ಹೊಸ ವಾಹನ ನೋಂದಣಿಯಲ್ಲಿ ತುಸು ಏರಿಕೆ

ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ

Team Udayavani, Jun 23, 2020, 6:11 AM IST

ಹೊಸ ವಾಹನ ನೋಂದಣಿಯಲ್ಲಿ ತುಸು ಏರಿಕೆ

ಉಡುಪಿ: ಸರಕಾರಕ್ಕೆ ಹೆಚ್ಚಿನ ಆದಾಯ (ರಾಜಸ್ವ) ತಂದುಕೊಡುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯಲ್ಲಿ ಲಾಕ್‌ಡೌನ್‌ ಬಳಿಕ ತುಸು ಏರಿಕೆಯಾಗಿದೆ. ಎಪ್ರಿಲ್‌ನಲ್ಲಿ ಕೇವಲ 137 ವಾಹನ ಗಳು ನೋಂದಣಿ ಆಗಿದ್ದರೆ ಮೇ ತಿಂಗಳಿನಲ್ಲಿ 915 ವಾಹನಗಳು ನೋಂದಣಿಯಾಗಿದ್ದವು. ಜೂನ್‌ನಲ್ಲಿ ಮತ್ತಷ್ಟು ಏರಿಕೆ ಕಂಡಿದ್ದು, ಹತ್ತು ದಿನದೊಳಗೆ 564 ವಾಹನಗಳು ನೋಂದಣಿಯಾಗಿವೆ.

ಶೇ. 44 ಗುರಿ ಸಾಧನೆ
ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯು ರಾಜಸ್ವ ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿತ್ತು. 2020-21ನೇ ಸಾಲಿನ ಎಪ್ರಿಲ್‌ನಲ್ಲಿ 19.06 ಲ.ರೂ. ಸಂಗ್ರಹವಾಗುವ ಮೂಲಕ ಶೇ. 1.64 ಹಾಗೂ ಮೇ ತಿಂಗಳಲ್ಲಿ 5.12 ಕೋ. ರೂ. ಸಂಗ್ರಹವಾಗುವ ಮೂಲಕ ಶೇ. 44 ಗುರಿ ಸಾಧಿಸಿದೆ. ಆದರೆ 2018-19 ಹಾಗೂ 2019-20ನೇ ಸಾಲಿನ ಎಪ್ರಿಲ್‌ನಲ್ಲಿ ಕ್ರಮವಾಗಿ 11.2 ಕೋ. ರೂ. ಹಾಗೂ 10.82 ಕೋ.ರೂ. ಸಂಗ್ರಹವಾಗುವ ಮೂಲಕ ಶೇ. 94ರಷ್ಟು ಗುರಿ ಸಾಧಿಸಿತ್ತು. ಈ ಬಾರಿ ಕೋವಿಡ್ ಲಾಕ್‌ಡೌನ್‌ದಿಂದಾಗಿ ಎರಡು ತಿಂಗಳಲ್ಲಿ ಹಿಂದಿನ ಗುರಿ ತಲುಪಲಾಗಲಿಲ್ಲ. ಹಾಗಾಗಿ 18 ಕೋ.ರೂ. ನಷ್ಟವಾಗಿದೆ. ಸಾರಿಗೆ ಕಚೇರಿಯಲ್ಲಿ ಮಾರ್ಚ್‌ ತಿಂಗಳಿನಲ್ಲಿ 1,387 ಮೋಟಾರು ಸೈಕಲ್‌, ಎಲ್‌ಎಂವಿ(ಲೈಟ್‌ ಮೋಟಾರ್‌ ವೆಹಿಕಲ್‌) 322, ತ್ರಿಚಕ್ರ ವಾಹನ 91, ಇತರ 152 ವಾಹನಗಳ ಸಹಿತ 1,952 ವಾಹನಗಳು ನೋಂದಣಿಯಾಗಿವೆ.

ಎಪ್ರಿಲ್‌ನಲ್ಲಿ 137 ಮೋಟಾರು ಸೈಕಲ್‌, ಎಲ್‌ಎಂವಿ 4, ತ್ರಿಚಕ್ರ ವಾಹನ 3, ಇತರ 11 ಸಹಿತ 155 ವಾಹನಗಳು, ಮೇ ನಲ್ಲಿ 915 ಮೋಟಾರು ಸೈಕಲ್‌, ಎಲ್‌ಎಂವಿ 184, ತ್ರಿಚಕ್ರ ವಾಹನ 30, ಇತರ 4 ಸಹಿತ 1,233 ವಾಹನಗಳು ಹಾಗೂ ಜೂನ್‌ (10ರ ವರೆಗೆ) ನಲ್ಲಿ 491 ಮೋಟಾರು ಸೈಕಲ್‌, ಎಲ್‌ಎಂವಿ 54, ತ್ರಿಚಕ್ರ ವಾಹನ 13, ಇತರ 6 ಸಹಿತ 564 ವಾಹನಗಳು ನೋಂದಣಿಯಾಗಿವೆ. 2019ರ ಎಪ್ರಿಲ್‌, ಮೇ, ಜೂನ್‌(10ರ ವರೆಗೆ) ಕ್ರಮವಾಗಿ 2,122 ಮತ್ತು
228, 565 ವಾಹನಗಳು ನೋಂದಣಿಯಾಗಿವೆ.

ಗುರಿ ಸಾಧನೆಗೆ ತೊಡಕು?
ಮೂರು ತಿಂಗಳುಗಳಿಂದ ವಾಹನಗಳ ನೋಂದಣಿ ಸಂಖ್ಯೆ ಕುಸಿತವಾಗುತ್ತಿರುವುದು ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯ ಗುರಿ ಸಂಗ್ರಹಣೆಗೆ ಹಿನ್ನಡೆಯಾಗುವ ಆತಂಕ ಎದುರಾಗಿದೆ. 2018- 19ರಲ್ಲಿ 140 ಕೋ. ರೂ. ಗುರಿ ನೀಡಿದ್ದು, ಅದರಲ್ಲಿ 135.11 ಕೋ. ರೂ. ಸಂಗ್ರಹಿಸಿದೆ. 2019-20ರಲ್ಲಿ 139.98 ಕೋ. ರೂ. ಗುರಿ ನೀಡಿದ್ದು, 123 ಕೋ.ರೂ. ಗುರಿ ಸಾಧಿಸಿದೆ. 2020-21ನೇ ಸಾಲಿನಲ್ಲಿ 140.4 ಕೋ.ರೂ. ಗುರಿ ನೀಡಲಾಗಿದೆ. ಎಪ್ರಿಲ್‌ನಿಂದ ಮೇ ಅಂತ್ಯಕ್ಕೆ 18 ಕೋ.ರೂ. ಸಂಗ್ರಹವಾಗಬೇಕಿತ್ತು. ಆದರೆ ಲಾಕ್‌ಡೌನ್‌ ಕಾಲದಲ್ಲಿ ಕೇವಲ 5.31 ಕೋ. ರೂ. ರಾಜಸ್ವ ಸಂಗ್ರಹವಾಗಿದೆ.

ಬಿಎಸ್‌4 ವಾಹನ ನೋಂದಣಿ ಸ್ಥಗಿತ
ಕೋವಿಡ್ ಲಾಕ್‌ಡೌನ್‌ನಿಂದಾಗಿ ವಾಹನಗಳ ನೋಂದಣಿ ಪ್ರಮಾಣ ಕುಸಿದಿದೆ. ಇನ್ನೊಂದೆಡೆ ಸರಕಾರದ ಆದೇಶದಂತೆ ಬಿಎಸ್‌ 4 ವಾಹನಗಳ ನೋಂದಣಿಯನ್ನು ನಿಲ್ಲಿಸಲಾಗಿದೆ.
-ರಾಮಕೃಷ್ಣ ,
ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ

ಟಾಪ್ ನ್ಯೂಸ್

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

1-qweewqe

Ayodhya; ‘ಮಂದಿರ-ಮಸೀದಿ’ಸಮಸ್ಯೆಯಲ್ಲ,ಅಭಿವೃದ್ಧಿ ಬಯಸುತ್ತೇವೆ ಎಂದ ಮುಸ್ಲಿಮರು

1-weweqwew

CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

1-qweeqw

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಉಭಯ ಜಿಲ್ಲೆಯಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ

ಉಭಯ ಜಿಲ್ಲೆಯಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Kapu ಟಿಪ್ಪರ್‌ಗೆ ಪಿಕಪ್‌ ಢಿಕ್ಕಿ: ಚಾಲಕ ಗಂಭೀರ

Kapu ಟಿಪ್ಪರ್‌ಗೆ ಪಿಕಪ್‌ ಢಿಕ್ಕಿ: ಚಾಲಕ ಗಂಭೀರ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-qweewqe

Ayodhya; ‘ಮಂದಿರ-ಮಸೀದಿ’ಸಮಸ್ಯೆಯಲ್ಲ,ಅಭಿವೃದ್ಧಿ ಬಯಸುತ್ತೇವೆ ಎಂದ ಮುಸ್ಲಿಮರು

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

1-weweqwew

CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ

1-qweqwe

Kushtagi: ಸಿಡಿಲಿಗೆ ಬಿತ್ತನೆ ಕಾರ್ಯ ನಿರತ ರೈತ ಬಲಿ

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.