ಕೋವಿಡ್ ಮಣಿಸಲು ಆಯುರ್ವೇದ ಔಷಧ ಪ್ರಯೋಗ ಶೀಘ್ರ ಆರಂಭ
4 ರೀತಿಯ ಗಿಡಮೂಲಿಕೆಗಳ ಬಳಕೆ ; ಅಶ್ವಗಂಧ, ಜೇಷ್ಠಮಧು, ಗುಡುಚಿ - ಹಿಪ್ಪಲಿ ಬಳಕೆ
Team Udayavani, May 15, 2020, 6:07 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಕೊವಿಡ್ ವೈರಸ್ ನಿಯಂತ್ರಣಕ್ಕೆ ಭಾರತ ಸಾಂಪ್ರದಾಯಿಕ ಹಾದಿ ತುಳಿದಿದ್ದು, 4 ರೀತಿಯ ಆಯುರ್ವೇದ ಔಷಧಗಳ ಪ್ರಯೋಗ ಸೂತ್ರಕ್ಕೆ ಆಯುಷ್ ಸಚಿವಾಲಯ ಅನುಮತಿ ನೀಡಿದ್ದು ಇನ್ನೊಂದು ವಾರದೊಳಗೆ ಪ್ರಯೋಗಗಳು ಆರಂಭಗೊಳ್ಳಲಿವೆ.
‘ಸ್ಥಳೀಯತೆ ಧ್ವನಿಯಾಗೋಣ’ ಎಂದು ಮೋದಿ ಅವರು ಕರೆಕೊಟ್ಟ ಬೆನ್ನಲ್ಲೇ, ಆಯುಷ್ ಈ ಮಾಹಿತಿ ಪ್ರಕಟಿಸಿದೆ. ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೊಪತಿ ಒಳಗೊಂಡ ಚಿಕಿತ್ಸಾ ಪ್ರಯೋಗದ ಮೂಲಕ ಕೋವಿಡ್ ವೈರಸ್ ನಿರ್ಮೂಲನೆಗೆ ಆಯುಷ್ ಪಣತೊಟ್ಟಿದೆ ಎಂದು ಸಚಿವ ಶ್ರೀಪಾದ್ ವೈ. ನಾಯಕ್ ಟ್ವೀಟ್ನಲ್ಲಿ ಹೇಳಿದ್ದಾರೆ.
4 ಗಿಡಮೂಲಿಕೆಗಳು: ಆಯುಷ್ನ ಈ ಔಷಧ ಪ್ರಯೋಗವು ಪ್ರಮುಖವಾಗಿ 4 ರೀತಿಯ ಗಿಡಮೂಲಿಕೆಗಳನ್ನು ಒಳಗೊಂಡಿರುತ್ತದೆ. ಅಶ್ವಗಂಧ, ಯಷ್ಟಿಮಧು, ಗುಡುಚಿ – ಹಿಪ್ಪಲಿ ಹಾಗೂ ಬಹು ಗಿಡಮೂಲಿಕೆಗಳನ್ನು ಬೆರೆಸಿ, ಪ್ರಯೋಗ ಪರೀಕ್ಷೆ ವೇಳೆ ಬಳಸಲಾಗುತ್ತದೆ.
‘ಈಗಾಗಲೇ ಆಯುರ್ವೇದಿಕ್ ಔಷಧಗಳು ಬೇರೆ ಬೇರೆ ರೋಗಗಳಿಗೆ, ಪರಿಣಾಮಕಾರಿ ಫಲಿತಾಂಶ ನೀಡುತ್ತಾ ಬಂದಿವೆ. ಕೋವಿಡ್ ಮಣಿಸುವಲ್ಲಿಯೂ ಇವು ಯಶಸ್ವಿಯಾಗುತ್ತವೆ ಎನ್ನುವ ನಂಬಿಕೆ ಇದೆ’ ಎಂದು ಹೇಳಿದ್ದಾರೆ. ದೇಶದ ವಿವಿಧ ಸಂಸ್ಥೆಗಳ ಉನ್ನತ ಪರಿಣತರು ಈ ಪರೀಕ್ಷಾ ತಂಡದಲ್ಲಿ ಭಾಗಿಯಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ