ಡ್ರೆಜ್ಜರ್ನಲ್ಲಿ ತೈಲ ಸೋರಿಕೆಯಿಲ್ಲ: ಎನ್ಎಂಪಿಟಿ
ಕೆಟ್ಟು ಹೋದ ಭಗವತಿ ಪ್ರೇಮ್
Team Udayavani, Jul 7, 2020, 5:11 AM IST
ಸುರತ್ಕಲ್: ನವಮಂಗಳೂರು ಬಂದರಿನ ಹೂಳೆತ್ತಲು ಗುತ್ತಿಗೆ ಪಡೆದು ಬಂದಿದ್ದ ಮುಂಬಯಿಯ ಮಾರ್ಕೇಟರ್ ಲಿಮಿಟೆಡ್ನ ಭಗವತಿ ಪ್ರೇಮ್ ಡ್ರೆಜ್ಜರ್ ಕೆಟ್ಟು ಹೋದ ಪರಿಣಾಮ ಸುರತ್ಕಲ್ ಸಮೀಪದ ಗುಡ್ಡೆಕೊಪ್ಲದಲ್ಲಿ ಎನ್ಎಂಪಿಟಿ ಲಂಗರು ಹಾಕಿಸಿದ್ದು ಯಾವುದೇ ರೀತಿಯ ತೈಲ ಸೋರಿಕೆ ಆಗುತ್ತಿಲ್ಲ ಎಂದು ಮಂಡಳಿ ತಿಳಿಸಿದೆ.
ಮುಳುಗುವ ಸ್ಥಿತಿಯಲ್ಲಿದ್ದ ಈ ಡ್ರೆಜ್ಜರನ್ನು ಎನ್ಎಂಪಿಟಿ ಸಮುದ್ರ ಮಾಲಿನ್ಯವಾಗದಂತೆ ಎಲ್ಲ ಮುಂಜಾ ಗ್ರತಾ ಕ್ರಮ ಕೈಗೊಂಡಿತ್ತು. ಅದರಲ್ಲಿದ್ದ ಸಿಬಂದಿಯನ್ನು ರಕ್ಷಿಸಿ ಕಳೆದ ಡಿಸೆಂಬರ್ನಲ್ಲಿ ಅದರಲ್ಲಿದ್ದ ತೈಲ, ಕೀಲೆಣ್ಣೆಗಳನ್ನು ಅತ್ಯಾಧುನಿಕ ವ್ಯವಸ್ಥೆ ಬಳಸಿ ತೆಗೆಯಲಾಗಿತ್ತು. ಇದರ ನಿಗಾ ಕ್ಕಾಗಿ ಅಧಿ ಕಾರಿಗಳನ್ನು ನಿಯೋಜಿ ಸಲಾಗಿತ್ತು. ಬಂದರಿನ ಶುಲ್ಕ ಪಾವತಿಸಲು ವಿಫಲವಾದ ಬಳಿಕ ಬಂದರು ಮಂಡಳಿ ಇದನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಮುಂದಾಗಿದೆ. ಕಳೆದ ಜೂನ್ ತಿಂಗಳಲ್ಲಿ ಡ್ರೆಜ್ಜರ್ ವಾಲುತ್ತಿದ್ದು ಸಮುದ್ರ ಮಾಲಿನ್ಯದ ಭೀತಿಯಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದು ಮಂಡಳಿ ತಿಳಿಸಿದೆ.
ಕಳೆದ ಅ.28ರಂದು ಅರಬ್ಬಿ ಸಮುದ್ರದಲ್ಲಿ ಕ್ಯಾರ್ ಚಂಡ ಮಾರುತ ಉಂಟಾದಾಗ ಭಾರೀ ಅಲೆಗಳ ಹೊಡೆತಕ್ಕೆ ಚುಕ್ಕಾಣಿ ಮುರಿದು ಮುಳುಗುವ ಸಂದರ್ಭ ಎದುರಾದಾಗ ಅದರಲ್ಲಿದ್ದ 15ಕ್ಕೂ ಮಿಕ್ಕಿ ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಬಳಿಕ ಗುಡ್ಡೆಕೊಪ್ಲ ಬಳಿ ತಂದಿರಿಸಲಾಗಿತ್ತು. ಇದೀಗ ಈ ಡ್ರೆಜ್ಜರ್ ಮರಳಲ್ಲಿ ಹೂತು ಹೋಗಿದ್ದು ಮೇಲೆತ್ತಲು ಭಾರೀ ವೆಚ್ಚವಾಗಲಿದೆ. ಹೀಗಾಗಿ ಇದ್ದ ಜಾಗದಲ್ಲಿಯೇ ಒಡೆಯುವ ಇಲ್ಲವೆ ಸ್ಥಳಾಂತರ ಮಾಡುವ ಎರಡೇ ಆಯ್ಕೆ ಬಂದರು ಮುಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು
Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ
Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು
Fake CBI ಅಧಿಕಾರಿಗಳ ಬಲೆಯಿಂದ ಸಂಗೀತ ಕಲಾವಿದ ಪಾರು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ
Chhattisgarh; ನಿಲ್ಲದ ನಕ್ಸಲ್ ಬೇಟೆ: ಓರ್ವನ ಹತ್ಯೆ