ಅಮ್ಮ ಹೇಳಿದ ರೆಸಿಪಿಯ ಹೆಸರು ಬೇಳೆ ಪಾಯಸ…
Team Udayavani, Apr 23, 2020, 10:20 AM IST
ಇಷ್ಟು ದಿನ ಒಂದಷ್ಟು ಜಾಸ್ತಿ ಕೆಲಸ ಇರ್ತಾ ಇತ್ತು. ಲಾಕ್ ಡೌನ್ ಕಾರಣಕ್ಕೆ ಸ್ವಲ್ಪ ಕೆಲಸ ಕಮ್ಮಿ ಆಗಿದೆ ಅಂತಾನೇ ಹೇಳಬಹುದು. ಪಂಡಿತ್ ಭೀಮಸೇನ ಜೋಶಿ ಅವರ ಹಾಡು ಕೇಳುವ ಮೂಲಕ, ನನ್ನ ಬೆಳಗು ಆರಂಭ ಆಗುತ್ತದೆ. ನಂತರ ಒಂದು- ಒಂದೂವರೆ ಗಂಟೆ ಕಾಲ ಮನೆಯಲ್ಲಿಯೇ ಇರುವ ಜಿಮ್ ಮತ್ತು ಟ್ರೆಡ್ ಮಿಲ್ನಲ್ಲಿ ವ್ಯಾಯಾಮ, ಆಮೇಲೆ ಸ್ವಲ್ಪ ಹೊತ್ತು ಧ್ಯಾನ. ಎರಡು ಮೊಟ್ಟೆ ಮತ್ತು ಬ್ರೆಡ್, ಅಥವಾ ಎರಡು ಇಡ್ಲಿ ಇಲ್ಲವೇ ಎರಡು ದೋಸೆ ತಿಂದು ಒಂದು ಟೀ ಕುಡಿದರೆ, ತಿಂಡಿಯ ಶಾಸ್ತ್ರ ಮುಗಿದಂತೆ.
ನಂತರ, ಕ್ರಿಕೆಟ್ ಗೆ ಸಂಬಂಧಿಸಿದ ಒಂದಷ್ಟು ಕೆಲಸಗಳು ಅಥವಾ ಮೀಟಿಂಗ್ಗಳಲ್ಲಿ ಪಾಲ್ಗೊಂಡು ಅಲ್ಲಿಂದ ನೇರವಾಗಿ ಕೆನರಾ ಬ್ಯಾಂಕ್ನ ಮುಖ್ಯ ಕಚೇರಿಗೆ ಹೋಗುತ್ತೇನೆ. ಕೆನರಾ ಬ್ಯಾಂಕ್ ನ ನೌಕರ ಅನ್ನೋದು ನನ್ನ ಖುಷಿ, ಹೆಮ್ಮೆ. ಮಧ್ಯಾಹ್ನದವರೆಗೂ ಬ್ಯಾಂಕ್ ಕೆಲಸ. ನಂತರ ಮನೆಗೆ ಬಂದು ಊಟ ಮುಗಿಸ್ತೇನೆ. ನಂತರ ಕ್ರೀಡೆಗೆ ಸಂಬಂಧಿಸಿದ ಕೆಲವು ಪತ್ರಿಕೆ- ಪುಸ್ತಕಗಳನ್ನು ಓದುತ್ತಾ, ಹೆಂಡತಿ- ಮಗನ ಜೊತೆಗೆ ಸ್ವಲ್ಪ ಹರಟೆ ಹೊಡೆಯುವ ಹೊತ್ತಿಗೆ ಸಂಜೆ ಆಗಿಬಿಡುತ್ತೆ!
ಗೊತ್ತಾ ನಿಮಗೆ? ರಜೆಯಲ್ಲಿ, ಇಂಥದೊಂದು ಸಮಯಕ್ಕಾಗಿ ನಾನು ಕಾಯ್ತಾ ಇರ್ತೇನೆ. ಸಂಜೆ ಆಗುತ್ತಿದ್ದಂತೆ, ನೇರ ಅಡುಗೆ ಮನೆಗೆ ಹೋಗ್ತೀನೆ. ಹೆಸರು ಬೇಳೆ ಪಾಯಸ ಮಾಡುವುದರಲ್ಲಿ ನಾನು ಎಕ್ಸ್ ಪರ್ಟ್ ಇದು, ನನ್ನ ಅಮ್ಮ ಹೇಳಿಕೊಟ್ಟಿರುವ ರೆಸಿಪಿ ಗುಟ್ಟು. 10 ಜನ ವಾಹ್ ವಾಹ್ ಅನ್ನಬೇಕು, ಅಷ್ಟು ಚೆನ್ನಾಗಿ ನಾನು ಪಾಯಸ ಮಾಡಬಲ್ಲೆ. ಅದರ ಜೊತೆಗೆ, ಬೇರೆ ತಿನಿಸುಗಳನ್ನೂ ಮಾಡಿ, ನನ್ನ ಹೊಸರುಚಿಯನ್ನು ಹೆಂಡತಿ-ಮಗನ ಮೇಲೆ ಪ್ರಯೋಗ ಮಾಡ್ತೇನೆ!
ನಂತರ, ಮಾಸ್ಕ್ ಧಾರಿಯಾಗಿ, ಪತ್ನಿಯ ಜೊತೆ ಮನೆಯ ಹತ್ತಿರದ ಪಾರ್ಕ್ ನಲ್ಲಿ ವಾಕ್ ಮಾಡುವುದು ಈಗಿನ ನನ್ನ ರೂಟೀನ್ ಆಗಿದೆ. ಈ ಸಂದರ್ಭದಲ್ಲಿ ತಪ್ಪದೆ ದೈಹಿಕ ಅಂತರ ಕಾಯ್ದುಕೊಳ್ತೇನೆ. ರಾತ್ರಿ, ರಾಜ್ಯ ಮತ್ತು ದೇಶದ ವಿವಿಧ ಭಾಗದಲ್ಲಿ ಇರುವ ಗೆಳೆಯರು, ಬಂಧುಗಳಿಗೆ ವಿಡಿಯೋ ಕಾಲ್ ಮಾಡಿ ಮಾತಾಡುವುದು, ಎಲ್ಲರಿಗೂ ಹುಷಾರಾಗಿರಿ ಎಂದು ಎಚ್ಚರಿಸಿ ಗುಡ್ ನೈಟ್ ಹೇಳುವುದು, ಕ್ರಿಕೆಟ್ಗೆ ಸಂಬಂಧಿಸಿದ ನ್ಯೂಸ್ ನೋಡಿ- ಓದಿ ರಾತ್ರಿ ಹತ್ತೂವರೆಗೆಲ್ಲಾ ನಿದ್ರೆಗೆ ಜಾರುವುದು-ಈಗಿನ ದಿನಚರಿ ಆಗಿದೆ.
ಸುನಿಲ್ ಜೋಶಿ, ಖ್ಯಾತ ಕ್ರಿಕೆಟಿಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್ ಕೆಂಜಿಗೆಗೆ ಸ್ಥಾನ
IPL;ಇಂದು ಆರ್ಸಿಬಿ ಎದುರಾಳಿ ಗುಜರಾತ್ ಟೈಟಾನ್ಸ್:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ
England; 20 ವರ್ಷದ ಕ್ರಿಕೆಟಿಗ ನಿಗೂಢ ಸಾವು!
IPL; ವಾಂಖೇಡೆಯಲ್ಲಿ ಬೌಲರ್ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ
MUST WATCH
ಹೊಸ ಸೇರ್ಪಡೆ
ಗದಗ: ಸಂವಿಧಾನ ಧರ್ಮಗ್ರಂಥ ಎಂದವರು ಮೋದಿ- ಬೊಮ್ಮಾಯಿ
ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ
BJP ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ
ಅಮಿತಾಭ್ ಟು ಶಾರುಖ್: ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?
Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ