ಮಂಗಳೂರು ಕೋವಿಡ್ ಪಾಸಿಟಿವ್ ಪ್ರಕರಣ: ಪಿಲಾರು ದಾರಂದ ಬಾಗಿಲು ಪ್ರದೇಶ ಸೀಲ್ ಡೌನ್
Team Udayavani, May 13, 2020, 7:09 PM IST
ಸೋಮೇಶ್ವರ ಗ್ರಾಮದ ಪಿಲಾರು ದಾರಂದ ಬಾಗಿಲು ಪ್ರದೇಶದಲ್ಲಿ ಕೋವಿಡ್ ಸೋಂಕು ದೃಡಪಡುತ್ತಿದಂತೆ ಸೋಮೇಶ್ವರ ಪುರಸಬಾ ಮುಖ್ಯಾಧಿಕಾರಿ ವಾಣಿ ಆಳ್ವ ಮಾರ್ಗದರರ್ಶನದಲ್ಲಿ ಪುರಸಭಾ ಅಧಿಕಾರಿಗಳ ತಂಡ ಸ್ಥಳಕ್ಜೆ ಭೇಟಿ ನೀಡಿ ದಾರಂದ ಬಾಗಿಲು ವ್ಯಾಪ್ತಿಯನ್ಬು ಕಂಟೋನ್ಮೆಂಟ್ ವಲಯ ಎಂದು ಘೋಷಿಸಿದ್ದು ಸೋಂಕಿತ ಮಹಿಳೆಯ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್ ಡೌನ್ ಗೆ ಸಂಬಂದಿಸಿದಂತೆ ಉಳ್ಳಾಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸ್ ಬಂದೋಬಸ್ತ್ ನಡೆಸಲಾಯಿತು. ಶಾಸಕ ಯು.ಟಿ. ಖಾದರ್ ಭೇಟಿ ನೀಡಿ ಸೀಲ್ ಡೌನ್ ಆಗಿರುವ ಪ್ರದೇಶದ ಜನರಿಗೆ ಆಹಾರ ದಿನಸಿ ವಸ್ತುಗಳ ವ್ಯವಸ್ಥೆಗೆ ತಂಡ ರಚನೆಗೆ ಮಾರ್ಗ ದರ್ಶನ ನೀಡಿದರು.