ಅಪ್ಪನ ನೆನಪು: ಅಮ್ಮನ ಎದೆಹಾಲಿನಷ್ಟೇ ಮುಖ್ಯ ಅಪ್ಪನ ಬೆವರ ಹನಿ

ಹೌದು ಅಪ್ಪಾ..ನೀನು ನಿಜಕ್ಕೂ ನಾನು ಓದಿ ಮುಗಿಸಲಾರದ ಕಾದಂಬರಿ!

Team Udayavani, Jun 21, 2020, 11:09 AM IST

ಅಪ್ಪನ ನೆನಪು: ಅಮ್ಮನ ಎದೆಹಾಲಿನಷ್ಟೇ ಮುಖ್ಯ ಅಪ್ಪನ ಬೆವರ ಹನಿ

ತೀರ್ಥರೂಪರಿಗೆ ನಿಮ್ಮ ಮಗಳು ಮಾಡುವ ನಮಸ್ಕಾರಗಳು,
ಅಮ್ಮ ನವಮಾಸ ಹೊತ್ತು, ಹೆರುತ್ತಾಳೆ. ಅಪ್ಪ ಬೆವರು ಸುರಿಸಿ ದುಡಿದು ಕಾಳಜಿಯಲಿ ಸಾಕುತ್ತಾನೆ.”ಅಮ್ಮನ ಎದೆಹಾಲಿನಷ್ಟೇ ಮುಖ್ಯ ಅಪ್ಪನ ಬೆವರ ಹನಿ” ಅಪ್ಪಾ ಐ ಲವ್ಯೂ ಪಾ… ಬಾಲ್ಯದಿಂದ ಇಂದಿನವರೆಗೆ ಮೆಲ್ಲನೆ ದೃಷ್ಟಿ ಹಾಯಿಸಿದಾಗ ಥಟ್ಟನೆ ನೀನೇ ನೆನಪಾಗುವೆ ಅಪ್ಪಾ..ತನ್ನ ಕೂಸು ಜಗವನೆಲ್ಲ ನೋಡಬೇಕು, ಆಕೆ ಹಲವರಿಗೆ ಆದರ್ಶಳಾಗಿ ಬಾಳು ಕಟ್ಟಿಕೊಳ್ಳಬೇಕು ಹೀಗೆ ಹತ್ತು ಹಲವು ಕನಸನ್ನು ಹೆಜ್ಜೆ ಹೆಜ್ಜೆಗೂ ಕಾಣುತ್ತಿ ಎಂದು ನಿನ್ನ ಕಂಗಳ ಇಣುಕಿದಾಗಲೇ ತಿಳಿಯುವುದು.

ಪುಟ್ಟ ಪಾದಗಳು ಎದ್ದು ಬಿದ್ದು ನಡೆಯುವಲ್ಲಿ ನಿನ್ನ ಕೈಗಳು ಧೈರ್ಯ ತುಂಬುತ್ತಿದ್ದವು. ಇಂದು ಜೀವನದಲ್ಲಿ ಕ್ಲಿಷ್ಟಕರ ಸನ್ನಿವೇಶವನ್ನು ಮೆಟ್ಟಿ ನಿಂತು ಮೇಲೇರಲು ತೊಡಗಿದ್ದೇನೆ ಎಂದಾದಲ್ಲಿ ನಿನ್ನ ಪ್ರೋತ್ಸಾಹ ಮತ್ತು ಧೈರ್ಯದ ನುಡಿಗಳೇ ಕಾರಣ. ಸೋಲೆಂಬ ಮಡುವಿನಲ್ಲಿ ಬಿದ್ದಾಗ ಆತ್ಮವಿಶ್ವಾಸ ತುಂಬುವ ಸನ್ನಾಹದಲಿ ನಿಜಕ್ಕೂ ಅನುಭವ ಅದ್ವಿತೀಯ. ಅಪಮಾನವೆಂಬ ವಾರಿಧಿಯಲಿ ಚೈತನ್ಯದ ಕಾಲುವೆ ಕಟ್ಟಿ ಚಿಕಿತ್ಸೆ ನೀಡುವ ನಂಬಿಕೆಯ ನಾವಿಕ ನೀನೆ ಎಂದರೆ ತಪ್ಪಾಗಲಾರದು. ನಡೆ- ನುಡಿ ,ರೀತಿ-ನೀತಿಗಳ ಬಗ್ಗೆ ತಿಳಿಸಿ ನನ್ನ ಜೀವನಕ್ಕೆ ಹಾಸುಗಲ್ಲ ಹಾಸಿದವನೇ ನೀನು. ನಾನು ಇಟ್ಟ, ಇಡುವ ಪ್ರತಿ ಹೆಜ್ಜೆಯಲ್ಲೂ ನೀನು ಇರುವೆ.

ಹೌದು ಅಪ್ಪಾ..ನೀನು ನಿಜಕ್ಕೂ ನಾನು ಓದಿ ಮುಗಿಸಲಾರದ ಕಾದಂಬರಿ! ಯಾವುದೇ ವಿಶ್ವವಿದ್ಯಾಲಯದಲ್ಲಿಯೂ ನೀನು ಕಲಿಸಿದ, ಕಲಿಸುತ್ತಿರುವ, ಕಲಿಯಬೇಕಿರುವ ಮಾಹಿತಿಗಳು ದೊರಕುವುದು ಅತ್ಯಂತ ಕಷ್ಟ ಎಂಬುದು ನಾನು ಕಂಡ ಸತ್ಯ.

ಇಂತಿ..
ನಿನ್ನ ಆಶೀರ್ವಾದ, ಪ್ರೀತಿ, ಮಮತೆ, ಹಿತನುಡಿ ಎಲ್ಲವನ್ನು ಸದಾ ಬಯಸುವ ನಿನ್ನ ಪ್ರೀತಿಯ ಮಗಳು …
-ಪಂಚಮಿ ಭಟ್ ಬಾಕಿಲಪದವು

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.