ತೆರಿಗೆ ಉಳಿಸುವ ಮನಸ್ಸಿದೆಯಾ? ದಾರಿಗಳಿವೆ

2019-20ರ ಅವಧಿಗಾಗಿ ತೆರಿಗೆ ಉಳಿಸಲು ಇನ್ನೂ ಹೂಡಿಕೆ ಮಾಡಬಹುದು; ಜೂ.30ರೊಳಗೆ ಪ್ರಕ್ರಿಯೆ ಮುಗಿಸಿ

Team Udayavani, Jun 22, 2020, 12:30 PM IST

ತೆರಿಗೆ ಉಳಿಸುವ ಮನಸ್ಸಿದೆಯಾ? ದಾರಿಗಳಿವೆ

ಕೇಂದ್ರ ಸರ್ಕಾರ 2019-20 ವಿತ್ತೀಯ ವರ್ಷದ ಆದಾಯ ತೆರಿಗೆ ಹಿಂಪಾವತಿ ದಾಖಲೆ ಸಲ್ಲಿಸಲು, ಗಡುವನ್ನು ವಿಸ್ತರಿಸಿದೆ. ಕೊರೊನಾ ದಿಗ್ಬಂಧನದ ಹಿನ್ನೆಲೆಯಲ್ಲಿ ನ.30ರವರೆಗೆ ಅವಕಾಶ ನೀಡಲಾಗಿದೆ. ಆದ್ದರಿಂದ ನಿಮಗೊಂದು ಅಪೂರ್ವ ಅವಕಾಶ. ನೀವಿನ್ನೂ ತೆರಿಗೆ ಹಣ ಉಳಿಸಲು ಸಾಕಷ್ಟು ಹೂಡಿಲ್ಲವೇ? ಹಾಗಾದರೆ ಚಿಂತೆಯಿಲ್ಲ, ಹೀಗೆ ಹೂಡಿಕೆ ಮಾಡಲೂ ಮಾ.31ರಿಂದ ಜೂ.30ರವರೆಗೆ ಕೇಂದ್ರ ಅವಕಾಶ ವಿಸ್ತರಿಸಿದೆ! ಯಾವ್ಯಾವ ರೀತಿಯಲ್ಲಿ ಹೂಡಿಕೆ ಮಾಡಬಹುದು ಎನ್ನುವುದಕ್ಕೆ ಇಲ್ಲಿವೆ ದಾರಿಗಳು.

ಭವಿಷ್ಯನಿಧಿ, ಸುಕನ್ಯ ಸಮೃದ್ಧಿ ಯೋಜನೆ
ತೆರಿಗೆದಾರರು ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ), ಸುಕನ್ಯ ಸಮೃದ್ಧಿ ಯೋಜನೆ ಖಾತೆ ಹೊಂದಿದ್ದು, ದಿಗ್ಬಂಧನದ ಕಾರಣ ಪಾವತಿ ಮಾಡಲಾಗಿರದಿದ್ದರೆ, ಇಲ್ಲೂ ಹಣ ಹೂಡುವ ಅವಕಾಶವಿದೆ. ದಿಗ್ಬಂಧನದ ಹಿನ್ನೆಲೆಯಲ್ಲಿ ಮಾ.31ರೊಳಗೆ ನಿಮಗೆ ಕಂತು ಪಾವತಿ ಮಾಡಲು ಸಾಧ್ಯವಾಗದಿದ್ದರೆ ಜೂ.30ರೊಳಗೆ ಮಾಡಬಹುದು. ಆದರೆ ಮಾ.31ರಿಂದ ಜೂ.30ರ ವಿಸ್ತೃತ ಅವಧಿಯಲ್ಲಿ, ಒಂದು ಬಾರಿ ಅದಕ್ಕಾಗಿ ಸೂಚಿಸಲ್ಪಟ್ಟಿರುವ ನಿರ್ದಿಷ್ಟ ಮಿತಿಯಲ್ಲಿ ಮಾತ್ರ ಹಣ ಹಾಕಲು ಸಾಧ್ಯ. ಒಂದು ವೇಳೆ ನೀವು ಆದಾಯ ತೆರಿಗೆ ಉಳಿಸಲು ಬೇಕಾದ ಎಲ್ಲ ಹೂಡಿಕೆ ಮಾಡಿದ್ದರೆ, ಈ ಬಗ್ಗೆ ತಲೆಕೆಡಿಸಿಕೊಳ್ಳದೇ ದಾಖಲೆ ಸಲ್ಲಿಸುವತ್ತ ಗಮನಿಸಬಹುದು.

ಇಎಲ್‌ಎಸ್‌ಎಸ್‌
ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್‌ ಸ್ಕೀಮ್‌ ಅನ್ನು (ಈಕ್ವಿಟಿ ಸಂಬಂಧಿತ ಉಳಿತಾಯ ಯೋಜನೆ) ಕಿರಿದಾಗಿ ಇಎಲ್‌ಎಸ್‌ಎಸ್‌ ಎಂದು ಕರೆಯಲಾಗುತ್ತದೆ. ಇಎಲ್‌
ಎಸ್‌ಎಸ್‌ ಮ್ಯೂಚುವಲ್‌ ಫ‌ಂಡ್‌ಗಳಿಗೆ (ಇಲ್ಲಿನ ಬಹುತೇಕ ಹಣವನ್ನು ಈಕ್ವಿಟಿ ಅಥವಾ ಅದಕ್ಕೆ ಸಂಬಂಧಿಸಿದ ಷೇರುಗಳಲ್ಲಿ ಹೂಡಲಾಗುತ್ತದೆ), ವಾರ್ಷಿಕವಾಗಿ ಶೇ.12ರಿಂದ 15ರಷ್ಟು ಹಣ ಉಳಿಯುತ್ತದೆ. ಆದ್ದರಿಂದಲೇ ಆದಾಯ ತೆರಿಗೆ ಕಾಯ್ದೆಯ 80ಸಿ ವಿಧಿಯಡಿ ಬರುವ ದಾರಿಗಳ ಪೈಕಿ ಇದನ್ನು ಅತ್ಯುತ್ತಮ ಹೂಡಿಕೆ ಎನ್ನುತ್ತಾರೆ ತಜ್ಞರು. ಇದು ಕೇವಲ ಮೂರು ವರ್ಷದ ಅವಧಿಯ ಯೋಜನೆ. ಇಲ್ಲಿ ಹೂಡಿಕೆ ಮಾಡಿದರೆ, ತೆರಿಗೆ ಉಳಿಸುವುದರ ಜೊತೆಗೆ ಲಾಭವನ್ನೂ ಗಳಿಸಬಹುದು. ಪ್ರಸ್ತುತ ಮಾರುಕಟ್ಟೆಯೂ ಇದಕ್ಕೆ ಪೂರಕವಾಗಿದೆ.

ಪ್ರಧಾನಿ ಪರಿಹಾರ ನಿಧಿಯನ್ನೂ ಪರಿಗಣಿಸಬಹುದು!
ಈ ಆಯ್ಕೆಗಳ ಜೊತೆಗೆ ಇನ್ನೂ ಹಲವು ದಾರಿಗಳು ತೆರಿಗೆ ಉಳಿಸಲು ಮುಕ್ತವಾಗಿಯೇ ಇದೆ. ಅದರಲ್ಲೊಂದು ಪ್ರಧಾನಮಂತ್ರಿ ಪರಿಹಾರ ನಿಧಿ (ಪಿಎಂ ಕೇರ್ಸ್‌ ಫ‌ಂಡ್‌). ಇನ್ನು ಐದು ವರ್ಷದ ನಿಗದಿತ ಠೇವಣಿ, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್‌), ಜೀವ ವಿಮಾ ನಿಗಮದ ಪಾಲಿಸಿಗಳಲ್ಲೂ ಹಣ ಹೂಡಬಹುದು. ಆರೋಗ್ಯ ವಿಮೆ ಖರೀದಿಸಿದರೂ ತೆರಿಗೆ ವಿನಾಯ್ತಿ ಸಿಗುತ್ತದೆ.

ಎಷ್ಟು ಹಣ ಹೂಡಿದ್ದೀರಿ, ತಿಳಿಸಿ
ಇಷ್ಟೆಲ್ಲದರ ಜೊತೆಗೆ ತೆರಿಗೆದಾರರು ಗಮನಿಸಲೇಬೇಕಾದ ಒಂದು ಸಂಗತಿಯಿದೆ. ಈ ವರ್ಷ ಜನವರಿಯಲ್ಲಿ ಕೇಂದ್ರಸರ್ಕಾರ ಸಹಜ್‌ ಅಥವಾ ಐಟಿಆರ್‌ ಪತ್ರಕವನ್ನು ಬಿಡುಗಡೆ ಮಾಡಿತ್ತು. ಅದನ್ನು ಈಗಲೂ ಹೂಡಿಕೆ ಮಾಡುವ ಆಸಕ್ತಿಯಿರುವ ವ್ಯಕ್ತಿಗಳಿಗಾಗಿ ಮತ್ತೂಮ್ಮೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಶೆಡ್ನೂಲ್‌ ಡಿಐ (ಡೀಟೇಲ್ಸ್‌ ಆಫ್ ಇನ್ವೆಸ್ಟ್‌ಮೆಂಟ್‌ -ಹೂಡಿಕೆಯ ವಿವರ) ಅನ್ನು ಸೇರಿಸಲಾಗಿದೆ. ಇದರಲ್ಲಿ ಏ.1ರಿಂದ ಜ.30ರೊಳಗಿನ ಅವಧಿಯಲ್ಲಿ ಎಷ್ಟು ಹೂಡಿಕೆ ಮಾಡಲಾಗಿದೆ ಎನ್ನುವುದನ್ನು ನಮೂದಿಸಬೇಕು. ಅದರಲ್ಲಿ ತೆರಿಗೆ ವಿನಾಯ್ತಿ ಸಿಗುವ ಎಲ್ಲ ಹೂಡಿಕೆಗಳ ಮಾಹಿತಿ ಇರಬೇಕಾಗುತ್ತದೆ.

5 ವರ್ಷ ಅವಧಿಯ ಅಂಚೆ ಠೇವಣಿ
ಐದು ವರ್ಷ ಅವಧಿಯ ನಿಗದಿತ ಠೇವಣಿಯನ್ನು, ನಿಮಗೆ ಸಮೀಪದಲ್ಲಿರುವ ಅಂಚೆ ಕಚೇರಿಯಲ್ಲಿ ಆರಂಭಿಸಬಹುದು. ಇದನ್ನು ಪಿಒಟಿಡಿ-ಪೋಸ್ಟ್‌ ಆಫಿಸ್‌ ಟರ್ಮ್ ಡೆಪಾಸಿಟ್‌ ಎನ್ನಲಾಗುತ್ತದೆ. 80ಸಿ ವಿಧಿಯ ಪ್ರಕಾರ ಇದಕ್ಕೆ ತೆರಿಗೆ ವಿನಾಯ್ತಿಯಿದೆ. ವಿಶೇಷವೆಂದರೆ ಈ ಖಾತೆಯನ್ನು ನೀವು ಎಲ್ಲಿಗೆ ಬೇಕಾದರೂ ವರ್ಗಾಯಿಸಿಕೊಳ್ಳಬಹುದು. ಹಾಗೆಯೇ ಕನಿಷ್ಠ 200 ರೂ.ವರೆಗೂ ಇಡಲು ಅವಕಾಶವಿದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವನ್ನು ಕಿರಿದಾಗಿ ಎನ್‌ಎಸ್‌ಸಿ ಎನ್ನಲಾಗುತ್ತದೆ. ಹೂಡಿಕೆಗಳ ಪೈಕಿಯೇ ಇದನ್ನು ಅತ್ಯಂತ ಸುಭದ್ರ ಎಂದು ತಜ್ಞರು ವರ್ಣಿಸುತ್ತಾರೆ. ಅಂಚೆ ಕಚೇರಿಗಳಲ್ಲಿ ನೀವು ಈ ಹೂಡಿಕೆ ಆರಂಭಿಸಬಹುದು. ವರ್ಷಕ್ಕೆ ನೀವು ಮಾಡಬೇಕಾದ ಕನಿಷ್ಠ ಹೂಡಿಕೆ 500 ರೂ. ಇಲ್ಲಿ ಗರಿಷ್ಠ ಎಷ್ಟು ಹಣವನ್ನಾದರೂ ಇಡಬಹುದು. ಒಟ್ಟು ಐದು ವರ್ಷ ಅವಧಿಯ ಈ ಹೂಡಿಕೆಯನ್ನು ಅವಧಿಗೆ ಮುಂಚೆ ಪಡೆಯಲು ಅವಕಾಶವಿಲ್ಲ. ಇದಕ್ಕೆ ಬರುವ ಬಡ್ಡಿ ಉಳಿತಾಯ ಖಾತೆಗಳು, ನಿಗದಿತ ಠೇವಣಿಗಳಿಗಿಂತ ಜಾಸ್ತಿ. ರಾಷ್ಟ್ರೀಯ ಪ್ರಮಾಣಪತ್ರ ಹೂಡಿಕೆಗೆ ವಾರ್ಷಿಕವಾಗಿ ಸರ್ಕಾರ ಶೇ.6.8ರಷ್ಟು ತೆರಿಗೆ ವಿನಾಯ್ತಿ ನೀಡುತ್ತದೆ. ಸಂದರ್ಭಕ್ಕೆ ತಕ್ಕಂತೆ ಸರ್ಕಾರ ಇದನ್ನು ಬದಲಿಸುತ್ತಿರುತ್ತದೆ.

ಟಾಪ್ ನ್ಯೂಸ್

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Will Dhoni play IPL next year too..?; What did Rayudu say?

IPL ಮುಂದಿನ ವರ್ಷವೂ ಧೋನಿ ಆಡುತ್ತಾರಾ..?; ರಾಯುಡು ಹೇಳಿದ್ದೇನು?

A person who voted for a BJP candidate eight times; The video went viral

Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್

Iranian President Ebrahim Raisi passed away in a helicopter crash

Ebrahim Raisi; ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದ ಇರಾನ್ ಅಧ್ಯಕ್ಷ ರೈಸಿ

To India’s youth get jobs, Modi should retire: Rahul Gandhi

Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ

ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Share Market Business: ಷೇರು ವಹಿವಾಟು-ದಕ್ಷಿಣ ಭಾರತ ಮಹಿಳೆಯರೇ  ಮುಂಚೂಣಿಯಲ್ಲಿದ್ದಾರೆ!

Share Market Business: ಷೇರು ವಹಿವಾಟು-ದಕ್ಷಿಣ ಭಾರತ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ!

Stock Market- 4ನೇ ಹಂತದ ಮತದಾನ: ಬಾಂಬೆ ಷೇರುಪೇಟೆ ಸೂಚ್ಯಂಕ 750 ಅಂಕ ಕುಸಿತ

Stock Market- 4ನೇ ಹಂತದ ಮತದಾನ: ಬಾಂಬೆ ಷೇರುಪೇಟೆ ಸೂಚ್ಯಂಕ 750 ಅಂಕ ಕುಸಿತ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Air India: ಪೈಲಟ್‌ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್‌ ಇಂಡಿಯಾ ವಿಮಾನ ಸಂಚಾರ ರದ್ದು

Rekha Jhunjhunwala lost Rs 800 crore in a single day!

Share Market; ರೇಖಾ ಜುಂಜುನ್‌ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

Will Dhoni play IPL next year too..?; What did Rayudu say?

IPL ಮುಂದಿನ ವರ್ಷವೂ ಧೋನಿ ಆಡುತ್ತಾರಾ..?; ರಾಯುಡು ಹೇಳಿದ್ದೇನು?

A person who voted for a BJP candidate eight times; The video went viral

Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್

Iranian President Ebrahim Raisi passed away in a helicopter crash

Ebrahim Raisi; ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದ ಇರಾನ್ ಅಧ್ಯಕ್ಷ ರೈಸಿ

To India’s youth get jobs, Modi should retire: Rahul Gandhi

Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.