ಕೋವಿಡ್ ಆರ್ಭಟ ಮುಂದುವರಿಕೆ
Team Udayavani, Jul 19, 2020, 1:18 PM IST
ರಾಯಚೂರು: ಜಿಲ್ಲೆಯಲ್ಲಿ ಶನಿವಾರ 16 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 964ಕ್ಕೆ ತಲುಪಿದೆ.
ರಾಯಚೂರು ಮತ್ತು ಸಿಂಧನೂರಿನಲ್ಲಿ ವೈರಸ್ ಹರಡುವಿಕೆ ಮುಂದುವರಿದಿದ್ದು, 15 ಪ್ರಕರಣಗಳು ಅಲ್ಲಿಂದಲೇ ದೃಢಪಟ್ಟಿವೆ. ನಗರದಲ್ಲಿ 9 ಪಾಸಿಟಿವ್ ಪ್ರಕರಣದೃಢಪಟ್ಟರೆ, ಆರು ಪ್ರಕರಣ ಸಿಂಧನೂರಿನಲ್ಲಿ ದೃಢಪಟ್ಟಿವೆ. ಒಂದು ಸಿರವಾರ ಪಟ್ಟಣದಲ್ಲಿ ದೃಢಪಟ್ಟಿದೆ. ಅದರಲ್ಲೂ 15 ಪುರುಷರಿಗೆ ಸೋಂಕು ತಗುಲಿದರೆ, ಒಬ್ಬ ಮಹಿಳೆಗೆ ಸೋಂಕು ವಕ್ಕರಿಸಿದೆ. 9 ಪ್ರಕರಣಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದ್ದರೆ, ಆರು ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಹರಡಿವೆ. ಇನ್ನೊಂದು ಐಎಲ್ಐ ಪ್ರಕರಣವಾಗಿದೆ. ಎಲ್ಲರನ್ನು ಒಪೆಕ್ನ ಐಸೊಲೇಶನ್ ವಾರ್ಡ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಾದರಿ ಸಂಗ್ರಹಿಸದ ಆರೋಪ: ಮಾಣಿಕ್ ನಗರದ ಮಾಜಿ ಸೈನಿಕರೊಬ್ಬರು ಮೃತಪಟ್ಟಿದ್ದು, ಅವರಿಗೆ ಕೋವಿಡ್ ಪಾಸಿಟಿವ್ ಇದೆ ಎಂಬ ಕಾರಣಕ್ಕಾಗಿ ಶವವನ್ನು ಮನೆಯವರಿಗೆ ಕೊಡದೆ ಶವಸಂಸ್ಕಾರ ಮಾಡಲಾಗಿತ್ತು. ಆದರೆ, ಇವರ ಮನೆಯವರು ಈ ವಿಷಯ ತಿಳಿಯುತ್ತಿದ್ದಂತೆ ಸ್ವ ಇಚ್ಛೆಯಿಂದ ಕ್ವಾರೆಂಟೈನ್ಗೆ ಒಳಗಾಗಿದ್ದಾರೆ. ಆದರೂ ಆರೊಗ್ಯ ಇಲಾಖೆ ಸಿಬ್ಬಂದಿ ಈ ಮನೆಯವರ ಮಾದರಿ ಸಂಗ್ರಹಿಸಿಲ್ಲ. ಮನೆಯವರೇ ತಪಾಸಣೆ ಮಾಡುವಂತೆ ಕೇಳುತ್ತಿದ್ದರೂ ಸ್ಪಂದಿಸಿಲ್ಲ ಎಂದು ಕುಟುಂಬ ಸದಸ್ಯರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ