ಕಟಪಾಡಿ: ಮೂಕ ಪ್ರಾಣಿಗಳ ಹಸಿವು ನೀಗಿಸುವ ಮೂಲಕ ಮಾನವೀಯತೆ
Team Udayavani, Apr 22, 2020, 4:52 PM IST
ಕಟಪಾಡಿ: ಸುಭಾಸ್ನಗರದ ಟೀಂ ಓಂಕಾರ್ ನಾಸಿಕ್ ಫ್ರೆಂಡ್ಸ್ ಹಸಿದ ಶ್ವಾನಗಳು, ಪಕ್ಷಿಗಳಿಗೆ ಕೋಳಿ ಪದಾರ್ಥ ಬೆರೆಸಿದ ಅನ್ನದ ಊಟ, ಪೆಡಿಗ್ರಿ, ಕುಡಿಯುವ ನೀರನ್ನು ನಿತ್ಯ ಉಣಬಡಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಶ್ವಾನಪ್ರಿಯರಾದ ಈ ತಂಡವು ಮೂಡಬೆಟ್ಟು, ಪಾಂಗಾಳ, ಕಲ್ಲಾಪು, ಕಟಪಾಡಿ, ಕೋಟೆ, ಮಟ್ಟು, ಅಗ್ರಹಾರ, ಮಣಿಪುರ, ದೆಂದೂರುಕಟ್ಟೆ, ಅಲೆವೂರು, ಕುರ್ಕಾಲು, ಸುಭಾಸ್ನಗರ, ಶಂಕರಪುರ, ಅರಸಿಕಟ್ಟೆ, ಬಂಟಕಲ್ಲು , ಸರಕಾರಿಗುಡ್ಡೆ ವ್ಯಾಪ್ತಿಯಲ್ಲಿ ತಮ್ಮ ಎರಡು ದ್ವಿಚಕ್ರ ವಾಹನಗಳ ಮೂಲಕ ಪಯಣಿಸಿ ಕಳೆದ ಸುಮಾರು 12 ದಿನಗಳಿಂದ ಹಸಿದ ಶ್ವಾನ -ಪಕ್ಷಿಗಳಿಗೆ ಆಹಾರವನ್ನು ನೀಡಲಾಗುತ್ತಿದೆ ಎಂದು ಉದಯವಾಣಿಗೆ ಮಾಹಿತಿಯನ್ನು ನೀಡುವ ಈ ತಂಡವು ಮೂಕ ಪ್ರಾಣಿ ಗಳ ಒಡನಾಡಿಗಳಾಗಿ ಮಾನವೀಯ ನೆಲೆಯಲ್ಲಿ ತಮ್ಮ ಶ್ವಾನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.
ದಿನನಿತ್ಯ ಸುಮಾರು 90ಕ್ಕೂ ಅಧಿಕ ನಾಯಿಗಳು, ಪಕ್ಷಿಗಳಿಗೆ ಮೂಡಬೆಟ್ಟುವಿನ ರೇಣುಕಾ ಮತ್ತು ಪುತ್ರಿ ಹರ್ಷಿತಾ ಅವರು ತಮ್ಮ ಮನೆಯಲ್ಲಿ 4 ಸೇರು ಅಕ್ಕಿ ಬಳಸಿ ಸಿದ್ಧಪಡಿಸಿದ ಅನ್ನ ಹಾಗೂ ಕೋಳಿ ಪದಾರ್ಥವನ್ನು ಬೇಯಿಸಿ ಈ ಯುವಕರ ತಂಡಕ್ಕೆ ನೀಡಿ ಬೆಂಬಲವನ್ನು ನೀಡುತ್ತಿದ್ದಾರೆ. ದಾನಿಗಳ ಸಹಕಾರದಿಂದ ಈ ಸೇವೆಯನ್ನು ನಡೆಸುತ್ತಿದ್ದಾರೆ. ತಂಡದಲ್ಲಿ ನಿತೇಶ್, ಕಾರ್ತಿಕ್, ಸುಜಿತ್, ಅಕ್ಷಿತ್, ಪ್ರಜ್ವಲ್, ವಿಜಯ್, ವಿನಯ್ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ