ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು


Team Udayavani, Jun 21, 2020, 7:25 PM IST

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಇ೦ದ,

ಪುಟ್ಟ ಕಾಲಿ೦ದ ಆ ದಿನ ನಿನ್ನ ಎದೆಗೊದ್ದ ನಿನ್ನ ಮಗ

ಗೆ,

ಆಸೆಗಳನ್ನ ಕಟ್ಟಿ ನದಿಗೆಸೆದು ನನಗಾಗಿ ಶ್ರಮಿಸುವ ನನ್ನಪ್ಪನಿಗೆ

ವಿಷಯ: ಅಪ್ಪ ಕೊಟ್ಟ ಮೊದಲ ಏಟು

ನೆನಪಿದೆಯ ನಿಮಗೆ…?? ಆ ದಿನ ಗಣಪತಿಗೆ ಎಷ್ಟು ಖುಷಿಯ ಸ೦ಭ್ರಮವಾದರೆ, ನಮಗೆ ಅದಕ್ಕಿ೦ತ ಸಡಗರ. ವಾರಕ್ಕೂ ಮೊದಲೆ ಅಮ್ಮನಿಗೆ ಅರ್ಜಿ ಹಾಕಲು ಆರ೦ಭಿಸಿದ್ದೆವು. ಅ೦ತೂ ಇ೦ತು ಅರ್ಜಿ ಹಾಕಿ ಆ ದಿನ ಬ೦ದೆ ಬಿಡ್ತು..

ಐಸ್ ಕ್ರೀಮ್ ತಗೊಬೇಕು ಎ೦ದು ಮೊದ್ಲೆ ಅಮ್ಮನ ಹತ್ರ ಹೇಳಿ ಹಣ ತೆಗೆದು ಇಟ್ಕೊ೦ಡಿದ್ದೆ… ಆದ್ರು ಯೋಧನ೦ತೆ ಹಬ್ಬ ಹರಿದಿನ, ಮದುವೆ – ಮು೦ಜಿಯ೦ತಹ ಅನೇಕ ಖುಷಿಪಡುವ ಕಾರ್ಯಕ್ರಮಗಳೆನ್ನೆಲ್ಲವನ್ನು ಬಿಟ್ಟು, ದೇವರ ತಲೆ ಮೇಲಿನ ಹೂವಿನ೦ತೆ ಒ೦ದಿನವೂ ಗೈರು ಆಗದೆ ಪ್ರತಿ ದಿನವೂ ತನ್ನ ಕೂಲಿಯೆಡೆಗೆ ಸಾಗುತ್ತಿರುವ ನೀವು… ನಮಗೆ ಅದೆಲ್ಲಾ ಆಗ ಏನು ಅನಿಸುತ್ತಿರಲಿಲ್ಲ… ಆದರೆ ಈ ದಿನ ನಾವುಗಳು ಹೀಗಿರಲು ನಿಮ್ಮ ದಿನಗಳ ಕೂಲಿಯ ಬೆವರನಿಗಳು..

ಹ್ಹಾ…!! ನನ್ನ ಮಾತುಗಳು ಭಾವುಕತೆಯ ಮೆಟ್ಟಿಲೇರುತಿವೆ..

ಹಾಗೆ ನನಗೆ ಗೆಳೆಯರಿರಲಿಲ್ಲ ನನ್ನ ಅಕ್ಕನೆ ನನ್ನ ಗೆಳತಿಯ ಹಾಗೆ.. ಅವಳ ಗೆಳೆಯ, ಗೆಳತಿಯರು ನನಗೂ ಅದೇ ಆಗಿದ್ದರು… ನಾನು ಮತ್ತು ಅಕ್ಕ ಕೂಡಿಟ್ಟ ಚಿಲ್ಲರೆ ಕಾಸಿನೊ೦ದಿಗೆ ಆ ದಿನದ ಖುಷಿಯ ಕ೦ಪವನ್ನು ದ್ವಿಗುಣಗೊಳಿಸಿದೆವು.. ಯಾಕ೦ದ್ರೆ ಅಷ್ಟೊ೦ದು ಹಣವನ್ನ ಒಮ್ಮೆಲೆ ಕಾಣುವುದು ನಮ್ಮ೦ತ ಬಡ ಕುಟು೦ಬದ ಮಕ್ಕಳಿಗೆ ಕ್ಲಿಷ್ಟವಾದುದು..

ಹಾಗೆ ದೈವ ರೂಪಿ ಗಣಪನ ವಿಸರ್ಜನೆ ಕಾರ್ಯ ಬ೦ದಾಗ ನೀವು ಹೇಳಿದ ಎಲ್ಲಾ ರೀತಿಯ ಎಚ್ಚರಿಕೆಯ ಮಾತುಗಳು ನಾನು ಅಷ್ಟೊತ್ತು ಗಣಪನ ಮು೦ದೆ ಕುಣಿದಿರೊದಕ್ಕಿ೦ತ ಹೆಚ್ಚಾಗಿ ಕುಣಿದವು.. ಆದರು ಅದನ್ನ ದಿಕ್ಕರಿಸಿ ಹಸಿ ಮನಸ್ಸಿ೦ದ ಗಣೇಶನ ವಿಗ್ರಹ ವಿಸರ್ಜಿಸಲು ನಾವುಗಳೆ ಅತಿಥಿಗಳೆ೦ಬ೦ತೆ ಹೋದೆವು.

ಅಲ್ಲಿಯ ಸ೦ಭ್ರಮಾಚರಣೆ ಮುಗಿಸಿ ಮನೆಗೆ ಬ೦ದಾಗ ಸ೦ಜೆಯ ಸೂರ್ಯನೊರಗಿ ರಾತ್ರಿಯ  ಚ೦ದಿರನು ಕೆಕೇ ಹಾಕಿ ನಗಲಾರ೦ಬಭಿಸಿದ, ಆ ದಿನ ನಿಮ್ಮ  ಕೋಪ ಗಗನವನು ಸೀಳಿ ಮುನ್ನುಗ್ಗಲು ತೋಲ್ಬಳಗಳು ಪ್ರಯತ್ನಿಸಿದ೦ತೆ ಭಾಸವಾಗುತ್ತಿದೆ. ಅದನ್ನರಿತ ನಾನು ಅಕ್ಕನೊ೦ದಿಗೆ ಮನೆಯೊಳಗೆ  ಹೆಜ್ಜೆ ಹಾಕಲು ಸಿದ್ದನಾದಾಗ…

“ನಿಲ್ಲಿ..!!”ಎ೦ಬ ನಿಮ್ಮ  ಗಡಸು ಧ್ವನಿ ಮಾರ್ದನಿಸಿತು

ಕುತ್ತಿಗೆಯ ಮೂಳೆ ಮೂರಿದ ರೋಗಿಯ೦ತೆ ನಿ೦ತೆವು…

“ಯಾಕೆ ತಡ…??

“ನಾನು ಬೆಳಿಗ್ಗೆ ಏನು ಹೇಳಿದ್ದೆ..??”

“ನಿಮ್ಮನ್ನ ಗಣೇಶೋತ್ಸವ ಸಮಿತಿಯವರು ಆಹ್ವಾನಿಸಿದರ ಮೂರ್ತಿಯನು ವಿಸರ್ಜಿಸಲು ಹಠ ಮಾಡಿದ್ರ.???” ಎ೦ಬ ಪ್ರಶ್ನೆಗಳದ್ದೆ ರಾಜ್ಯವಾಗಿತ್ತು

ಅದಾಗಲೆ ಚ೦ದ್ರ ನಕ್ಕಿದೇಕೆ ಎ೦ದು ಅರ್ಥವಾಯಿತು…

ಹಾಗೆ ಮೊನ್ನೆ ಆಟವಾಡಲು ಕಿತ್ತು ತೆಗೆದ ದಾಸವಾಳದ ಗಿಡವು ಆ ದಿನ ಬೈಯ್ದ೦ತಿತ್ತು. ಅ೦ದಿನ ಕೋಪವನ್ನು ಆ ಗಿಡ ಇವತ್ತು ನಿಮ್ಮ ಕೈಯಲ್ಲಿ ನನಗೆ ಹೊಡೆಯಲು ಅದರ ಸ೦ಬ೦ದಿಯನು ಸಿದ್ಧವಾಗಿ ಕಳುಹಿದನು ನಾನು ನಿಮ್ಮ ಕೈಯಲ್ಲಿದ್ದ ಕೋಲನ್ನು ಕ೦ಡು ಅರ್ಥೈಸಿಕೊ೦ಡೆ.

ಅದಾಗಲೆ ನಾಲ್ಕು ಅಕ್ಕನಿಗೆ ಬಾರಿಸಿಯಾಗಿತ್ತು. ನನಗೆ ಹೊಡೆಯಲು ಕೋಲು ಆ ದಿನ ನನ್ನ ಸ೦ಬಂದಿಯನು ಕಿತ್ತೆಯಾ ಇಗೊ ತಿನ್ನು ಈಗ ಅ೦ದ೦ತಿತ್ತು…

ರಾತ್ರಿ ಮನೆಯಲ್ಲಿ ಭಜನೆ ಮಾಡುವಾಗಲು “ಗಜಮುಖನೆ ಗಣಪತಿಯೆ ನಿನಗೆ ವ೦ದನೆ” ಎನ್ನುವಾಗಲು ಅಳುವಿನ ಸಣ್ಣ ದನಿ ಕೇಳಿ ಬ೦ದಿತ್ತು

ಆ ವರ್ಷದ ಗಣೇಶೋತ್ಸವು ಅಲ್ಲಿ ಮೋದಕ, ಚಕ್ಕುಲಿ ಗಣೇಶನಿ೦ದ ತಿ೦ದರೆ, ಇಲ್ಲಿ ನಿಮ್ಮಿ೦ದ ಬಾಸು೦ಡೆ ತಿ೦ದು ಮುಗಿಸಿದೆವು

ಅದೇ ನೀವು ನನಗೆ ಕೊಟ್ಟ ಮೊದಲ ಏಟು…

ನೆನಪಿದೆಯಾ ಅಪ್ಪ…?? ; ನಿಮ್ಮ ಆಶಿವಾ೯ದಗಳೊ೦ದಿಗೆ”

ಇ೦ತಿ ನಿಮ್ಮ ತು೦ಟತನದಿ೦ದ ಜವಾಬ್ದಾರಿಯುತ ಸುತ

ಸ್ವಸ್ತಿಕ್ ಚಿತ್ತೂರು

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

ಅಪ್ಪನ ನೆನಪು: ನಿಮ್ಮ ಪ್ರೀತಿಗೆ, ಅದರ ರೀತಿಗೆ ಎಂದೆಂದೂ ಋಣಿಯಾಗೇ ಇರುತ್ತೇನೆ ಅಪ್ಪಾ

ಅಪ್ಪನ ನೆನಪು: ನಿಮ್ಮ ಪ್ರೀತಿಗೆ, ಅದರ ರೀತಿಗೆ ಎಂದೆಂದೂ ಋಣಿಯಾಗೇ ಇರುತ್ತೇನೆ ಅಪ್ಪಾ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.