ಗದಗ ಎಪಿಎಂಸಿಗೆ ಬಡ್ನಿ ಅವಿರೋಧ ಆಯ್ಕೆ
Team Udayavani, May 28, 2020, 7:22 AM IST
ಮುಳಗುಂದ: ಗದಗ ಎಪಿಎಂಸಿಗೆ ರೈತ ಮತಕ್ಷೇತ್ರದ ಸದಸ್ಯ ಸಿ.ಬಿ. ಬಡ್ನಿ ಮತ್ತೆ ಅಧ್ಯಕ್ಷರಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಎಪಿಎಂಸಿಯಲ್ಲಿ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಗದಗ ಎಪಿಎಂಸಿಗೆ ಸತತವಾಗಿ 6 ಬಾರಿ ಸಿ.ಬಿ. ಬಡ್ನಿ ಭಾರಿ ಆಯ್ಕೆಯಾಗಿದ್ದಾರೆ. ದೇಶದಲ್ಲಿಯೇ ಅತೀ ಹೆಚ್ಚು ಅವ ಧಿಗೆ ಎಪಿಎಂಸಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ದಾಖಲೆ ನಿರ್ಮಿಸಿದ ಡಿ.ಆರ್.
ಪಾಟೀಲ ಅಧ್ಯಕ್ಷರಾಗಿದ್ದ ಅವ ಧಿಯಲ್ಲಿ ಸಿ.ಬಿ. ಬಡ್ನಿ ನಾಲ್ಕ ಬಾರಿ ಉಪಾಧ್ಯಕ್ಷರಾಗಿದ್ದರು.
ಮಾಜಿ ಶಾಸಕರಾದ ಡಿ.ಆರ್. ಪಾಟೀಲ ಹಾಗೂ ಶಾಸಕ ಎಚ್.ಕೆ. ಪಾಟೀಲ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿಯೇ ಮಾದರಿ ಎಪಿಎಂಸಿ ಮಾಡಲು ಶ್ರಮಿಸಲಾಗುವುದು. ಸದಸ್ಯರ ಸಹಕಾರದಿಂದ ಎಲ್ಲ ರೈತರ, ಹಮಾಲರು, ದಲಾಲರು ಹಾಗೂ ಸಾಮಾನ್ಯ ಜನರಿಗೆ ಸಿಗುವ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಸಿ.ಬಿ. ಬಡ್ನಿ, ಎಪಿಎಂಸಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ