ಚೀನದ ರಣೋತ್ಸಾಹಕ್ಕೆ ಇಂದು ಭಾರತ ತಣ್ಣೀರು? ; 4 ಷರತ್ತುಗಳೊಂದಿಗೆ ಮಾತುಕತೆಗೆ ಸಜ್ಜು


Team Udayavani, Jun 6, 2020, 7:40 AM IST

ಚೀನದ ರಣೋತ್ಸಾಹಕ್ಕೆ ಇಂದು ಭಾರತ ತಣ್ಣೀರು? ; 4 ಷರತ್ತುಗಳೊಂದಿಗೆ ಮಾತುಕತೆಗೆ ಸಜ್ಜು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ದೇಶದ ಗಡಿ ರೇಖೆಯೆಂದರೆ ಯುದ್ಧಕಣವಲ್ಲ; ರಣೋತ್ಸಾಹಕ್ಕೆ ವೇದಿಕೆ ಅಲ್ಲ; ಅದು ಶಾಂತಿ- ನೆಮ್ಮದಿಗಳ ತಾಣ ಎಂದು ಚೀನಕ್ಕೆ ಬುದ್ಧಿ ಹೇಳುವ ದಿನ ಬಂದಿದೆ.

ಪ್ಯಾಂಗ್ಯಾಂಗ್‌ ಸರೋವರ ತೀರದಲ್ಲಿ ಶನಿವಾರ ಬೆಳಗ್ಗೆ 8ಕ್ಕೆ ನಡೆಯಲಿರುವ ಉಭಯ ದೇಶಗಳ ಲೆಫ್ಟಿನೆಂಟ್‌ ಜನರಲ್‌ಗ‌ಳ ಸಭೆಗೆ ಭಾರತ ಶಾಂತಿಯ ಸಂದೇಶ ಮತ್ತು ನಾಲ್ಕು ದಿಟ್ಟ ಷರತ್ತುಗಳೊಂದಿಗೆ ಸಜ್ಜಾಗಿದೆ.

ಪೂರ್ವ ಲಡಾಖ್‌ನ ಚುಶುಲ್‌- ಮೊಲ್ಡೊ ಗಡಿಯ ಬಿಪಿಎಂ ಪಾಯಿಂಟ್‌ನಲ್ಲಿ ಭಾರತೀಯ ಸೇನಾ ಪ್ರತಿನಿಧಿಯಾಗಿ ಲೆ| ಜ| ಹರಿಂದರ್‌ ಸಿಂಗ್‌ ಅವರು ಚೀನದ ಸೇನಾ ಕಮಾಂಡರ್‌ ಜತೆಗೆ ಮಾತುಕತೆ ನಡೆಸಲಿದ್ದಾರೆ.

ಪ್ಯಾಂಗ್ಯಾಂಗ್‌ ಸರೋವರದ ಸುತ್ತಮುತ್ತ ಯಥಾಸ್ಥಿತಿ ಕಾಯ್ದುಕೊಂಡು ಯಾವುದೇ ಮಿಲಿಟರಿ ಪುನಃಸ್ಥಾಪನೆ ನಡೆಸದಂತೆ ಚೀನಕ್ಕೆ ಭಾರತ ಕಠಿನವಾಗಿ ಸೂಚಿಸುವ ಸಾಧ್ಯತೆ ಇದೆ.

ಮಾತುಕತೆಗೂ ಮುನ್ನವೇ ಮೆತ್ತಗಾದ ಚೀನ
ಪೂರ್ವ ಲಡಾಖ್‌ ಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಪರಿಹರಿಸಲು ನಾವು ಬದ್ಧ. ಪ್ರಸ್ತುತ ಗಡಿ ಸ್ಥಿತಿ ನಿಯಂತ್ರಣದಲ್ಲಿದೆ. ರಾಜತಾಂತ್ರಿಕ ಮತ್ತು ಮಿಲಿಟರಿ ಮುಖ್ಯಸ್ಥರ ಮೂಲಕ ಪೂರ್ಣ ಪ್ರಮಾಣದಲ್ಲಿ ಸಮಸ್ಯೆ ಬಗೆಹರಿಸಲು ಸಿದ್ಧ ಎಂದು ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುವಾಂಗ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಲ್‌ಎಸಿ ಉದ್ದಕ್ಕೂ ಐಎಎಫ್ ಹಾರಾಟ
ಎಲ್‌ಎಸಿಯುದ್ದಕ್ಕೂ ಭಾರತೀಯ ಫೈಟರ್‌ ಜೆಟ್‌ಗಳ ಹಾರಾಟ ಬಿರುಸಾಗಿದೆ. ಕೆಲವು ದಿನಗಳಿಂದ ಅಕ್ಸಾಯ್‌ ಚಿನ್‌ ವಲಯದಲ್ಲಿ ಚೀನದ ಫೈಟರ್‌ ಜೆಟ್‌ಗಳು ಹಾರಾಡುತ್ತಿವೆ. ಇವುಗಳ ಮೇಲೆ ನಿಗಾ ಇರಿಸುವ ಕೆಲಸವನ್ನು ಭಾರತೀಯ ವಾಯುದಳ ಮಾಡುತ್ತಿದೆ. ನೋ ಫ್ಲೈ ಝೋನ್‌ ನಿಯಮಗಳನ್ನು ಭಾರತ ಉಲ್ಲಂಘಿಸಿಲ್ಲವಾದರೂ ಲಡಾಖ್‌ನ ಗಡಿಯಲ್ಲಿ ತನ್ನ ಬಲವರ್ಧನೆಗೆ ಮುಂದಾಗಿದೆ. ವಾಸ್ತವವಾಗಿ ಇಲ್ಲಿ ಚೀನದ ವಾಯುದಳಕ್ಕಿಂತ ಐ.ಎ.ಎಫ್.ಗೆ ಹೆಚ್ಚು ಅನುಕೂಲಗಳಿವೆ.

ಷರತ್ತುಗಳೇನು?
1.ಎಲ್‌ಎಸಿಯ ಪ್ರಮುಖ ನಾಲ್ಕೈದು ಸ್ಥಳಗಳಲ್ಲಿ ಇರುವ ಸೈನಿಕರನ್ನು ಚೀನ ಹಿಂಪಡೆಯಬೇಕು.

2. ‘ಫಿಂಗರ್‌ 4’ ವಲಯದವರೆಗೆ ಬಂದಿರುವ ಚೀನ ಅಲ್ಲಿಂದ ಹಿಂದೆ ಸರಿಯಬೇಕು.

3.ಎಲ್‌ಎಸಿಯ ಬದಿಯಲ್ಲಿ ಮೂಲ ಸೌಕರ್ಯ ಯೋಜನೆಗಳಿಗೆ ಚೀನ ತಕರಾರು ಎತ್ತುವಂತಿಲ್ಲ.

4. ಚೀನೀ ಸೈನಿಕರು ಸಂಯಮದಿಂದ ಗಡಿ ನಿಯಮಗಳನ್ನು ಪಾಲಿಸಬೇಕು.

ಟಾಪ್ ನ್ಯೂಸ್

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.