ಎಸೆಸೆಲ್ಸಿ ಪರೀಕ್ಷೆ: ಸಿದ್ಧತೆಗೆ ಮತ್ತೆ ತಿಂಗಳ ಕಾಲಾವಕಾಶ
Team Udayavani, May 22, 2020, 5:46 AM IST
ಸಾಂದರ್ಭಿಕ ಚಿತ್ರ.
ಮಂಗಳೂರು: ಎಸೆಸೆಲ್ಸಿ ಪರೀಕ್ಷೆಯ ದಿನಾಂಕ ಕೊನೆಗೂ ಘೋಷಣೆಯಾದ ಬಳಿಕ ಇದೀಗ ಲಾಕ್ಡೌನ್ ರಜೆಯಲ್ಲಿದ್ದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕೆ ಸಿದ್ಧತೆ ಪ್ರಾರಂಭಿಸಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಇನ್ನೊಂದು ತಿಂಗಳ ಕಾಲ ಪರೀಕ್ಷೆಗೆ ತಯಾರಾಗಲು ಸಮಯ ಸಿಕ್ಕಿದ್ದು, ಈ ಸುದೀರ್ಘ ರಜಾ ಕಾಲಾವಕಾಶವನ್ನು ವಿದ್ಯಾರ್ಥಿಗಳು ಹೇಗೆ ಸದು ಪಯೋಗ ಪಡಿಸಿ ದ್ದಾರೆ ಎಂಬುದು ಫಲಿತಾಂಶ ಹೊರ ಬಂದಾಗ ಗೊತ್ತಾಗಲಿದೆ.
ರಾಜ್ಯಾದ್ಯಂತ ಮಾ. 27ರಿಂದ ಎ. 9ರ ವರೆಗೆ ನಡೆಯ ಬೇಕಿದ್ದ ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಗಳನ್ನು ಕೋವಿಡ್ 19 ಲಾಕ್ ಡೌನ್ನಿಂದಾಗಿ ಮುಂದೂಡಲಾಗಿತ್ತು. ಮಾ. 10ರಿಂದಲೇ ವಿದ್ಯಾರ್ಥಿಗಳಿಗೆ ಸಿದ್ಧತಾ ರಜೆ ನೀಡಲಾಗಿತ್ತು. ಏತನ್ಮಧ್ಯೆ ಮಾ. 23ರಿಂದ ಲಾಕ್ಡೌನ್ ರಜೆಯಿಂದಾಗಿ ಸುಮಾರು ಮೂರು ತಿಂಗಳ ಕಾಲ ಪರೀಕ್ಷೆ ಸಿದ್ಧತೆಗೆ ಅವ ಕಾಶ ದೊರತಿದೆ. ಈ ಅವಧಿಯಲ್ಲಿ ಯಾವುದೇ ಒತ್ತಡ ಇಲ್ಲದೆ, ಸಾವಕಾಶವಾಗಿ ಅಭ್ಯಾಸ ನಡೆಸಲು ಸಮಯ ಸಿಕ್ಕಂತಾಗಿದೆ.
30,605 ವಿದ್ಯಾರ್ಥಿಗಳು
ಜಿಲ್ಲೆಯಲ್ಲಿ ಒಟ್ಟು 30,605 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 16,140 ಮಂದಿ ಬಾಲಕರು, 14,465 ಬಾಲಕಿಯರು. 91 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಸಿದ್ಧತೆಗಳು ನಡೆಯುತ್ತಿವೆ. ಕೋವಿಡ್ 19 ಭೀತಿ ಇರುವುದರಿಂದ ರಾಜ್ಯ ಇಲಾಖೆಯ ಸೂಚನೆಯಂತೆ ಹೆಚ್ಚು ವರಿ ಕೊಠಡಿಗಳ ಬಳಕೆ ಮಾಡಲಾ ಗುವುದು ಎಂದು ದ.ಕ. ಡಿಡಿಪಿಐ ಮಲ್ಲೇಸ್ವಾಮಿ ತಿಳಿಸಿದ್ದಾರೆ.
ನಿರಾತಂಕವಾಗಿ ಓದಬಹುದು
ಈವರೆಗೆ ಲಾಕ್ಡೌನ್ ಮುಗಿದ ತತ್ಕ್ಷಣ ಏಕಾಏಕಿ ಪರೀಕ್ಷೆ ನಡೆಸುತ್ತಾರೆಯೋ ಎಂಬ ಬಗ್ಗೆ ಗೊಂದಲ ಮತ್ತು ಆತಂಕವಿತ್ತು. ಆದರೆ ಪ್ರಸ್ತುತ ಇನ್ನೂ ಒಂದು ತಿಂಗಳ ಕಾಲ ಹೆಚ್ಚುವರಿಯಾಗಿ ಓದಲು ಅವಕಾಶ ಸಿಕ್ಕಿದೆ. ಪರೀಕ್ಷೆ ದಿನಾಂಕವೂ ಘೋಷಣೆಯಾಗಿರುವುದರಿಂದ ನಿರಾತಂಕವಾಗಿ ಓದಬಹುದು.
-ಚಿತ್ತರಂಜನ್ ಎನ್.ಪಿ.,
ವಿದ್ಯಾರ್ಥಿ
ಭಯ ಹೋಗಿದೆ
ಪರೀಕ್ಷೆಯ ದಿನಾಂಕವನ್ನು ಘೋಷಣೆ ಮಾಡಿರುವುದರಿಂದ ಭಯ ಹೋಗಿದೆ. ಲಾಕ್ಡೌನ್ ಸಮಯದಲ್ಲಿ ಓದಿದ್ದು ಸ್ವಲ್ಪ ಕಡಿಮೆ. ಈಗ ಇನ್ನೂ ಒಂದು ತಿಂಗಳು ಓದಲು ಸಮಯವಿರುವುದರಿಂದ ಈ ಅವಧಿಯಲ್ಲಿ ಅಭ್ಯಾಸಕ್ಕೆ ಒತ್ತು ಕೊಡುತ್ತೇನೆ.
-ಗಗನ್, ವಿದ್ಯಾರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ
U. T. Khader ಮಂಗಳೂರಿನಿಂದ ಹಜ್ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ