ಮೊಟ್ಟೆ ತಿನ್ನಲು ಇಷ್ಟವಿಲ್ಲವೇ? ಸಿಂಪಲ್ ಆಗಿ ಸ್ವಾದಿಷ್ಟಕರ ಪನ್ನೀರ್ ಬುರ್ಜಿ ತಯಾರಿಸಿ


Team Udayavani, Sep 27, 2020, 6:09 PM IST

ಸ್ವಾದಿಷ್ಟಕರ ಪನ್ನೀರ್‌ ಬುರ್ಜಿ ರೆಸಿಪಿ

ಪನ್ನೀರ್‌ ನೋಡಿದ ಕೂಡಲೇ ಬಾಯಿಯಿಂದ ನೀರು ಸುರಿಯುತ್ತದೆ ಅಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ಕೂಡ ಪನ್ನೀರನ್ನು ಇಷ್ಟಪಟ್ಟು ತಿನ್ನುತ್ತಾರೆ. ಪನ್ನೀರ್‌ ನಿಂದ ತಯಾರಿಸಿದ ಪ್ರತಿಯೊಂದು ಆಹಾರವು ನಾಲಗೆಗೆ ಹೆಚ್ಚು ರುಚಿಯನ್ನು ನೀಡುವುದರ ಜೊತೆಗೆ ಆರೋಗ್ಯಕ್ಕೂ ಸಹ ಒಳ್ಳೆಯದು. ಪನ್ನೀರ್‌ ನಲ್ಲಿ ಅಧಿಕ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಬಲವಾಗುತ್ತದೆ. ಅಲ್ಲದೇ ಸಂಧಿ ನೋವು ಉಂಟಾಗುವುದಿಲ್ಲ ಹಾಗೂ ಇದು ದೇಹದಲ್ಲಿ ಇನ್ಸುಲಿನ್‌ಗಳ ಉತ್ಪತ್ತಿಗೆ ಸಹಕಾರಿಯಾಗುವುದು.

ಮೊಟ್ಟೆ ತಿನ್ನಲು ಇಷ್ಟಪಡದೇ ಇರುವವರು ಪನ್ನೀರ್‌ ಬುರ್ಜಿ ರೆಸಿಪಿಯನ್ನು ಮನೆಯಲ್ಲಿ ಸಿಂಪಲ್‌ ಆಗಿ ಮಾಡಿ ನೋಡಿ. ಪನ್ನೀರ್‌ ಬುರ್ಜಿಯನ್ನು ರೋಟಿ, ನಾನ್‌ ,ಚಪಾತಿ ಅಲ್ಲದೇ ಊಟದ ಜೊತೆಗೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

ಪನ್ನೀರ್‌ ನಿಂದ ತಯಾರಿಸುವ ತಿನಿಸನ್ನು ತಿನ್ನಲು ಹೋಟೆಲ್‌ಗೆ ಹೋಗಬೇಕೆಂದಿಲ್ಲ ನೀವೇ ಮನೆಯಲ್ಲಿ ಮಾಡಿಕೊಂಡು ತಿನ್ನಬಹುದಾಗಿದೆ. ಹಾಗಿದ್ದರೆ ಇನ್ನೇಕೆ ತಡ ಕೇವಲ ಹತ್ತೇ ನಿಮಿಷದಲ್ಲಿ ಝಟ್‌ಫ‌ಟ್‌ ಅಂತಾ ಇದನ್ನು ತಯಾರಿಸಬಹುದು.

ಪನ್ನೀರ್‌ ಬುರ್ಜಿ ಹಾಗೂ ನಾನ್‌ ರೆಸಿಪಿಯನ್ನು ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ…..

ನಾವು ಮೊದಲು ಪನ್ನೀರ್‌ ಬುರ್ಜಿ ತಯಾರಿಸೋಣ…
ಬೇಕಾಗುವ ಸಾಮಗ್ರಿಗಳು
ಪನ್ನೀರ್‌ 2 ಕಪ್‌(ಪುಡಿ ಮಾಡಿಟ್ಟ) ,ಈರುಳ್ಳಿ 2, ಟೊಮೆಟೊ 1, ಜೀರಿಗೆ 1 ಚಮಚ, ತೆಂಗಿನ ಎಣ್ಣೆ 2 ಚಮಚ, ಹಸಿಮೆಣಸಿನ ಕಾಯಿ 4, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ 2 ಚಮಚ, ಅಚ್ಚ ಖಾರದ ಪುಡಿ ಅರ್ಧ ಚಮಚ, ಅರಿಶಿನ ಪುಡಿ ಕಾಲು ಚಮಚ, ಗರಂ ಮಸಾಲ ಪುಡಿ ಅರ್ಧ ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಒಂದು ದೊಡ್ಡ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ , ಹಸಿಮೆಣಸು, ಜೀರಿಗೆ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಹಾಕಿರಿ. ಈರುಳ್ಳಿ ಸ್ವಲ್ಪ ಕೆಂಪಾಗಾಗುವವರೆಗೆ ಹುರಿಯಿರಿ. ತದನಂತರ ಹಚ್ಚಿದ ಟೊಮೆಟೊ ಹಾಕಿ ಅದು ಮೆತ್ತಗಾಗುವವರೆಗೆ ಹುರಿಯಿರಿ. ಆ ಮೇಲೆ ಅಚ್ಚ ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ನಂತರ ಸಣ್ಣ ಉರಿಯಲ್ಲಿ 1ರಿಂದ 2 ನಿಮಿಷ ಹಾಗೇ ಮಸಾಲೆಯನ್ನು ಹುರಿಯಿರಿ. ಆ ಮೇಲೆ ಪುಡಿ ಮಾಡಿಟ್ಟುಕೊಂಡ ಪನ್ನೀರ್‌ ಹಾಕಿರಿ. ಪನ್ನೀರ್‌ ಪೂರ್ತಿ ಮೆತ್ತಗಾಗಿ ಹೋಗದಂತೆ ನಿಧಾನವಾಗಿ ಕೈಯ್ನಾಡಿಸಿರಿ. ಸಣ್ಣ ಉರಿಯಲ್ಲಿ 3 ರಿಂದ 4 ನಿಮಿಷ ಹಾಗೇ ಬಿಡಿ.ಪನ್ನೀರನ್ನು ಅತಿಯಾಗಿ ಹುರಿಯಬೇಡಿ ಹಾಗೆ ಮಾಡಿದರೆ ಪನ್ನೀರ್‌ ಗಟ್ಟಿಯಾಗಿ ಬಿಡುತ್ತದೆ. ನಂತರ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಬೆರೆಸಿದರೆ ರುಚಿಕರವಾದ ಪನ್ನೀರ್‌ ಬುರ್ಜಿ ಸವಿಯಲು ಸಿದ್ಧ.

ಬಟರ್‌ ನಾನ್‌:
ಬೇಕಾಗುವ ಸಾಮಾಗ್ರಿಗಳು:
ಮೈದಾ 1/2 ಕೆ.ಜಿ,ಹಾಲಿನ ಪುಡಿ 2 ಚಮಚ,ಅಡುಗೆ ಸೋಡಾ ಸ್ವಲ್ಪ ,ಮೊಸರು 1ಕಪ್‌ ,ಬೆಣ್ಣೆ , ಉಪ್ಪು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:
ಮೈದಾ ಹಿಟ್ಟನ್ನು ಚೆನ್ನಾಗಿ ಜರಡಿ ಇಟ್ಟುಕೊಳ್ಳಿ. ನಂತರ ಒಂದು ಅಗಲವಾದ ಪಾತ್ರೆಯಲ್ಲಿ ಮೈದಾ ಹಿಟ್ಟು, ಹಾಲಿನ ಪುಡಿ, ಅಡುಗೆ ಸೋಡಾ, ಮೊಸರು, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಬೇಕಿದ್ದರೆ ಸ್ವಲ್ಪ ನೀರನ್ನು ಹಾಕಿಕೊಳ್ಳಬಹುದು. ಹಿಟ್ಟನ್ನು ಚಪಾತಿ ಹಿಟ್ಟಿನಂತೆ ಕಲಸಿ ಸುಮಾರು 2-3 ಗಂಟೆಗಳ ಕಾಲ ಹಾಗೆ ಇಡಿ. ಆಮೇಲೆ ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿಕೊಂಡು ಚಪಾತಿಯಂತೆ ಲಟ್ಟಿಸಿ ಬೆಣ್ಣೆಯಿಂದ ಕಾಯಿಸಿದರೆ ಬಿಸಿಬಿಸಿಯಾದ ಮೃದುವಾದ ನಾನ್‌ ಸವಿಯಲು ಸಿದ್ಧ .

ಟಾಪ್ ನ್ಯೂಸ್

1-wqewewqewq

Belgavi; ಭಾರೀ ಪ್ರಮಾಣದ ಅಕ್ರಮ ಮದ್ಯ ಜಪ್ತಿ:ಇಬ್ಬರ ಬಂಧನ

ಟಯರ್‌ ಒಡೆದು ಕ್ರೂಸರ್‌ ಪಲ್ಟಿ: ಅಥಣಿಯ ಮೂವರ ದುರ್ಮರಣ

ಟಯರ್‌ ಒಡೆದು ಕ್ರೂಸರ್‌ ಪಲ್ಟಿ: ಅಥಣಿಯ ಮೂವರ ದುರ್ಮರಣ

1-wqewqe

Gundlupete; ಓವರ್ ಟೇಕ್ ಭರದಲ್ಲಿ ಅಪಘಾತ: ಬೈಕ್ ಸವಾರ ಮೃತ್ಯು

Holenarasipura Case: ಅತ್ಯಾಚಾರ ಕೇಸ್‌ನಲ್ಲಿ ದೇವರಾಜೇಗೌಡ ಬಂಧನ

Holenarasipura Case: ಅತ್ಯಾಚಾರ ಕೇಸ್‌ನಲ್ಲಿ ದೇವರಾಜೇಗೌಡ ಬಂಧನ

Prajwal Revanna case:ತನಿಖೆ ಹಾದಿ ತಪ್ಪಿಸುತ್ತಿರುವ ಜೆಡಿಎಸ್‌-ಬಿಜೆಪಿ: ಪ್ರಿಯಾಂಕ್‌ ಆರೋಪ

Prajwal Revanna case:ತನಿಖೆ ಹಾದಿ ತಪ್ಪಿಸುತ್ತಿರುವ ಜೆಡಿಎಸ್‌-ಬಿಜೆಪಿ: ಪ್ರಿಯಾಂಕ್‌ ಆರೋಪ

Rain ರಾಜ್ಯದ ದಕ್ಷಿಣ-ಉತ್ತರ ಭಾಗದಲ್ಲಿ ತಂಪೆರೆದ ಮಳೆ; ಜನಜೀವನ ಅಸ್ತವ್ಯಸ್ತ Rain ರಾಜ್ಯದ ದಕ್ಷಿಣ-ಉತ್ತರ ಭಾಗದಲ್ಲಿ ತಂಪೆರೆದ ಮಳೆ; ಜನಜೀವನ ಅಸ್ತವ್ಯಸ್ತ

Rain ರಾಜ್ಯದ ದಕ್ಷಿಣ-ಉತ್ತರ ಭಾಗದಲ್ಲಿ ತಂಪೆರೆದ ಮಳೆ; ಜನಜೀವನ ಅಸ್ತವ್ಯಸ್ತ

BJP 2

MLC ಚುನಾವಣೆ: ಐವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?

Mount Rushmore National Memorial: ಮೌಂಟ್‌ ರಶ್ಮೋರ್‌ನ ಸಿಕ್ಸ್‌ ಗ್ರಾಂಡ್‌ ಫಾದರ್ಸ್‌

Mount Rushmore National Memorial: ಮೌಂಟ್‌ ರಶ್ಮೋರ್‌ನ ಸಿಕ್ಸ್‌ ಗ್ರಾಂಡ್‌ ಫಾದರ್ಸ್‌

8

ಅಮಿತಾಭ್‌ ಟು ಶಾರುಖ್:‌ ಇಂದು ಕೋಟಿ ಕುಳರಾದ ಈ ನಟರ ಮೊದಲ ಸಂಪಾದನೆ ಎಷ್ಟಾಗಿತ್ತು ಗೊತ್ತಾ?

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

10-uv-fusion

Harekala Hajabba: ಕೋಟಿ ಒಡೆಯನಲ್ಲ, ಆದರೂ ಈತ ಕೋಟಿಗೊಬ್ಬ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-wqewewqewq

Belgavi; ಭಾರೀ ಪ್ರಮಾಣದ ಅಕ್ರಮ ಮದ್ಯ ಜಪ್ತಿ:ಇಬ್ಬರ ಬಂಧನ

ಟಯರ್‌ ಒಡೆದು ಕ್ರೂಸರ್‌ ಪಲ್ಟಿ: ಅಥಣಿಯ ಮೂವರ ದುರ್ಮರಣ

ಟಯರ್‌ ಒಡೆದು ಕ್ರೂಸರ್‌ ಪಲ್ಟಿ: ಅಥಣಿಯ ಮೂವರ ದುರ್ಮರಣ

1-wqewqe

Gundlupete; ಓವರ್ ಟೇಕ್ ಭರದಲ್ಲಿ ಅಪಘಾತ: ಬೈಕ್ ಸವಾರ ಮೃತ್ಯು

Holenarasipura Case: ಅತ್ಯಾಚಾರ ಕೇಸ್‌ನಲ್ಲಿ ದೇವರಾಜೇಗೌಡ ಬಂಧನ

Holenarasipura Case: ಅತ್ಯಾಚಾರ ಕೇಸ್‌ನಲ್ಲಿ ದೇವರಾಜೇಗೌಡ ಬಂಧನ

Prajwal Revanna case:ತನಿಖೆ ಹಾದಿ ತಪ್ಪಿಸುತ್ತಿರುವ ಜೆಡಿಎಸ್‌-ಬಿಜೆಪಿ: ಪ್ರಿಯಾಂಕ್‌ ಆರೋಪ

Prajwal Revanna case:ತನಿಖೆ ಹಾದಿ ತಪ್ಪಿಸುತ್ತಿರುವ ಜೆಡಿಎಸ್‌-ಬಿಜೆಪಿ: ಪ್ರಿಯಾಂಕ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.