ಬೀದಿಬದಿಯ ಪ್ರಾಣಿಗಳ ಮೂಕವೇದನೆಗೆ ಸ್ಪಂದಿಸುತ್ತಿದೆ ಮಂಗಳೂರಿನ ಯುವಕರ ತಂಡ
Team Udayavani, Apr 23, 2020, 6:55 PM IST
ಮಂಗಳೂರು: ದೇಶಾದ್ಯಂತ ಕೋವಿಡ್-19 ಸೋಂಕಿನ ಕಾರಣದಿಂದ ಎಲ್ಲಡೆ ಆತಂಕ ಸೃಷ್ಟಿಯಾಗಿದೆ. ಜನ ಸಾಮಾನ್ಯರಿಗೆ ಊಟಕ್ಕೂ ಕಷ್ಟವಾಗಿದೆ. ಕೆಲ ದಾನಿಗಳು, ಸಂಘಸಂಸ್ಥೆಗಳು ಅಗತ್ಯ ಇರುವ ಜನರಿಗೆ ಊಟ ಇತ್ಯಾದಿ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ. ಹೋಟೆಲ್, ಶಾಲಾ ಬಳಿ ಸಿಗುತ್ತಿದ್ದ ಆಹಾರದಿಂದ ಹಸಿವು ನೀಗಿಸಿಕೊಳ್ಳುತ್ತಿದ್ದ ಬೀದಿ ಬದಿ ನಾಯಿಗಳು ಈಗ ಹಸಿವಿನಿಂದಿವೆ. ಬೀದಿ ನಾಯಿಗಳ ಮೂಕ ವೇದನೆಗೆ ಮಂಗಳೂರಿನ ಯುವಕರ ತಂಡವೊಂದು ಸ್ಪಂದಿಸುತ್ತಿದೆ.