ಜವುಳಿ ಮಳಿಗೆಗೆ ಭೇಟಿ: ಮುನ್ನೆಚ್ಚರಿಕೆಗಳೇನು?
ಬದುಕು ಬದಲಾಗಿದೆ ನಾವೂ ಬದಲಾಗೋಣ
Team Udayavani, Jun 11, 2020, 5:57 AM IST
ಅಗತ್ಯ ವಸ್ತುಗಳಲ್ಲಿ ವಸ್ತ್ರವೂ ಒಂದಾಗಿದೆ. ಬಟ್ಟೆ ಖರೀದಿಗೆಂದು ಮನೆ ಮಂದಿ ಜತೆಯಾಗಿ ಹೋಗುವ ಸಂದರ್ಭ ಹೆಚ್ಚು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯವಿರುವವರಷ್ಟೇ ಜನರು ತೆರಳಿ ಖರೀದಿ ನಡೆಸುವುದು ಉತ್ತಮ. ಸರಕಾರದ ಮಾರ್ಗಸೂಚಿಯಂತೆ ಸಣ್ಣ ಮಕ್ಕಳು ಮತ್ತು 65 ವರ್ಷ ಮೀರಿದ ಹಿರಿಯರು ಮನೆಯಿಂದ ಹೊರಗೆ ಬಾರದಿರುವುದು ಕ್ಷೇಮಕರ. ಆದುದರಿಂದ ಅವರಿಗೆ ಬೇಕಾದ ಬಟ್ಟೆಬರೆಗಳನ್ನು ಮನೆಯ ಇತರ ಸದಸ್ಯರು ಖರೀದಿಸಿ ತರುವುದು ಉತ್ತಮ. ನಮಗೆ ಯಾವ ರೀತಿಯ ಬಟ್ಟೆಗಳೆಲ್ಲ ಪ್ರಮುಖವಾಗಿ ಬೇಕು ಎಂಬ ಪಟ್ಟಿಯೊಂದನ್ನು ಮಾಡಿಕೊಂಡು ತೆರಳಿದರೆ ಖರೀದಿಸಲು ಸುಲಭವಾಗುತ್ತದೆ. ಇದರಿಂದ ಅನಾವಶ್ಯಕವಾಗಿ ಸುತ್ತಾಟ ತಪ್ಪುತ್ತದೆ. ಇನ್ನು ಇಲ್ಲಿಯೂ ಸರಕಾರದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಗ್ರಾಹಕರು ಸಹಕರಿಸುವುದು ಅಗತ್ಯ.
ಜವುಳಿ ಮಳಿಗೆಗಳು ಮತ್ತೆ ತೆರೆದಿವೆ. ಹೊಸ ಹೊಸ ಬಟ್ಟೆಗಳ ಖರೀದಿಗೆ ಅವಕಾಶ ಲಭಿಸಿದೆ. ಸುಮಾರು ಎರಡು ತಿಂಗಳಿನ ಅಂತರದ ಬಳಿಕ ಖರೀದಿಗೆ ಅವಕಾಶ ಸಿಕ್ಕಿರುವುದರಿಂದ ಸಹಜವಾಗಿಯೇ ಜನದಟ್ಟಣೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಯಾವೆಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲಿದೆ ಮಾಹಿತಿ.
ಬಹುತೇಕ ಬಟ್ಟೆ ಮಳಿಗೆಗಳಲ್ಲಿ ಮಾಸ್ಕ್ ಹಾಕಿದವರನ್ನು ಮಾತ್ರ ಒಳಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಆದುದರಿಂದ
ಮಾಸ್ಕ್ ಧರಿಸುವುದನ್ನು ಮರೆಯದಿರಿ. ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ಗಳನ್ನು ಇಡಲಾಗಿದೆ. ಒಳಗಡೆ ಹೋಗುವಾಗ ಮತ್ತು ಹೊರಗೆ ಬರುವಾಗ ಅದನ್ನು ಬಳಸಿ.
ಶೀತ, ಕೆಮ್ಮು ಇರುವ ಗ್ರಾಹಕರು ಬಟ್ಟೆ ಮಳಿಗೆಗಳಿಗೂ ಹೋಗಬಾರದು. ಹೋದರೂ ಅಲ್ಲಿಂದ ಆಸ್ಪತ್ರೆಗೆ ಹೋಗುವಂತೆ ಮಳಿಗೆಯಲ್ಲಿರುವವರೇ ಮನವಿ ಮಾಡಿ ಕಳುಹಿಸುತ್ತಾರೆ. ಈ ನಿಯಮವನ್ನು ಅಂಗಡಿಗಳಲ್ಲಿ ಸಿಬಂದಿ ಸಹಿತ ಎಲ್ಲರೂ ಪಾಲಿಸುತ್ತಾರೆ.
ಗ್ರಾಹಕರ ಮಧ್ಯೆ ಸಾಮಾಜಿಕ ಅಂತರ ಬಹಳ ಮುಖ್ಯ. ಜನಸಂದಣಿ ಆಗದಂತೆ ಮಳಿಗೆಗಳಲ್ಲಿ ಏಕಕಾಲದಲ್ಲಿ ಹೆಚ್ಚು ಗ್ರಾಹಕರು ಒಳಗಡೆ ಪ್ರವೇಶಿಸದಂತೆ ನೋಡಿಕೊಳ್ಳಲಾಗುತ್ತದೆ. ಒಂದು ವೇಳೆ ಗ್ರಾಹಕರು ಹೆಚ್ಚಿದ್ದರೆ ಸ್ವಲ್ಪ ಸಮಯ ಕಾದು ಅನಂತರ ಮಳಿಗೆ ಪ್ರವೇಶಿಸಬೇಕಾಗುತ್ತದೆ.
ಬಟ್ಟೆಗಳನ್ನು ಸ್ಪರ್ಶಿಸಲು ಅವಕಾಶವಿದ್ದರೂ ಸ್ಯಾನಿಟೈಸರ್ ಬಳಸಿ ಸ್ಪರ್ಶಿಸುವುದು ಕಡ್ಡಾಯವಾಗಿದೆ. ಈಗ ಬಹುತೇಕ ಕಡೆಗಳಲ್ಲಿ ಒಮ್ಮೆ ಖರೀದಿಸಿ ಕೊಂಡುಹೋದ ಬಟ್ಟೆಗಳನ್ನು ಮತ್ತೆ ಹಿಂದಿರುಗಿಸಲು ಅವಕಾಶವಿರುವುದಿಲ್ಲ. ಆದುದರಿಂದ ಖರೀದಿಸುವಾಗಲೇ ಹೆಚ್ಚಿನ ಜಾಗರೂಕತೆ ವಹಿಸಿ.
ಬಟ್ಟೆಗಳನ್ನು ಧರಿಸಿ ನೋಡುವ ಸಲುವಾಗಿ ಇರುತ್ತಿದ್ದ ಟ್ರಯಲ್ ರೂಂಗಳನ್ನು ಹೆಚ್ಚಿನ ಕಡೆಗಳಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ದೂರದಲ್ಲಿಯೇ ಕನ್ನಡಿಯಲ್ಲಿ ಬಟ್ಟೆ ಹಿಡಿದು ತೋರಿಸಲಾಗುತ್ತದೆ. ಹೆಚ್ಚಿನ ಕಡೆ ಲಿಫ್ಟ್ ಮತ್ತು ಎಸಿ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್ ಮಾಡಿ.
9148594259
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು