ಜೀವನೋಪಾಯ, ಹವ್ಯಾಸಕ್ಕಾಗಿ ಹೊಳೆ -ಸಮುದ್ರ ತೀರದಲ್ಲಿ ನಡೆಯುತ್ತಿದೆ ಮೀನಿಗೆ ಗಾಳ


Team Udayavani, Jul 10, 2020, 5:56 AM IST

ಜೀವನೋಪಾಯ, ಹವ್ಯಾಸಕ್ಕಾಗಿ ಹೊಳೆ -ಸಮುದ್ರ ತೀರದಲ್ಲಿ ನಡೆಯುತ್ತಿದೆ ಮೀನಿಗೆ ಗಾಳ

ಮಲ್ಪೆ: ಮಳೆಗಾಲ ಬಂತೆಂದರೆ ಸಾಕು ಹೊಳೆಮೀನು, ಗಾಳದ ಮೀನಿಗೆ ಭಾರೀ ಬೇಡಿಕೆ.ಇದೀಗ ಮಳೆಗಾಲದ ಯಾಂತ್ರಿಕ ಮೀನುಗಾರಿಕೆ ನಿಷೇಧ ಸಂದರ್ಭದಲ್ಲಿ ಮೀನು ಪ್ರಿಯರಿಂದ ಹೊಳೆ, ಸಮುದ್ರದಲ್ಲಿ ಗಾಳ ಹಾಕಿ ಮೀನು ಹಿಡಿಯುವುದು, ಗದ್ದೆ ತೋಡುಗಳಲ್ಲಿ ಉಬೇರ್‌ ಮೀನು ಹಿಡಿಯುವ ಹವ್ಯಾಸ ಮುಂದುವರೆದಿದೆ.

ಕೆಲವರು ಹವ್ಯಾಸಕ್ಕಾಗಿ ಗಾಳ ಹಾಕಿದರೆ ಇನ್ನು ಕೆಲವರು ಜೀವನೋಪಯಕ್ಕಾಗಿ ಗಾಳ ಹಾಕಿ ಮೀನು ಹಿಡಿದು ಮಾರಾಟ ಮಾಡುವುದುದನ್ನು ಕಾಣಬಹುದಾಗಿದೆ.

ಸಮುದ್ರದ ತಾಜಾ ಮೀನು ಸಿಗದ ಕಾರಣ ಬಹುತೇಕ ಮಂದಿ ಹೊಳೆ ಬದಿ ಯಲ್ಲಿ ಸೇತುವೆ ಮೇಲಾºಗದಲ್ಲಿ ನಿಂತು ಗಾಳ ಹಾಕುವವರು ಕಾಣ ಸಿಗುತ್ತಾರೆ. ಗಾಳಕ್ಕೆ ಮೀನು ಸಿಕ್ಕಿಕೊಂಡಾಗ ಆಗುವ ಖುಷಿ ಅಷ್ಟಿಷ್ಟಲ್ಲ. ಮೀನು ತಿನ್ನುವುದಕ್ಕಿಂತ ಹಿಡಿ ಯು ವುದು ಒಂದು ಮನರಂಜನೆ ನೀಡು ತ್ತದೆ. ನಾನಾ ತರದ ಗಾಳದಲ್ಲಿ ಬಗೆ ಬಗೆಯ ಮೀನು ಹಿಡಿಯಲಾಗುತ್ತದೆ. ಅದ ರಲ್ಲೂ ನಗರ ಪ್ರದೇಶದ ಮಂದಿಗೆ ಗಾಳ ಹಾಕಿ ಮೀನು ಹಿಡಿಯುವಲ್ಲಿ ಆಸಕ್ತಿ ಹೆಚ್ಚು.

ಇಲ್ಲಿ ವರ್ಷದ 365 ದಿನವೂ ಗಾಳ
ಮಲ್ಪೆ ಬಂದರು ಸಮೀಪದ ಸೀ-ವಾಕ್‌ ಬಳಿಯಲ್ಲಿ ವರ್ಷದ 365ದಿನವೂ ಗಾಳ ಹಾಕಿ ಮೀನು ಹಿಡಿಯುವ ಬಹಳಷ್ಟು ಮಂದಿ ಕಾಣಸಿಗುತ್ತಾರೆ. ಗುಂಪು ಗುಂಪಾಗಿ ಸಮುದ್ರ ತಡಿಯಲ್ಲಿ ಗಾಳ ಹಾಕಿ ಮೀನು ಹಿಡಿಲೆಂದು ಇಲ್ಲಿಗೆ ಬಂದು ಸೇರುತ್ತಾರೆ. ಹಿಂದೆ ಕೈ ಗಾಳದಲ್ಲಿ ಮಾತ್ರ ಮೀನು ಹಿಡಿಯಲಾಗುತ್ತಿದ್ದು ಇದೀಗ ಆಧುನಿಕ ಸಲಕರಣೆಗಳು ಬಂದಿವೆ.

ಪರಿಣಿತರಿಂದ ಗಾಳ
ಗಾಳದಲ್ಲಿ ಸಾಕಷ್ಟು ಪರಿಣತೆಯನ್ನು ಹೊಂದಿದ ನಾಗೇಶ್‌ ಕುಮಾರ್‌ ಉದ್ಯಾವರ, ಸೂರ್ಯ ಕೊಳ, ಪ್ರಶಾಂತ್‌ ಮಲ್ಪೆ, ಅಭಿಕೊಳ, ಅಶ್ರಫ್‌ ಮಲ್ಪೆ, ಬಸಂತ್‌ ಕುಮಾರ್‌, ಕಾಂತರಾಜ್‌, ಸಂದೀಪ್‌ ಕುಂದರ್‌ ಅವರುಗಳು ಕಳೆದ ಕೆಲವು ವರ್ಷಗಳಿಂದ ಸೀ ವಾಕ್‌ ಸಮೀಪದ ಕಲ್ಲಿನಲ್ಲಿ ಆಧುನಿಕ ಸಲಕರಣೆಯನ್ನು (ಸ್ಪಿನ್ನಿಂಗ್‌ ಸ್ಟಿಕ್‌) ಬಳಸಿಕೊಂಡು ಗಾಳ ಹಾಕುತ್ತಾರೆ. 6ರಿಂದ 20ಕೆ.ಜಿ. ತೂಕದ ಕೆಂಬೆರಿ, ಮುರು ಮೀನು, ಕುಲೇಜ್‌, ಆಂಬಾಯಿ, ಕೋಂದೊಲು ಮೀನುಗಳನ್ನು ಹಿಡಿಯುತ್ತಾರೆ. ಕೈ-ಗಾಳದಲ್ಲಿ ಕಂಡಿಗೆ, ಕಲ್ಲರ್‌, ಬರಾಯಿ, ಕೊಕ್ಕರ್‌, ಬಯ್ಯ, ನಂಗ್‌ ಮೀನುಗಳನ್ನು ಹಿಡಿಯಲಾಗುತ್ತದೆ.

ಎಲ್ಲ ಸಮಯದಲ್ಲಿ ಗಾಳಕ್ಕೆ ಮೀನು ಹಿಡಿಯುವುದಿಲ್ಲ. ನೀರಿನ ಇಳಿತ ಭರತವನ್ನು ಅವಲಂಬಿಸಿರುತ್ತದೆ. ನೀರು ಇಳಿತದಿಂದ ಭರತವಾಗುವಾಗ ಮತ್ತು ಭರತದಿಂದ ಇಳಿತವಾಗುವ ಸಮಯದಲ್ಲಿ ಮೀನುಗಳು ಆಹಾರ ಅರಸುತ್ತಾ ದಂಡೆ ಬಳಿ ಬರುತ್ತದೆ. ಈ ಸಮಯದಲ್ಲಿ ಹೆಚ್ಚು ಮೀನು ಗಾಳಕ್ಕೆ ಬೀಳುತ್ತದೆ. ನೀರು ಬಿಸಿಯಾಗಿದ್ದರೆ ಉತ್ತಮ ತಣ್ಣಗಿದ್ದರೆ ಮೀನು ಹತ್ತಿರ ಬರುವುದಿಲ್ಲ ಎನ್ನುತ್ತಾರೆ ಗಾಳದ ಅನುಭವಿ ದಯಾನಂದ ಅವರು.

ಉಬೇರ್‌ ಮೀನುಗಳ ಬೇಟೆ
ಇನ್ನು ಮಳೆ ನೀರು ಮೇಲೇರಿ ಬರುತ್ತಿದ್ದಂತೆ ಗದ್ದೆ , ತೋಡು, ಹೊಳೆಸಾಲು ಭಾಗದಲ್ಲಿ ಮೀನುಗಳು ಇರುವುದು ಗಮನಕ್ಕೆ ಬಂದಾಗ ಮೀನು ಪ್ರಿಯರ ತಂಡ ಶಿಕಾರಿಗೆ ಮುಂದಾಗುತ್ತಾರೆ. ಈ ವೇಳೆ ಉಬೇರ್‌ ಮೀನುಗಳು ಜಾಡು ಹಿಡಿದು ಮೇಲೇರಿ ಬರುತ್ತವೆ. ಹೊಳೆ ತೀರದ ಗದ್ದೆಗಳಲ್ಲಿ , ತೋಡು ಗಳಲ್ಲಿ ಮೀನು ಹಿಡಿಯಲು ಹಗಲು ರಾತ್ರಿ ಎನ್ನದೆ ಬಲೆ ಕತ್ತಿ ಹಿಡಿದು ಅಲೆದಾಡುತ್ತಾರೆ. ನೀರಿನ ಅಡಿಯಲ್ಲಿ ವೇಗವಾಗಿ ಚಲಿಸುವ ವಿವಿಧ ಜಾತಿಯ ಮೀನನ್ನು ನೋಟವಿಟ್ಟು ಕಡಿಯುವುದು ರೋಮಾಂಚಕ ಅನುಭವ ಮುಗುಡು, ಕಿಜನ್‌, ಚೀಂಕಡೆ, ಮಾಲಯಿ, ಕಂಡಿಗೆ ಬಯ್ಯ ಮೀನುಗಳು ಸಿಗುತ್ತವೆ.

ಟಾಪ್ ನ್ಯೂಸ್

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.