸಲ್ಪಡದ ಶವಗಳನ್ನು ಹಾರ್ಟ್‌ ದ್ವೀಪದಲ್ಲಿ ಸಮಾಧಿ ಮಾಡಲಾಗುವುದು ಎಂದು ಸರಕಾರ ಘೋಷಿಸಿದೆ.

ಇಷ್ಟು ದಿನಗಳವರೆಗೆ ಆಸ್ಪತ್ರೆಯಲ್ಲಿಯೇ ಮೃತದೇಹಗಳನ್ನು ಭದ್ರವಾಗಿಡಲಾಗುತ್ತದೆ. ವೈದ್ಯಕೀಯ ಪರೀಕ್ಷಕರು ದೇಹಗಳನ್ನು ಹೆಚ್ಚು ಹೊತ್ತು ಇಟ್ಟುಕೊಂಡಿ¨ªಾರೆ.

ಸಾಮಾನ್ಯ ಸಂದರ್ಭಗಳಲ್ಲಿ ಹಾರ್ಟ್‌ ದ್ವೀಪವು ವರ್ಷಕ್ಕೆ ಸರಾಸರಿ 1,200 ಸಮಾಧಿಗಳನ್ನು ಮಾಡುತ್ತದೆ. ಆದರೆ ಈ ಹಿಂದೆ ಈ ದ್ವೀಪದಲ್ಲಿ ಸಾಂಕ್ರಾಮಿಕ ರೋಗದಿಂದ ಸಂಭವಿಸಿದ ಸಾವುಗಳ ಸಾಮೂಹಿಕ ಸಮಾಧಿಗೂ ಮತ್ತು ಈಗಿನ ಸಮಾಧಿಗಳಿಗೆ ಇರುವ ವ್ಯತ್ಯಾಸವೆಂದರೆ, ಈ ಬಾರಿ ಶವಪೆಟ್ಟಿಗೆಯ ಬದಿಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಹೆಸರುಗಳನ್ನು ಬರೆಯಲಾಗಿದೆ.

ಟಾಪ್ ನ್ಯೂಸ್

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.