ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು


Team Udayavani, Jun 21, 2020, 5:54 PM IST

ಅಪ್ಪನ ನೆನಪು: ಅಪ್ಪನೆಂಬ ಶಕ್ತಿ ಅಸ್ತ್ರ ; ಅಪ್ಪನೆಂಬ ಅಪಾರ ಸಂಪತ್ತು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಅದೆಷ್ಟು ಕಠಿಣವಾಗಿದ್ದರೂ ಸರಳತೆಯ ಸಾಕಾರ ಮೂರ್ತಿ ಆಗಿದ್ದೆ. ಅಪ್ಪಾ, ನೀನು ಬಡತನಕ್ಕೆ ಬೇಸತ್ತೋ ಇಲ್ಲಾ ನಿನ್ನನ್ನು ನೀನು ದಂಡಿಸಿಕೊಳ್ಳುವುದಕ್ಕೊ ಮನೆಯಲ್ಲಿ ಅನ್ನ ಆಹಾರಕ್ಕೆ ಕೊರತೆ ಇದ್ದರೂ ಇದ್ದ ದುಡ್ಡಿನಲ್ಲಿಯೇ ಕುಡಿದು ಮರುಗುತ್ತಾ ನಿನ್ನ ಆರೋಗ್ಯ ನೀನೇ ಹಾಳು ಮಾಡಿಕೊಳ್ಳುತ್ತಿದ್ದೆ. ಅಪ್ಪಾ, ಒಂದು ದಿನ ಹೀಗೆಯೇ ಕುಡಿಯುತ್ತಲೆ ಕಣ್ಮುಚ್ಚಿಕೊಂಡುಬಿಟ್ಟೆ. ಇಂದಿಗೆ ನೀನಿಲ್ಲದೆ ಹೋಗಿ ಏಳು ವರ್ಷಗಳೇ ಗತಿಸಿಹೋಗಿವೆ ಅಪ್ಪಾ.

ಅದೋ ಆ ಹೊತ್ತು: ಕಿತ್ತು ತಿನ್ನುವ ಬಡತನ, ಅನ್ನದ ಹುಡುಕಾಟದಲ್ಲಿ ನಿನ್ನ ಗಾರೆ ಕೆಲಸ. ಒಡಲಿಗೆ ತುತ್ತನೂಡಲು ರಾತ್ರಿ ನೀ ಬರುವುದನ್ನು ಕಾತರಿಸಿ ಕಾಯುತ್ತಾ ಕುಳಿತುಕೊಳ್ಳುವ ನಮ್ಮ ಕಣ್ಣುಗಳು ಕುಡಿದು ಜೋಲಿ ಹೊಡೆಯುತ್ತಾ ಬರುವ ನಿನ್ನ ಕೈಗಳನ್ನೇ ಕಳವಳಗೊಂಡು ದಿಟ್ಟಿಸುತ್ತಿದ್ದವು.

ನಿನ್ನ ಕೈಯಲ್ಲಿಯ ಅನ್ನದ ಮೂಲ ಕಂಡರೆ ಕಣ್ಣುಗಳು ಅರಳುತ್ತಿದ್ದವು. ಆ ಹೊತ್ತಲ್ಲಿ ಅಪ್ಪಾ ನೀನು ಹಸಿವೆಂಬ ರಕ್ಕಸನನ್ನು ಹತ್ತಿಕ್ಕಲು ಏಕೈಕ ಶಕ್ತಿ ಅಸ್ತ್ರವಾಗಿದ್ದೆ ನಮ್ಮನ್ನು ರಕ್ಷಿಸಲು. ಜೀವ ತುಂಬುವ ಚೈತನ್ಯ ಚಿಲುಮೆಯಾಗಿದ್ದೆ. ಬೆಲೆ ಕಟ್ಟಲಾಗದ ಒಲುಮೆಯಾಗಿದ್ದೆ. ಅಪ್ಪಾ ಇಂದು ಅಪ್ಪಂದಿರ ದಿನವಂತೆ. ನೀನಿಲ್ಲದೆ ಇಂದು ಮೋಡವಿಲ್ಲದ ಮಳೆಗಾಲದಂತೆ, ಚಂದ್ರ- ತಾರೆಗಳಿಲ್ಲದ ಇರುಳು ಆಕಾಶದಂತೆ ಈ ನಮ್ಮ ಬದುಕು ಭಾಸವಾಗುತ್ತದೆ.

ಅಪ್ಪಾ ಐ ಮಿಸ್ ಯು… ಅಪ್ಪಾ ಐ ಲವ್ ಯು…

– ಕಾಸಿಂ ನದಾಫ್ ಭೈರಾಪುರ (ಕೊಪ್ಪಳ)

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಅನ್ನೋ ಅಚ್ಚು ಮೆಚ್ಚಿನ ಹೀರೋಗೆ…

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ಅಪ್ಪ ಕೊಟ್ಟ ಮೊದಲ ಏಟು

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು: ನಿಮ್ಮ ನೀತಿ ಮಾತುಗಳೇ ನನಗೆ ದಾರಿದೀಪ

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

ಅಪ್ಪನ ನೆನಪು : “ಕಣ್ಣೀರಲ್ಲಿ ಬಂದು ಹೋಗುವನು ನನ್ನ ಅಪ್ಪ…’

ಅಪ್ಪನ ನೆನಪು: ನಿಮ್ಮ ಪ್ರೀತಿಗೆ, ಅದರ ರೀತಿಗೆ ಎಂದೆಂದೂ ಋಣಿಯಾಗೇ ಇರುತ್ತೇನೆ ಅಪ್ಪಾ

ಅಪ್ಪನ ನೆನಪು: ನಿಮ್ಮ ಪ್ರೀತಿಗೆ, ಅದರ ರೀತಿಗೆ ಎಂದೆಂದೂ ಋಣಿಯಾಗೇ ಇರುತ್ತೇನೆ ಅಪ್ಪಾ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.