ಬದಲಾಗಬೇಕಿರುವುದು ಜಗತ್ತಲ್ಲ…ನಾವು


Team Udayavani, Jun 6, 2020, 5:40 PM IST

ಬದಲಾಗಬೇಕಿರುವುದು ಜಗತ್ತಲ್ಲ…ನಾವು

ಒಂದೂರಲ್ಲಿ ಒಬ್ಬ ರಾಜನಿದ್ದ. ರಾಜ್ಯವೂ ಸಿರಿಸಂಪತ್ತಿನಿಂದ ಕೂಡಿತ್ತು. ಅಕ್ಕ ಪಕ್ಕದ ರಾಜ್ಯಗಳಿಗಿಂತಲೂ ಈ ರಾಜ್ಯವೇ ಶ್ರೇಷ್ಠ ಮತ್ತು ಉತ್ತಮ ಆಡಳಿತ ಹೊಂದಿದೆ ಎಂಬ ಮಾತುಗಳಿದ್ದವು. ಹೀಗಿರುವಾಗ ರಾಜನಿಗೆ ಒಂದು ದಿನ ರಾಜ್ಯ ಸುತ್ತಾಡಬೇಕೆಂಬ ಮನಸ್ಸಾಯಿತು. ತನ್ನ ಆಸೆ ಇಡೇರಿಕೆಗಾಗಿ ರಾಜ್ಯದಲ್ಲಿ ಪ್ರವಾಸ ಹೊರಟ. ಆತ ಸಾಗಿದ ದಾರಿಗಳೆಲ್ಲ ಬರಿ ಕಲ್ಲು ಮುಳ್ಳುಗಳಿಂದ ಕೂಡಿತ್ತು. ಇದರಿಂದಾಗಿ ಬರಿಗಾಲಿನಲ್ಲಿ ಸಾಗಿದ್ದ ರಾಜನ ಕಾಲುಗಳಲೆಲ್ಲ ಬೊಬ್ಬೆಗಳು ಉಂಟಾದವು. ಇನ್ನೆರಡು ಹೆಜ್ಜೆ ಇಡಲೂ ತನ್ನಿಂದ ಸಾಧ್ಯವಿಲ್ಲ ಎಂಬುದು ರಾಜನಿಗೆ ಅರಿವಾಯಿತು. ತನ್ನ ರಾಜ್ಯದ ರಸ್ತೆಗಳು ಇಷ್ಟು ದುಸ್ಥಿತಿಯಲ್ಲಿವೆಯೇ ಎಂಬ ಖೇದವೂ ಉಂಟಾಯಿತು.

ಕೂಡಲೇ ಮಂತ್ರಿಗಳನ್ನು ಕರೆದ ರಾಜ, ರಾಜ್ಯದ ಎಲ್ಲ ರಸ್ತೆಗಳಿಗೂ ಚರ್ಮದ ಹೊದಿಕೆ ಮಾಡಿಸುವಂತೆ ಆದೇಶಿಸಿದ. ರಾಜಾಜ್ಞೆಯಂತೆ ಎಲ್ಲ ರಸ್ತೆಗಳಿಗೂ ಚರ್ಮದ ಹೊದಿಕೆ ಮಾಡಲು ಸಾವಿರಾರು ಪ್ರಾಣಿಗಳ ವಧೆಮಾಡಲೇ ಬೇಕಿತ್ತು. ಇದನ್ನು ಮನಗಂಡ ಮಂತ್ರಿಯೋರ್ವ ರಾಜನಿಗೆ ಸಲಹೆಯೊಂದನ್ನು ನೀಡಿದ. ರಾಜನೂ ಇದಕ್ಕೆ ಒಪ್ಪಿದ. ಆ ಸಲಹೆಯೇ ರಸ್ತೆಗಳಿಗೆ ಚರ್ಮ ಹೊದಿಸುವ ಬದಲು ತುಂಡು ಚರ್ಮದಿಂದ ರಾಜ ತನ್ನ ಪಾದಗಳನ್ನು ಮುಚ್ಚಿಕೊಳ್ಳಬಹುದು. ಇದರಿಂದ ಅನಗತ್ಯ ಖರ್ಚು ಕೂಡ ಕಡಿಮೆಯಾಗುತ್ತದೆ ಎಂಬುದನ್ನು ಮಂತ್ರಿ ತಿಳಿ ಹೇಳಿದ್ದ. ಹಾಗಾಗಿ ಅಂದಿನಿಂದಲೇ ರಾಜ ಪಾದರಕ್ಷೆ ಧರಿಸುವುದನ್ನು ಅಭ್ಯಸಿಸಿಕೊಂಡ.

ತಮ್ಮ ಪ್ರವಚನವೊಂದರಲ್ಲಿ ಸಂತರೋರ್ವರು ಹೇಳಿದ ಚಿಕ್ಕ ಕಥೆಯಿದು. ಜಗತ್ತನ್ನು ಬದಲಾಯಿಸುವ ಬದಲು ನಾವು ಬದಲಾಗಬೇಕು ಎಂಬುದು ಈ ಕಥೆಯ ನೀತಿ. ನಮ್ಮ ಸಮಾಜದಲ್ಲಿ ಅದು ಸರಿ ಇಲ್ಲ, ಇದು ಹೀಗಾಗಬೆಕಿತ್ತು ಎಂದು ಪುಂಖಾನುಪುಂಖವಾಗಿ ಹೇಳಿಕೊಂಡು ತಿರುಗುವ ಅನೇಕರು ಇದ್ದಾರೆ. ಆದರೆ ಆ ಬದಲಾವಣೆಗಾಗಿ ತಮ್ಮನ್ನೆಷ್ಟು ಅವರು ಬದಲಾಯಿಸಿಕೊಂಡಿದ್ದಾರೆ ಎಂಬುದು ಪ್ರಶ್ನೆ. ಕೇವಲ ಸಮಾಜದ ದೃಷ್ಟಿಯನ್ನು ಮಾತ್ರ ಇಟ್ಟುಕೊಂಡು ಈ ಕಥೆಯಿಲ್ಲ.

ಪ್ರತಿಯೊಬ್ಬರ ವೈಯಕ್ತಿಕ ಜೀವನಕ್ಕೂ ಇದು ಅನ್ವಯವಾಗುತ್ತದೆ. ಸದಾ ಬೇರೆಯವರ ತಪ್ಪನ್ನೇ ಹುಡುಕುತ್ತ ಬದುಕುವ ಬದಲು ನಮ್ಮ ತಪ್ಪನ್ನು ನಾವು ತಿದ್ದುಕೊಂಡು ಬಾಳುವ ಮನಃಸ್ಥಿತಿ ಎಲ್ಲರೂ ರೂಢಿಸಿಕೊಂಡರೆ ಬೇರೆಯವರ ತಪ್ಪು ಹುಡುಕುವವರಾದರೂ ಯಾರಿರುತ್ತಾರೆ? ಲೋಕದ ಡೊಂಕು ಸರಿಪಡಿಸುವ ಬದಲು ನಿಮ್ಮ ತನವನ್ನು, ಮನವನ್ನು ಸಂತೈಸಿಕೊಳ್ಳಿ ಎಂದು ವಚನಕಾರರೇ ಹೇಳಿಲ್ಲವೆ?

ಟಾಪ್ ನ್ಯೂಸ್

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.